<p>ಆಲ್ಬಂನ ಹೆಸರು ‘ನೆನಪಲಿ’. ಇದರ ಬಿಡುಗಡೆಯ ಕಾರ್ಯಕ್ರಮ ಹಲವೂ ನೆನಪುಗಳಿಗೂ ನೆಪವಾಯಿತು. ವೇದಿಕೆಯ ಮೇಲಿದ್ದ ರಾಘವೇಂದ್ರ ರಾಜಕುಮಾರ್ ಅವರಿಗೆ ಅವರ ತಂದೆ ರಾಜಕುಮಾರ್ ನೆನಪಾಗಿದ್ದರು. ‘ಅಪ್ಪಾಜಿ ತುಂಬಾ ಸಂಕಟ ಅನುಭವಿಸುತ್ತಿದ್ದ ದಿನಗಳವು. ಸರಿಯಾಗಿ ನಡೆದಾಡಲೂ ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಆ ಸಂದರ್ಭದಲ್ಲಿ ಅವರ ಮಂಡಿನೋವಿಗೆ ತುಂಬಾ ಒಳ್ಳೆಯ ಚಿಕಿತ್ಸೆ ನೀಡಿದ್ದು ಇದೇ ವೈದ್ಯ ದಂಪತಿ’ ಎಂದರು. <br /> <br /> ಅವರು ಮಾತನಾಡುತ್ತಿದ್ದುದು ಡಾ.ಜಾನ್ ಎಬನೆಜರ್ ಹಾಗೂ ಡಾ.ಪ್ರಮೀಳಾ ದೇವಿ ಅವರ ಬಗ್ಗೆ. ಅಂದಹಾಗೆ, ರಾಜ್ ಅವರನ್ನು ಉಪಚರಿಸಿದ್ದ ಈ ವೈದ್ಯದಂಪತಿಯ ಕರುಳಕುಡಿಗಳಾದ ಡಾ.ರಾಕೇಶ್ ಹಾಗೂ ಪ್ರಿಯಾಂಕ ಅವರ ಹಾಡುಗಾರಿಕೆಯಲ್ಲಿ ಮೂಡಿರುವ ಆಲ್ಬಂ- ‘ನೆನಪಲಿ’. ಈ ಗೀತಗುಚ್ಛದ ಸಂಗೀತ ಎಸ್.ಪಿ.ಚಂದ್ರಕಾಂತ್ ಅವರದ್ದು.<br /> <br /> ‘ನೆನಪಲಿ’ ಬಿಡುಗಡೆ ಕಾರ್ಯಕ್ರಮದ ತಾರಾಮೆರುಗು ಜೋರಾಗಿಯೇ ಇತ್ತು. ರಾಘವೇಂದ್ರ ಅವರೊಂದಿಗೆ ಪುನೀತ್ ರಾಜಕುಮಾರ್, ಸಂಗೀತ ನಿರ್ದೇಶಕ ವಿ.ಮನೋಹರ್, ಗಾಯಕಿ ಮಂಜುಳಾ ಗುರುರಾಜ್ ಕಾರ್ಯಕ್ರಮದಲ್ಲಿದ್ದರು. <br /> <br /> ರಾಘವೇಂದ್ರ ರಾಜಕುಮಾರ್ ನೆನಪು ಮತ್ತೂ ಮುಂದುವರೆಯಿತು. ‘ನಾನು ವೈದ್ಯನಾಗಬೇಕೆಂದು ಅಪ್ಪಾಜಿ ಬಯಸಿದ್ದರು. ಆದರೆ ಎಂಬಿಬಿಎಸ್ ಎರಡನೇ ವರ್ಷ ಮುಗಿಸಿದವನೇ ನಟನೆಗಿಳಿದುಬಿಟ್ಟೆ. ಈಗ ಶಿವಣ್ಣನ ಮಗಳು ವೈದ್ಯೆಯಾಗುವ ಹಾದಿಯಲ್ಲಿದ್ದಾಳೆ. ಈ ಮೂಲಕ ಅಪ್ಪಾಜಿ ಕನಸು ನನಸಾಗಲಿದೆ’ ಎಂದರು. <br /> <br /> ರಾಕೇಶ್ ಮತ್ತು ಪ್ರಿಯಾಂಕ ಅವರ ಕಂಠಮಾಧುರ್ಯವನ್ನು ಮೆಚ್ಚಿಕೊಂಡು ಇಬ್ಬರಿಗೂ ಶುಭಕೋರಿದ ರಾಘವೇಂದ್ರ, ‘ಸಂಗೀತದಲ್ಲಿ ಈ ಮಟ್ಟದ ಸಾಧನೆ ಮಾಡಲಿಕ್ಕೆ ದೇವರ ಅನುಗ್ರಹ ಬೇಕು’ ಎಂದು ಅಭಿಪ್ರಾಯಪಟ್ಟರು.ಮನೋಹರ್ ಅವರಿಗೂ ಯುವ ಗಾಯಕರ ಹಾಡುಗಾರಿಕೆ ಇಷ್ಟವಾದಂತಿತ್ತು. ಅವರು ತಮ್ಮ ಮಾತಿನ ನಡುವೆ, ಎಳೆಯ ಹಾಡುಗಾರರಿಗೆ ಸರ್ಕಾರ ಪ್ರಶಸ್ತಿ ನೀಡಿ ಗುರ್ತಿಸಬೇಕು ಎಂದು ಸಲಹೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆಲ್ಬಂನ ಹೆಸರು ‘ನೆನಪಲಿ’. ಇದರ ಬಿಡುಗಡೆಯ ಕಾರ್ಯಕ್ರಮ ಹಲವೂ ನೆನಪುಗಳಿಗೂ ನೆಪವಾಯಿತು. ವೇದಿಕೆಯ ಮೇಲಿದ್ದ ರಾಘವೇಂದ್ರ ರಾಜಕುಮಾರ್ ಅವರಿಗೆ ಅವರ ತಂದೆ ರಾಜಕುಮಾರ್ ನೆನಪಾಗಿದ್ದರು. ‘ಅಪ್ಪಾಜಿ ತುಂಬಾ ಸಂಕಟ ಅನುಭವಿಸುತ್ತಿದ್ದ ದಿನಗಳವು. ಸರಿಯಾಗಿ ನಡೆದಾಡಲೂ ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಆ ಸಂದರ್ಭದಲ್ಲಿ ಅವರ ಮಂಡಿನೋವಿಗೆ ತುಂಬಾ ಒಳ್ಳೆಯ ಚಿಕಿತ್ಸೆ ನೀಡಿದ್ದು ಇದೇ ವೈದ್ಯ ದಂಪತಿ’ ಎಂದರು. <br /> <br /> ಅವರು ಮಾತನಾಡುತ್ತಿದ್ದುದು ಡಾ.ಜಾನ್ ಎಬನೆಜರ್ ಹಾಗೂ ಡಾ.ಪ್ರಮೀಳಾ ದೇವಿ ಅವರ ಬಗ್ಗೆ. ಅಂದಹಾಗೆ, ರಾಜ್ ಅವರನ್ನು ಉಪಚರಿಸಿದ್ದ ಈ ವೈದ್ಯದಂಪತಿಯ ಕರುಳಕುಡಿಗಳಾದ ಡಾ.ರಾಕೇಶ್ ಹಾಗೂ ಪ್ರಿಯಾಂಕ ಅವರ ಹಾಡುಗಾರಿಕೆಯಲ್ಲಿ ಮೂಡಿರುವ ಆಲ್ಬಂ- ‘ನೆನಪಲಿ’. ಈ ಗೀತಗುಚ್ಛದ ಸಂಗೀತ ಎಸ್.ಪಿ.ಚಂದ್ರಕಾಂತ್ ಅವರದ್ದು.<br /> <br /> ‘ನೆನಪಲಿ’ ಬಿಡುಗಡೆ ಕಾರ್ಯಕ್ರಮದ ತಾರಾಮೆರುಗು ಜೋರಾಗಿಯೇ ಇತ್ತು. ರಾಘವೇಂದ್ರ ಅವರೊಂದಿಗೆ ಪುನೀತ್ ರಾಜಕುಮಾರ್, ಸಂಗೀತ ನಿರ್ದೇಶಕ ವಿ.ಮನೋಹರ್, ಗಾಯಕಿ ಮಂಜುಳಾ ಗುರುರಾಜ್ ಕಾರ್ಯಕ್ರಮದಲ್ಲಿದ್ದರು. <br /> <br /> ರಾಘವೇಂದ್ರ ರಾಜಕುಮಾರ್ ನೆನಪು ಮತ್ತೂ ಮುಂದುವರೆಯಿತು. ‘ನಾನು ವೈದ್ಯನಾಗಬೇಕೆಂದು ಅಪ್ಪಾಜಿ ಬಯಸಿದ್ದರು. ಆದರೆ ಎಂಬಿಬಿಎಸ್ ಎರಡನೇ ವರ್ಷ ಮುಗಿಸಿದವನೇ ನಟನೆಗಿಳಿದುಬಿಟ್ಟೆ. ಈಗ ಶಿವಣ್ಣನ ಮಗಳು ವೈದ್ಯೆಯಾಗುವ ಹಾದಿಯಲ್ಲಿದ್ದಾಳೆ. ಈ ಮೂಲಕ ಅಪ್ಪಾಜಿ ಕನಸು ನನಸಾಗಲಿದೆ’ ಎಂದರು. <br /> <br /> ರಾಕೇಶ್ ಮತ್ತು ಪ್ರಿಯಾಂಕ ಅವರ ಕಂಠಮಾಧುರ್ಯವನ್ನು ಮೆಚ್ಚಿಕೊಂಡು ಇಬ್ಬರಿಗೂ ಶುಭಕೋರಿದ ರಾಘವೇಂದ್ರ, ‘ಸಂಗೀತದಲ್ಲಿ ಈ ಮಟ್ಟದ ಸಾಧನೆ ಮಾಡಲಿಕ್ಕೆ ದೇವರ ಅನುಗ್ರಹ ಬೇಕು’ ಎಂದು ಅಭಿಪ್ರಾಯಪಟ್ಟರು.ಮನೋಹರ್ ಅವರಿಗೂ ಯುವ ಗಾಯಕರ ಹಾಡುಗಾರಿಕೆ ಇಷ್ಟವಾದಂತಿತ್ತು. ಅವರು ತಮ್ಮ ಮಾತಿನ ನಡುವೆ, ಎಳೆಯ ಹಾಡುಗಾರರಿಗೆ ಸರ್ಕಾರ ಪ್ರಶಸ್ತಿ ನೀಡಿ ಗುರ್ತಿಸಬೇಕು ಎಂದು ಸಲಹೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>