ಸೈಮಾ–2023ರ ವೇದಿಕೆಯಲ್ಲಿ ಜೂನಿಯರ್ ಎನ್ಟಿಆರ್ ಹಾಗೂ ರಿಷಬ್ ಶೆಟ್ಟಿ ಇಬ್ಬರು ಕನ್ನಡದಲ್ಲಿಯೇ ಮಾತನಾಡುವ ಮೂಲಕ ಪರಸ್ಪರ ಅಭಿನಂದನೆಯನ್ನು ವ್ಯಕ್ತಪಡಿಸಿಕೊಂಡಿದ್ದಾರೆ. ‘ನಮ್ಮ ಅಮ್ಮ ಅವರದ್ದು ಕುಂದಾಪುರ ಹಾಗಾಗಿ ಕನ್ನಡ ಸ್ಪಲ್ವ ಮಾತನಾಡಲು ಬರುತ್ತದೆ. ಅಮ್ಮ ಚೆನ್ನಾಗಿ ಕನ್ನಡ ಮಾತನಾಡುತ್ತಾರೆ‘ ಎಂದು ಜೂನಿಯರ್ ಎನ್ಟಿಆರ್ ಹೇಳಿದರೆ, ‘ನೀವು ಹೈದರಾಬಾದ್ನವರು ಅನ್ನಿಸುವುದಿಲ್ಲ... ನಮ್ಮವರೇ ಎನಿಸುತ್ತಿರಿ‘ ಎಂದು ರಿಷಬ್ ಶೆಟ್ಟಿ ತಿಳಿಸಿರುವ ದೃಶ್ಯಗಳು ವಿಡಿಯೊದಲ್ಲಿದೆ.