<p>ಬಹುಭಾಷಾ ನಟಿ ವರಲಕ್ಷ್ಮಿ ಶರತ್ ಕುಮಾರ್ ನಟಿಸಿರುವ ತಮಿಳಿನ ‘ಡ್ಯಾನಿ’ ಸಿನಿಮಾ ಇದೇ ಆಗಸ್ಟ್ 1ರಂದು ಓಟಿಟಿ ವೇದಿಕೆಯಲ್ಲಿ ನೇರ ಬಿಡುಗಡೆಯಾಗುತ್ತಿದೆ. ಕೊರೊನಾ ಲಾಕ್ಡೌನ್ನಿಂದಾಗಿ ಚಿತ್ರಮಂದಿರಗಳ ಬಾಗಿಲು ಬಂದ್ ಆಗಿರುವುದರಿಂದ ಸಿನಿಮಾ ಬಿಡುಗಡೆಗೆ ನಿರ್ಮಾಪಕರು ಪರ್ಯಾಯ ಮಾರ್ಗಗಳ ಮೊರೆ ಹೋಗಿರುವುದು ಹೊಸ ಸಂಗತಿ ಏನಲ್ಲ.</p>.<p>ಜೀ5 ಓಟಿಟಿ ವೇದಿಕೆಯಲ್ಲಿ 'ಡ್ಯಾನಿ’ ಚಿತ್ರ ಬಿಡುಗಡೆ ಮಾಡಲು ದಿನಾಂಕ ನಿಗದಿಪಡಿಸಿ ಚಿತ್ರತಂಡ ಅಧಿಕೃತ ಘೋಷಣೆ ಮಾಡಿದೆ.</p>.<p>ಸಾಹಸ ಪ್ರಧಾನವಾದ ಈ ಚಿತ್ರದಲ್ಲಿ ವರಲಕ್ಷ್ಮಿ ಶರತ್ಕುಮಾರ್ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಮಿಂಚಿದ್ದಾರಂತೆ.</p>.<p>ಈ ಚಿತ್ರಕ್ಕೆ ಎಲ್.ಎಸ್. ಶಾಂತನಮೂರ್ತಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಯೋಗಿ ಬಾಬು ಮತ್ತು ವೇಲ ರಾಮಮೂರ್ತಿಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಸಂಗೀತ ನಿರ್ದೇಶ ಸಂತೋಷ್ ದಯಾನಿಧಿ ಅವರದು. ಪಿ.ಜಿ. ಮುತ್ತಯ್ಯ ಮತ್ತು ದೀಪಾ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.</p>.<p>ಕನ್ನಡದ ರನ್ನ, ಮಾಣಿಕ್ಯ, ವಿಸ್ಮಯ ಚಿತ್ರಗಳಲ್ಲಿ ವರಲಕ್ಷ್ಮಿ ಶರತ್ ಕುಮಾರ್ನಟಿಸಿದ್ದು, ಕನ್ನಡದ ಸಿನಿರಸಿಕರಿಗೂ ಚಿರಪರಿಚಿತೆ.ಸದ್ಯ ವರಲಕ್ಷ್ಮಿ ಅವರ ಕೈಯಲ್ಲಿ ತೆಲುಗಿನ ‘ನಾಂದಿ’, ‘ಕ್ರ್ಯಾಕ್’, ತಮಿಳಿನ ‘ಕಾಟೆರಿ’, ‘ಕಣ್ಣಿ ರಾಶಿ’ ‘ಪಂಬನ್’, ‘ಚೇಸಿಂಗ್’ ಸಿನಿಮಾಗಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಹುಭಾಷಾ ನಟಿ ವರಲಕ್ಷ್ಮಿ ಶರತ್ ಕುಮಾರ್ ನಟಿಸಿರುವ ತಮಿಳಿನ ‘ಡ್ಯಾನಿ’ ಸಿನಿಮಾ ಇದೇ ಆಗಸ್ಟ್ 1ರಂದು ಓಟಿಟಿ ವೇದಿಕೆಯಲ್ಲಿ ನೇರ ಬಿಡುಗಡೆಯಾಗುತ್ತಿದೆ. ಕೊರೊನಾ ಲಾಕ್ಡೌನ್ನಿಂದಾಗಿ ಚಿತ್ರಮಂದಿರಗಳ ಬಾಗಿಲು ಬಂದ್ ಆಗಿರುವುದರಿಂದ ಸಿನಿಮಾ ಬಿಡುಗಡೆಗೆ ನಿರ್ಮಾಪಕರು ಪರ್ಯಾಯ ಮಾರ್ಗಗಳ ಮೊರೆ ಹೋಗಿರುವುದು ಹೊಸ ಸಂಗತಿ ಏನಲ್ಲ.</p>.<p>ಜೀ5 ಓಟಿಟಿ ವೇದಿಕೆಯಲ್ಲಿ 'ಡ್ಯಾನಿ’ ಚಿತ್ರ ಬಿಡುಗಡೆ ಮಾಡಲು ದಿನಾಂಕ ನಿಗದಿಪಡಿಸಿ ಚಿತ್ರತಂಡ ಅಧಿಕೃತ ಘೋಷಣೆ ಮಾಡಿದೆ.</p>.<p>ಸಾಹಸ ಪ್ರಧಾನವಾದ ಈ ಚಿತ್ರದಲ್ಲಿ ವರಲಕ್ಷ್ಮಿ ಶರತ್ಕುಮಾರ್ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಮಿಂಚಿದ್ದಾರಂತೆ.</p>.<p>ಈ ಚಿತ್ರಕ್ಕೆ ಎಲ್.ಎಸ್. ಶಾಂತನಮೂರ್ತಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಯೋಗಿ ಬಾಬು ಮತ್ತು ವೇಲ ರಾಮಮೂರ್ತಿಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಸಂಗೀತ ನಿರ್ದೇಶ ಸಂತೋಷ್ ದಯಾನಿಧಿ ಅವರದು. ಪಿ.ಜಿ. ಮುತ್ತಯ್ಯ ಮತ್ತು ದೀಪಾ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.</p>.<p>ಕನ್ನಡದ ರನ್ನ, ಮಾಣಿಕ್ಯ, ವಿಸ್ಮಯ ಚಿತ್ರಗಳಲ್ಲಿ ವರಲಕ್ಷ್ಮಿ ಶರತ್ ಕುಮಾರ್ನಟಿಸಿದ್ದು, ಕನ್ನಡದ ಸಿನಿರಸಿಕರಿಗೂ ಚಿರಪರಿಚಿತೆ.ಸದ್ಯ ವರಲಕ್ಷ್ಮಿ ಅವರ ಕೈಯಲ್ಲಿ ತೆಲುಗಿನ ‘ನಾಂದಿ’, ‘ಕ್ರ್ಯಾಕ್’, ತಮಿಳಿನ ‘ಕಾಟೆರಿ’, ‘ಕಣ್ಣಿ ರಾಶಿ’ ‘ಪಂಬನ್’, ‘ಚೇಸಿಂಗ್’ ಸಿನಿಮಾಗಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>