ಅಂತಿಮ ವಾರ ಬಿಗ್ ಬಾಸ್ ಮನೆಯ ಎಲ್ಲ ಸ್ಪರ್ಧಿಗಳಿಗೆ ಅವರಿಗೆ ಇದುವರೆಗೆ ಈಡೇರದಆಸೆ ಪೂರೈಸುವುದಾಗಿ ಬಿಗ್ ಬಾಸ್ ಹೇಳಿದ್ದರು. ಅದರಂತೆ ಮನೆಯಲ್ಲಿ ಕಿವಿ ಆಕೃತಿಯನ್ನು ಇರಿಸಿ ಪ್ರತಿಯೊಬ್ಬರು ತಮ್ಮ ಆಸೆಯನ್ನು ಅಲ್ಲಿ ಹೇಳಿಕೊಳ್ಳಬೇಕು ಎಂದು ಸೂಚಿಸಲಾಗಿತ್ತು. ಈ ಸಂದರ್ಭ, ಮನೆಯ ಟಾಪ್ ಕಂಟೆಂಡರ್ಗಳಲ್ಲಿ ಒಬ್ಬರಾದ ಮಂಜು ಪಾವಗಡ ಅವರು, ನನಗೆ ಶಿವರಾಜ್ ಕುಮಾರ್ ಅವರೆಂದರೆ ತುಂಬಾ ಇಷ್ಟ ಫಿನಾಲೆಗೂ ಮುನ್ನ ಅವರ ಆಶೀರ್ವಾದ ಸಿಕ್ಕರೆ ನನಗೆ ತುಂಬಾ ಖುಷಿಯಾಗುತ್ತದೆ. ಅವರಿಂದ ಒಂದು ಪದದ ವಿಡಿಯೊ ಸಂದೇಶ ಕಳುಹಿಸಿಕೊಡಿ ಬಿಗ್ ಬಾಸ್ ಪ್ಲೀಸ್ ಎಂದು ಮನವಿ ಮಾಡಿದ್ದರು.