ರಕ್ಷಿತ್ ಅವರಿಗೆ ಇಲ್ಲಿ ತೆರೆ ದರ್ಶನದ ಅವಧಿ(ಸ್ಕ್ರೀನ್ಸ್ಪೇಸ್) ಹೆಚ್ಚು. ‘ಮನು’ವಿನ ಪಾತ್ರದ ಭಾವನೆ, ಗುಣಗಳು ಬದಲಾಗಿವೆ. ಇವುಗಳನ್ನು ರಕ್ಷಿತ್ ಸಮರ್ಥವಾಗಿ ನಿಭಾಯಿಸಿದ್ದಾರೆ. ಜೊತೆಗೆ ‘ಸಿಂಪಲ್’ ಸ್ಟಾರ್ ಮಚ್ಚು ಹಿಡಿದಿದ್ದಾರೆ! ರಕ್ಷಿತ್, ‘ಚಾರ್ಲಿ’ಯಲ್ಲಿ ತೋರ್ಪಡಿಸಿದ್ದ ತಮ್ಮ ನಟನಾ ಸಾಮರ್ಥ್ಯವನ್ನು ಸಿನಿಮಾದ ಈ ಭಾಗದಲ್ಲಿ ಮತ್ತೊಮ್ಮೆ ತೆರೆದಿಟ್ಟಿದ್ದಾರೆ. ರುಕ್ಮಿಣಿ ಪಾತ್ರಕ್ಕೆ ಈ ಭಾಗದಲ್ಲಿ ಮಾತು ಕಡಿಮೆ, ಭಾವನೆಗಳು ಹೆಚ್ಚು. ಮೌನದಲ್ಲೂ ರುಕ್ಮಿಣಿ ಅಂಕ ಗಿಟ್ಟಿಸುತ್ತಾರೆ. ಸಹಜ ನಟನೆಯಿಂದ ಚೈತ್ರಾ ಗಮನಸೆಳೆಯುತ್ತಾರೆ. ನಟನೆಯಲ್ಲಿ ಸಿನಿಮಾದಿಂದ ಸಿನಿಮಾಗೆ ಅವರು ಪಳಗುತ್ತಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆಗೆ ‘ಮನು’ವನ್ನು ನಡೆಸುವ, ನಗಿಸುವ ಜವಾಬ್ದಾರಿ ಇಲ್ಲಿ ದೊರಕಿದೆ. ಅದನ್ನು ಅವರು ಚೆನ್ನಾಗಿ ನಿಭಾಯಿಸಿದ್ದಾರೆ. ಖಳನಟನಾಗಿ ರಮೇಶ್ ಇಂದಿರಾ ಅವರ ಭಿನ್ನ ಹಾವಭಾವ ಗಮನ ಸೆಳೆಯುತ್ತದೆ.