<p>ಕಳಪೆ ಪ್ರದರ್ಶನ ತೋರಿದ ಸ್ಪರ್ಧಿಗಳ ಮೇಲೆ ಸಗಣಿ ನೀರು, ಕಸದ ರಾಶಿ, ಕಪ್ಪು ಬಣ್ಣದ ನೀರು ಹಾಕುವಂತೆ ಬಿಗ್ಬಾಸ್ ಟಾಸ್ಕ್ ಒಂದನ್ನು ನೀಡಿದ್ದರು.</p><p>ಇಂದು ಬಿಡುಗಡೆಯಾದ ಪ್ರೋಮೊದಲ್ಲಿ ಮಾಳು ವಿರುದ್ಧ ಅಶ್ವಿನಿ ಹಾಗೂ ಜಾನ್ವಿ ಸಿಟ್ಟಾಗಿದ್ದಾರೆ.</p><p>‘ಅಶ್ವಿನಿ ಅವರ ಮನಸ್ಸಿನಲ್ಲಿ ಕಲ್ಮಷ ಜಾಸ್ತಿ ಇದೆ ಹಾಗಾಗಿ ಅವರಿಗೆ ಕಪ್ಪು ಬಣ್ಣದ ನೀರು ಸುರಿಯುತ್ತೇನೆ’ ಎಂದು ಮಾಳು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಶ್ವಿನಿ ಅವರು, ರಕ್ಷಿತಾಳಿಗೆ ಕ್ಷಮೆ ಕೇಳಿದ್ದೀನಿ ಆದರೆ ಇನ್ನೂ ಸೋತಿಲ್ಲ ಎಂದಿದ್ದಾರೆ. </p>.ರಾಜಮೌಳಿ ಚಿತ್ರದಲ್ಲಿ ಹಾಡಿದ ನಟಿ ಶ್ರುತಿ ಹಾಸನ್.<p>ಕ್ಯಾಪ್ಟನ್ ಮಾಳು ಅವರು ಧ್ರುವಂತ್ ಮೇಲೆ ಸಗಣಿ ನೀರು, ರಾಶಿಕ ಮೇಲೆ ಕಸದ ರಾಶಿ, ಅಶ್ವಿನಿ ಅವರ ಮೇಲೆ ಕಪ್ಪು ಬಣ್ಣದ ಸುರಿದಿದ್ದಾರೆ. </p><p>ಕ್ಯಾಪ್ಟನ್ ಮಾಳು ಅವರು ರಾಶಿಕ ಮೇಲೆ ಕಸದ ರಾಶಿ ಹಾಕಿದ್ದಕ್ಕೆ ಬೇಸರಗೊಂಡಿದ್ದಾರೆ. ಇತ್ತ ಅಭಿಷೇಕ್ ಅವರು ಮಾಳು ಅವರಿಗೆ ಒಂದಿಷ್ಟು ದಿನ ನೀನು ಯಾರ ಹತ್ತಿರವೂ ಮಾತನಾಡಬೇಡ ಎಂದಿದ್ದಾರೆ. </p><p>ಇತ್ತ ರಾಶಿಕ, ‘ಎಲ್ಲರೂ ನನ್ನನೇ ಟಾರ್ಗೆಟ್ ಮಾಡುತ್ತಿದ್ದಾರೆ’ ಎಂದು ಸೂರಾಜ್ ಬಳಿ ಬೇಸರ ಹೊರ ಹಾಕಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಳಪೆ ಪ್ರದರ್ಶನ ತೋರಿದ ಸ್ಪರ್ಧಿಗಳ ಮೇಲೆ ಸಗಣಿ ನೀರು, ಕಸದ ರಾಶಿ, ಕಪ್ಪು ಬಣ್ಣದ ನೀರು ಹಾಕುವಂತೆ ಬಿಗ್ಬಾಸ್ ಟಾಸ್ಕ್ ಒಂದನ್ನು ನೀಡಿದ್ದರು.</p><p>ಇಂದು ಬಿಡುಗಡೆಯಾದ ಪ್ರೋಮೊದಲ್ಲಿ ಮಾಳು ವಿರುದ್ಧ ಅಶ್ವಿನಿ ಹಾಗೂ ಜಾನ್ವಿ ಸಿಟ್ಟಾಗಿದ್ದಾರೆ.</p><p>‘ಅಶ್ವಿನಿ ಅವರ ಮನಸ್ಸಿನಲ್ಲಿ ಕಲ್ಮಷ ಜಾಸ್ತಿ ಇದೆ ಹಾಗಾಗಿ ಅವರಿಗೆ ಕಪ್ಪು ಬಣ್ಣದ ನೀರು ಸುರಿಯುತ್ತೇನೆ’ ಎಂದು ಮಾಳು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಶ್ವಿನಿ ಅವರು, ರಕ್ಷಿತಾಳಿಗೆ ಕ್ಷಮೆ ಕೇಳಿದ್ದೀನಿ ಆದರೆ ಇನ್ನೂ ಸೋತಿಲ್ಲ ಎಂದಿದ್ದಾರೆ. </p>.ರಾಜಮೌಳಿ ಚಿತ್ರದಲ್ಲಿ ಹಾಡಿದ ನಟಿ ಶ್ರುತಿ ಹಾಸನ್.<p>ಕ್ಯಾಪ್ಟನ್ ಮಾಳು ಅವರು ಧ್ರುವಂತ್ ಮೇಲೆ ಸಗಣಿ ನೀರು, ರಾಶಿಕ ಮೇಲೆ ಕಸದ ರಾಶಿ, ಅಶ್ವಿನಿ ಅವರ ಮೇಲೆ ಕಪ್ಪು ಬಣ್ಣದ ಸುರಿದಿದ್ದಾರೆ. </p><p>ಕ್ಯಾಪ್ಟನ್ ಮಾಳು ಅವರು ರಾಶಿಕ ಮೇಲೆ ಕಸದ ರಾಶಿ ಹಾಕಿದ್ದಕ್ಕೆ ಬೇಸರಗೊಂಡಿದ್ದಾರೆ. ಇತ್ತ ಅಭಿಷೇಕ್ ಅವರು ಮಾಳು ಅವರಿಗೆ ಒಂದಿಷ್ಟು ದಿನ ನೀನು ಯಾರ ಹತ್ತಿರವೂ ಮಾತನಾಡಬೇಡ ಎಂದಿದ್ದಾರೆ. </p><p>ಇತ್ತ ರಾಶಿಕ, ‘ಎಲ್ಲರೂ ನನ್ನನೇ ಟಾರ್ಗೆಟ್ ಮಾಡುತ್ತಿದ್ದಾರೆ’ ಎಂದು ಸೂರಾಜ್ ಬಳಿ ಬೇಸರ ಹೊರ ಹಾಕಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>