<p>ಬಿಗ್ಬಾಸ್ ಮನೆಯೊಳಗೆ ಸ್ಪರ್ಧಿಗಳ ನಡುವೆ ದಿನದಿಂದ ದಿನಕ್ಕೆ ಜಟಾಪಟಿ ಜೋರಾಗುತ್ತಿದೆ. ಕ್ಯಾಪ್ಟನ್ ಮಾಳು ಅವರು ಧ್ರುವಂತ್ ಹಾಗೂ ರಾಶಿಕಾ ಅವರನ್ನು ಕಳಪೆ ಪಟ್ಟಿಗೆ ಸೇರಿಸಿ ಸಗಣಿ ನೀರು ಮತ್ತು ಕಸ ಸುರಿದಿದ್ದಾರೆ. ಆ ಕಾರಣಕ್ಕೆ ಕ್ಯಾಪ್ಟನ್ ವಿರುದ್ಧ ಇಬ್ಬರೂ ಸ್ಪರ್ಧಿಗಳು ಸಿಟ್ಟಾಗಿದ್ದಾರೆ.</p><p>ಇಂದು ಬಿಡುಗಡೆಯಾದ ಪ್ರೋಮೊದಲ್ಲಿ ಮಾಳು, ಧ್ರುವಂತ್, ರಾಶಿಕಾ ಮತ್ತು ಗಿಲ್ಲಿ ನಡುವೆ ಮಾತಿನ ಚಕಮಕಿ ನಡೆದಿದೆ.</p><p>ವೀಕ್ಷಕರ ಮೂಲಕ ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾದ ಮಾಳು ಅವರಿಗೆ ಬಿಗ್ಬಾಸ್ ಟಾಸ್ಕ್ ಒಂದನ್ನು ನೀಡಿದ್ದಾರೆ. ಇದರ ಪ್ರಕಾರ ಮನೆಯಲ್ಲಿ ಕಳಪೆ ಎನಿಸಿದ ಸ್ಪರ್ಧಿಗಳನ್ನು ಆಯ್ಕೆ ಮಾಡಿ ಅವರ ಮೇಲೆ ಸಗಣಿ ನೀರು ಅಥವಾ ಕಸವನ್ನು ಹಾಕಬೇಕಿದೆ.</p><p>ಆದರಂತೆ ಮಾಳು, ಧ್ರುವಂತ್ ಅವರ ಮೇಲೆ ಸಗಣಿ ನೀರನ್ನು ಸುರಿಯುತ್ತಾರೆ. ಈ ನಿರ್ಧಾರಕ್ಕೆ ಮಾಳು ವಿರುದ್ಧ ಕ್ರಾಕೋಚ್ ಸುಧಿ ತಿರುಗಿ ಬೀಳುತ್ತಾರೆ.</p><p>ಕಳಪೆ ಪ್ರದರ್ಶನ ತೋರಿಸಿದವರಲ್ಲಿ ಇನ್ನೊಬ್ಬರ ಮೇಲೆ ಕಸದ ರಾಶಿ ಹಾಕುವ ಟಾಸ್ಕ್ ಇರುತ್ತದೆ. ಅದರಲ್ಲಿ ಮಾಳು ಅವರು ರಾಶಿಕ ಅವರನ್ನು ಆಯ್ಕೆ ಮಾಡಿ ಅವರ ಮೇಲೆ ಕಸದ ರಾಶಿಯನ್ನು ಹಾಕುತ್ತಾರೆ.</p><p>ಅದರ ಮಧ್ಯದಲ್ಲಿ ಮಾತನಾಡಿದ ಗಿಲ್ಲಿ ಅವರಿಗೆ ರಾಶಿಕ ಜೋರಾಗಿ ಬೈಯುತ್ತಾರೆ. ಇವರಿಬ್ಬರ ನಡುವಿನ ವಾದ ವಿವಾದ ಅಲ್ಲೆ ಕೊನೆಯಾಗುತ್ತಾ ಅಥವಾ ಮುಂದುವರಿಯುತ್ತಾ ಎಂದು ಇಂದಿನ ಸಂಚಿಕೆಯಲ್ಲಿ ನೋಡಬೇಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಿಗ್ಬಾಸ್ ಮನೆಯೊಳಗೆ ಸ್ಪರ್ಧಿಗಳ ನಡುವೆ ದಿನದಿಂದ ದಿನಕ್ಕೆ ಜಟಾಪಟಿ ಜೋರಾಗುತ್ತಿದೆ. ಕ್ಯಾಪ್ಟನ್ ಮಾಳು ಅವರು ಧ್ರುವಂತ್ ಹಾಗೂ ರಾಶಿಕಾ ಅವರನ್ನು ಕಳಪೆ ಪಟ್ಟಿಗೆ ಸೇರಿಸಿ ಸಗಣಿ ನೀರು ಮತ್ತು ಕಸ ಸುರಿದಿದ್ದಾರೆ. ಆ ಕಾರಣಕ್ಕೆ ಕ್ಯಾಪ್ಟನ್ ವಿರುದ್ಧ ಇಬ್ಬರೂ ಸ್ಪರ್ಧಿಗಳು ಸಿಟ್ಟಾಗಿದ್ದಾರೆ.</p><p>ಇಂದು ಬಿಡುಗಡೆಯಾದ ಪ್ರೋಮೊದಲ್ಲಿ ಮಾಳು, ಧ್ರುವಂತ್, ರಾಶಿಕಾ ಮತ್ತು ಗಿಲ್ಲಿ ನಡುವೆ ಮಾತಿನ ಚಕಮಕಿ ನಡೆದಿದೆ.</p><p>ವೀಕ್ಷಕರ ಮೂಲಕ ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾದ ಮಾಳು ಅವರಿಗೆ ಬಿಗ್ಬಾಸ್ ಟಾಸ್ಕ್ ಒಂದನ್ನು ನೀಡಿದ್ದಾರೆ. ಇದರ ಪ್ರಕಾರ ಮನೆಯಲ್ಲಿ ಕಳಪೆ ಎನಿಸಿದ ಸ್ಪರ್ಧಿಗಳನ್ನು ಆಯ್ಕೆ ಮಾಡಿ ಅವರ ಮೇಲೆ ಸಗಣಿ ನೀರು ಅಥವಾ ಕಸವನ್ನು ಹಾಕಬೇಕಿದೆ.</p><p>ಆದರಂತೆ ಮಾಳು, ಧ್ರುವಂತ್ ಅವರ ಮೇಲೆ ಸಗಣಿ ನೀರನ್ನು ಸುರಿಯುತ್ತಾರೆ. ಈ ನಿರ್ಧಾರಕ್ಕೆ ಮಾಳು ವಿರುದ್ಧ ಕ್ರಾಕೋಚ್ ಸುಧಿ ತಿರುಗಿ ಬೀಳುತ್ತಾರೆ.</p><p>ಕಳಪೆ ಪ್ರದರ್ಶನ ತೋರಿಸಿದವರಲ್ಲಿ ಇನ್ನೊಬ್ಬರ ಮೇಲೆ ಕಸದ ರಾಶಿ ಹಾಕುವ ಟಾಸ್ಕ್ ಇರುತ್ತದೆ. ಅದರಲ್ಲಿ ಮಾಳು ಅವರು ರಾಶಿಕ ಅವರನ್ನು ಆಯ್ಕೆ ಮಾಡಿ ಅವರ ಮೇಲೆ ಕಸದ ರಾಶಿಯನ್ನು ಹಾಕುತ್ತಾರೆ.</p><p>ಅದರ ಮಧ್ಯದಲ್ಲಿ ಮಾತನಾಡಿದ ಗಿಲ್ಲಿ ಅವರಿಗೆ ರಾಶಿಕ ಜೋರಾಗಿ ಬೈಯುತ್ತಾರೆ. ಇವರಿಬ್ಬರ ನಡುವಿನ ವಾದ ವಿವಾದ ಅಲ್ಲೆ ಕೊನೆಯಾಗುತ್ತಾ ಅಥವಾ ಮುಂದುವರಿಯುತ್ತಾ ಎಂದು ಇಂದಿನ ಸಂಚಿಕೆಯಲ್ಲಿ ನೋಡಬೇಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>