'ಮಧ್ಯಪ್ರದೇಶದ ನರ್ಮದಾ ದಡದಲ್ಲಿರುವ ಐತಿಹಾಸಿಕ ಪಟ್ಟಣ ಮಹೇಶ್ವರ ದೇವಾಲಯದೊಳಗೆ ಚುಂಬನ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಇದು ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸಿದೆ. ಇದು 'ಲವ್ ಜಿಹಾದ್' ಅನ್ನು ಸಹ ಪ್ರೋತ್ಸಾಹಿಸುತ್ತಿದೆ' ಎಂದು ಬಿಜೆಪಿ ಯುವ ಮೋರ್ಚಾದ ರಾಷ್ಟ್ರ ಘಟಕದ ಕಾರ್ಯದರ್ಶಿ ಗೌರವ್ ತಿವಾರಿ ಹೇಳಿದ್ದರು. ಅಲ್ಲದೆ, ರೇವಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದ ಅವರು, ನೆಟ್ಫ್ಲಿಕ್ಸ್ ಮತ್ತು ಸರಣಿಯ ನಿರ್ಮಾಪಕರು ಕ್ಷಮೆಯಾಚಿಸಬೇಕು. 'ಎ ಸೂಟಬಲ್ ಬಾಯ್' ನಿಂದ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕಬೇಕೆಂದು ಆಗ್ರಹಿಸಿದ್ದರು.