ಈ ಹಿಂದೆ ಗೌತಮ್ ಮೆನನ್ ನಿರ್ದೇಶನದ ‘ವರನಂ ಆಯಿರಂ’ ಹಾಗೂ ವಿಕ್ರಮ್ ಕುಮಾರ್ ಅವರ ‘24’ ಸಿನಿಮಾದಲ್ಲಿ ನಟ ಸೂರ್ಯ ಅವರು ತಂದೆ– ಮಗನ ದ್ವಿಪಾತ್ರ ಮಾಡಿದ್ದರು. ಈ ಹೊಸ ಚಿತ್ರ 2017ರಲ್ಲಿ ಪ್ರಕಟವಾದ ಸಿ.ಎಸ್. ಚೆಲ್ಲಪ್ಪ ಅವರ ಜನಪ್ರಿಯ ತಮಿಳು ಕಾದಂಬರಿ ‘ವಾಡಿ ವಾಸಲ್’ ಆಧರಿಸಿದೆ ಎನ್ನಲಾಗಿದೆ. ನಿರ್ದೇಶಕ ವೆಟ್ರಿಮಾರನ್, ಸಿನಿಮಾ ನಿರ್ಮಾಣಕ್ಕಾಗಿ ಕಾದಂಬರಿಕಾರರಿಂದ ಹಕ್ಕನ್ನು ಪಡೆದುಕೊಂಡಿದ್ದಾರೆ. ಇದು ತಮಿಳುನಾಡಿನ ಜನಪ್ರಿಯರಾಗಿರುವ ಜಲ್ಲಿಕಟ್ಟು ಕುರಿತಾದ ಕತೆಯಾಗಿದೆ.