ಕಾಳಿಂಗ ಸರ್ಪದೊಂದಿಗೆ ಗೌರಿಶಂಕರ
ಕಾಳಿಂಗ ಸರ್ಪದೊಂದಿಗೆ ಗೌರಿಶಂಕರ
ಕಾಳಿಂಗ ಸರ್ಪ ಹಿಡಿಯುತ್ತಿರುವ ಗೌರಿಶಂಕರ
ಕಾಳಿಂಗ ಸರ್ಪದೊಂದಿಗೆ ಗೌರಿಶಂಕರ
ಅವಿಸ್ಮರಣೀಯ ಆ ಮೂರು ದಿನ...
ಕನ್ನಡ ಚಿತ್ರರಂಗದ ಮೇರುನಟ ಪುನೀತ್ ರಾಜ್ಕುಮಾರ್ ಎಲ್ಲರ ಮೆಚ್ಚಿನ ಅಪ್ಪು ಅವರೊಂದಿಗೆ ಕಳೆದ ಮೂರು ದಿನ ಜೀವನದ ಅತ್ಯಂತ ಅವಿಸ್ಮರಣೀಯ ಸಮಯ. ‘ಗಂಧದ ಗುಡಿ’– ಸಾಕ್ಷ್ಯಚಿತ್ರಕ್ಕಾಗಿ ಕ್ಯಾಮೆರಾ ಚಾಲನೆಯಾಗಿದ್ದು ನಮ್ಮ ಕಾಳಿಂಗ್ ಸೆಂಟರ್ ಫಾರ್ ರೈನ್ಫಾರೆಸ್ಟ್ ಎಕೊಲಾಜಿಯಲ್ಲೇ (ಕೆಸಿಆರ್ಇ). ಚಿತ್ರದಲ್ಲಿ ಅದು ಮಧ್ಯದಲ್ಲಿ ಬರುತ್ತದೆ. ನನ್ನ ಗೆಳೆಯ ಅಮೋಘ ಅವರು ಪುನೀತ್ ಅವರನ್ನು ಪರಿಚಯ ಮಾಡಿಸಿದರು. ಅವರು ತುಂಬಾ ಸರಳ ಹಸನ್ಮುಖಿ. ನಮ್ಮ ಕಾಳಿಂಗ ಸರ್ಪ ಕಂಡಾಂಗಲಂತೂ ತುಂಬಾ ಭಯ ಪಟ್ಟಿದ್ದರು. ಕಾಳಿಂಗನ ಶೂಟಿಂಗ್ ಮಾಡುವಾಗ ಮೂರು ಅಡಿ ಎತ್ತರ ಹಲಗೆ ಮೇಲೆ ನಿಂತಿದ್ದರು. ನಂತರ ಆಸಕ್ತಿಯಿಂದ ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದರು. ನಮ್ಮೊಂದಿಗೆ ಕುಳಿತು ಊಟ ಮಾಡಿದರು ತಿಂದ ತಟ್ಟೆಯನ್ನು ತೊಳೆದರು. ತಮ್ಮ ತಂದೆಯವರ ಬಗ್ಗೆ ಚಿತ್ರದಲ್ಲಿ ಹಾವು ಸುತ್ತಿಕೊಂಡ ಬಗ್ಗೆಯ ಸನ್ನಿವೇಶವನ್ನೆಲ್ಲ ಹೇಳಿದರು. ವಾಹ್.. ಇಂತಹ ಅತ್ಯಂತ ಸರಳ ಹಾಗೂ ಮಹಾನ್ ವ್ಯಕ್ತಿಯನ್ನು ನಾನು ಭೇಟಿಯೇ ಮಾಡಿರಲಿಲ್ಲ. ನಾನು ಪ್ರಥಮ ಬಾರಿಗೆ ಒಬ್ಬ ವ್ಯಕ್ತಿಯ ಅಭಿಮಾನಿಯಾಗಿಬಿಟ್ಟಿದ್ದೇನೆ... ಎಂದು ಪುನೀತ್ ರಾಜ್ಕುಮಾರ್ ಅವರ ಬಗ್ಗೆ ಹೇಳುವಾಗ ಗೌರಿಶಂಕರ್ ಮಾತಿನಲ್ಲಿ ಹೆಮ್ಮೆ ಇತ್ತು ಗೌರವಪೂರ್ವಕ ಮಾತುಗಳಲ್ಲಿ ಅಭಿಮಾನವಿತ್ತು.