ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಜನಿಕಾಂತ್‌ಗೆ ಬೇಸರ ತಂದ ಐಶ್ವರ್ಯ–ಧನುಷ್ ವಿಚ್ಛೇದನ

Last Updated 27 ಜನವರಿ 2022, 9:54 IST
ಅಕ್ಷರ ಗಾತ್ರ

ಬೆಂಗಳೂರು: ಸೂಪರ್‌ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯ ಮತ್ತು ನಟ ಧನುಷ್ ಮದುವೆ ವಿಚ್ಛೇದನದಲ್ಲಿ ಅಂತ್ಯಗೊಂಡಿದೆ. ಮದುವೆಯಾಗಿ 18 ವರ್ಷಗಳ ಬಳಿಕ ಈ ಜೋಡಿ ಬೇರೆಯಾಗಿದ್ದಾರೆ.

ಆದರೆ ಈ ವಿಚಾರ ಐಶ್ವರ್ಯ ಅವರ ತಂದೆ, ಚಿತ್ರರಂಗದಲ್ಲಿ ಸೂಪರ್‌ಸ್ಟಾರ್ ಎಂದೇ ಗುರುತಿಸಲ್ಪಡುವ ರಜನಿಕಾಂತ್ ಅವರಿಗೆ ತೀವ್ರ ಬೇಸರ ತರಿಸಿದೆ.

ಪುತ್ರಿಯ ವಿಚ್ಛೇದನವನ್ನು ರಜನಿಕಾಂತ್ ಅವರಿಗೆ ಸಹಿಸಲಾಗುತ್ತಿಲ್ಲ. ಹೀಗಾಗಿ ಅವರು ಚಿಂತೆಗೊಳಗಾಗಿದ್ದಾರೆ ಎಂದು ವಿಯೊನ್ ವರದಿ ಮಾಡಿದೆ.

ಅಲ್ಲದೆ, ಇದು ತಾತ್ಕಾಲಿಕವಾಗಿದ್ದು, ಇಬ್ಬರೂ ಮತ್ತೆ ಒಂದಾಗಲಿ ಎಂದು ರಜನಿಕಾಂತ್ ಬಯಸಿದ್ದಾರೆ. ಅದಕ್ಕಾಗಿ ಎರಡೂ ಕುಟುಂಬಗಳು, ಐಶ್ವರ್ಯ–ಧನುಷ್ ದಂಪತಿ ಮತ್ತೆ ಒಂದಾಗುವಂತೆ ಮಾಡಲು ಪ್ರಯತ್ನ ಮುಂದುವರಿಸಿದ್ದಾರೆ ಎಂದು ಮೂಲಗಳನ್ನು ಆಧರಿಸಿ ವಿಯೊನ್ ಹೇಳಿದೆ.

ಜನವರಿ 17ರಂದು ನಟ ಧನುಷ್ ಮತ್ತು ಐಶ್ವರ್ಯ, ತಾವಿಬ್ಬರೂ ಪರಸ್ಪರ ಬೇರೆಬೇರೆಯಾಗುತ್ತಿರುವುದಾಗಿ ಸಾಮಾಜಿಕ ತಾಣದ ಮೂಲಕ ಘೋಷಿಸಿದ್ದರು. 2004 ರಲ್ಲಿ ಈ ಜೋಡಿ ಮದುವೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT