<p>ಅಶ್ವಿನಿ ಪುನೀತ್ ರಾಜ್ಕುಮಾರ್ ಅವರ ಪಿಆರ್ಕೆ ಅಡಿಯಲ್ಲಿ ನಿರ್ಮಾಣವಾಗಿರುವ, ದೇವರಾಜ್ ಪೂಜಾರಿ ಕಥೆ ಬರೆದು ನಿರ್ದೇಶಿಸಿರುವ‘ಮಾರಿಗಲ್ಲು’ ವೆಬ್ ಸರಣಿಯ ಜಿ5 ನಲ್ಲಿ ಬಿಡುಗಡೆಯಾಗಿದೆ. </p><p>ಈ ಸರಣಿಯಲ್ಲಿ 7 ಸಂಚಿಕೆಗಳಿವೆ. ಮೊದಲ ಸಂಚಿಕೆಯನ್ನು ಉಚಿತವಾಗಿ ನೋಡಬಹುದಾಗಿದ್ದು ಉಳಿದ ಸಂಚಿಕೆ ನೊಡಬೇಕೆಂದರೆ ಜಿ5 ಚಂದಾದಾರಿಕೆ ಪಡೆಯಬೇಕಿದೆ.</p><p>‘ಮಾರಿಗಲ್ಲು’ ಮೊದಲ ಸಂಚಿಕೆಗೆ ಪ್ರೇಕ್ಷಕರು ಸಾಮಾಜಿಕ ಮಾಧ್ಯಮದಲ್ಲಿ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. </p><p>ಮಾರಿಗಲ್ಲು ಮೂಲಕ ನಟ ರಂಗಾಯಣ ರಘು ಅವರು ವೆಬ್ಸರಣಿ ಲೋಕಕ್ಕೆ ಮೊದಲ ಹೆಜ್ಜೆ ಇಡಲಿದ್ದಾರೆ. ರಂಗಭೂಮಿ, ಕಿರುತೆರೆ, ಬೆಳ್ಳಿತೆರೆಯಲ್ಲಿ ಮಿಂಚಿರುವ ರಘು ಮೊದಲ ಬಾರಿ ವೆಬ್ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ.</p>.ರಾಜ್ಯೋತ್ಸವ ಪ್ರಶಸ್ತಿ: ಸಂತಸ ವ್ಯಕ್ತಪಡಿಸಿದ ನಟ ಪ್ರಕಾಶ್ ರಾಜ್.<p><strong>ಮಾರಿಗಲ್ಲು' ಕಥೆಯೇನು?</strong> ಕಾದಂಬರಿ ಸಿರಿ ಸಂಪತ್ತು ಹುಡುಕಿದರೆ ಮತ್ತೆ ಸಿಗಬಹುದೇ ಎನ್ನುವ ಪ್ರಶ್ನೆಯನ್ನೆತ್ತುತ್ತಾ ಈ ಸರಣಿ ಆರಂಭವಾಗುತ್ತದೆ. 4ನೇ ಶತಮಾನದ ಕದಂಬರ ಆಳ್ವಿಕೆಯ ಕಾಲದ ಹಿನ್ನೆಲೆಯಲ್ಲಿ ಕಥೆ ಇದರಲ್ಲಿ ಇದೆ. 1990ರ ಕಾಲಘಟ್ಟದಲ್ಲಿ ಕದಂಬರ ಕಾಲದ ನಿಧಿ ಹುಡುಕಲು ಹೊರಟ ಶಿರಸಿಯ ಹುಡುಗರ ಸುತ್ತ ಕಥೆ ಸಾಗುತ್ತದೆ. ಶಿರಸಿಯ ಪ್ರಖ್ಯಾತ ಬೇಡರ ವೇಷವನ್ನೂ ಈ ಸರಣಿಯಲ್ಲಿ ಕಾಣಬಹುದು. ಶಿರಸಿ ಬಳಿಯ ಮಾರಿಗಲ್ಲು ಎಂಬ ಕಾಲ್ಪನಿಕ ಹಳ್ಳಿಯೊಂದರಲ್ಲಿ ನಡೆದ ಕಥೆಯನ್ನು ಸರಣಿಯಲ್ಲಿ ಕಟ್ಟಿಕೊಡಲಾಗಿದೆ. </p><p>ಗೋಪಾಲ್ ಕೃಷ್ಣ ದೇಶಪಾಂಡೆ,ರಂಗಾಯಣ ರಘು, ಪ್ರಶಾಂತ್ ಸಿದ್ದಿ, ಪ್ರವೀಣ್ ತೇಜ್, ಹಾಗೂ ಡ್ರಾಮಾ ಜೂನಿಯರ್ಸ್ ಖ್ಯಾತಿಯ ಎಎಸ್ ಸೂರಜ್, ನಟಿಸಿದ್ದಾರೆ. ಈ ವೆಬ್ ಸರಣಿಯ ಟ್ರೇಲರ್ ಮೆಚ್ಚಿಕೊಂಡ ಪ್ರೇಕ್ಷಕರು ಸಂಚಿಕೆ ಕಡೆ ಹೆಚ್ಚು ಒಲವು ತೋರುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಶ್ವಿನಿ ಪುನೀತ್ ರಾಜ್ಕುಮಾರ್ ಅವರ ಪಿಆರ್ಕೆ ಅಡಿಯಲ್ಲಿ ನಿರ್ಮಾಣವಾಗಿರುವ, ದೇವರಾಜ್ ಪೂಜಾರಿ ಕಥೆ ಬರೆದು ನಿರ್ದೇಶಿಸಿರುವ‘ಮಾರಿಗಲ್ಲು’ ವೆಬ್ ಸರಣಿಯ ಜಿ5 ನಲ್ಲಿ ಬಿಡುಗಡೆಯಾಗಿದೆ. </p><p>ಈ ಸರಣಿಯಲ್ಲಿ 7 ಸಂಚಿಕೆಗಳಿವೆ. ಮೊದಲ ಸಂಚಿಕೆಯನ್ನು ಉಚಿತವಾಗಿ ನೋಡಬಹುದಾಗಿದ್ದು ಉಳಿದ ಸಂಚಿಕೆ ನೊಡಬೇಕೆಂದರೆ ಜಿ5 ಚಂದಾದಾರಿಕೆ ಪಡೆಯಬೇಕಿದೆ.</p><p>‘ಮಾರಿಗಲ್ಲು’ ಮೊದಲ ಸಂಚಿಕೆಗೆ ಪ್ರೇಕ್ಷಕರು ಸಾಮಾಜಿಕ ಮಾಧ್ಯಮದಲ್ಲಿ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. </p><p>ಮಾರಿಗಲ್ಲು ಮೂಲಕ ನಟ ರಂಗಾಯಣ ರಘು ಅವರು ವೆಬ್ಸರಣಿ ಲೋಕಕ್ಕೆ ಮೊದಲ ಹೆಜ್ಜೆ ಇಡಲಿದ್ದಾರೆ. ರಂಗಭೂಮಿ, ಕಿರುತೆರೆ, ಬೆಳ್ಳಿತೆರೆಯಲ್ಲಿ ಮಿಂಚಿರುವ ರಘು ಮೊದಲ ಬಾರಿ ವೆಬ್ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ.</p>.ರಾಜ್ಯೋತ್ಸವ ಪ್ರಶಸ್ತಿ: ಸಂತಸ ವ್ಯಕ್ತಪಡಿಸಿದ ನಟ ಪ್ರಕಾಶ್ ರಾಜ್.<p><strong>ಮಾರಿಗಲ್ಲು' ಕಥೆಯೇನು?</strong> ಕಾದಂಬರಿ ಸಿರಿ ಸಂಪತ್ತು ಹುಡುಕಿದರೆ ಮತ್ತೆ ಸಿಗಬಹುದೇ ಎನ್ನುವ ಪ್ರಶ್ನೆಯನ್ನೆತ್ತುತ್ತಾ ಈ ಸರಣಿ ಆರಂಭವಾಗುತ್ತದೆ. 4ನೇ ಶತಮಾನದ ಕದಂಬರ ಆಳ್ವಿಕೆಯ ಕಾಲದ ಹಿನ್ನೆಲೆಯಲ್ಲಿ ಕಥೆ ಇದರಲ್ಲಿ ಇದೆ. 1990ರ ಕಾಲಘಟ್ಟದಲ್ಲಿ ಕದಂಬರ ಕಾಲದ ನಿಧಿ ಹುಡುಕಲು ಹೊರಟ ಶಿರಸಿಯ ಹುಡುಗರ ಸುತ್ತ ಕಥೆ ಸಾಗುತ್ತದೆ. ಶಿರಸಿಯ ಪ್ರಖ್ಯಾತ ಬೇಡರ ವೇಷವನ್ನೂ ಈ ಸರಣಿಯಲ್ಲಿ ಕಾಣಬಹುದು. ಶಿರಸಿ ಬಳಿಯ ಮಾರಿಗಲ್ಲು ಎಂಬ ಕಾಲ್ಪನಿಕ ಹಳ್ಳಿಯೊಂದರಲ್ಲಿ ನಡೆದ ಕಥೆಯನ್ನು ಸರಣಿಯಲ್ಲಿ ಕಟ್ಟಿಕೊಡಲಾಗಿದೆ. </p><p>ಗೋಪಾಲ್ ಕೃಷ್ಣ ದೇಶಪಾಂಡೆ,ರಂಗಾಯಣ ರಘು, ಪ್ರಶಾಂತ್ ಸಿದ್ದಿ, ಪ್ರವೀಣ್ ತೇಜ್, ಹಾಗೂ ಡ್ರಾಮಾ ಜೂನಿಯರ್ಸ್ ಖ್ಯಾತಿಯ ಎಎಸ್ ಸೂರಜ್, ನಟಿಸಿದ್ದಾರೆ. ಈ ವೆಬ್ ಸರಣಿಯ ಟ್ರೇಲರ್ ಮೆಚ್ಚಿಕೊಂಡ ಪ್ರೇಕ್ಷಕರು ಸಂಚಿಕೆ ಕಡೆ ಹೆಚ್ಚು ಒಲವು ತೋರುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>