<p>ಮಾಂಟ್ರಿಯಾಲ್ ಪ್ರೊಟೊಕೋಲ್ ಎಂದು ಖ್ಯಾತವಾಗಿರುವ ಘೋಷಣೆಯನ್ನು 1987ರಲ್ಲಿ ಮಾಂಟ್ರಿಯಾಲ್ ನಡೆದ ಅಂತರರಾಷ್ಟ್ರ ಸಮ್ಮೇಳನದಲ್ಲಿ ವಿಶ್ವಸಂಸ್ಥೆ ಅಂಗೀಕರಿಸಿದ ಕಾರಣ, ಪ್ರತಿ ವರ್ಷ ಸೆಪ್ಟೆಂಬರ್ 16 ಅನ್ನು ವಿಶ್ವ ಓಜೋನ್ ದಿನವನ್ನಾಗಿ ಆಚರಿಸಲಾಗುತ್ತಿದೆ.</p>.<p>ನಮ್ಮ ಭೂಮಿ ವಿವಿಧ ಪದರಗಳಿಂದ ಆವರಿಸಲ್ಪಟ್ಟಿದೆ ಎಂಬ ವಿಚಾರ ನಿಮಗೆ ತಿಳಿದಿರುತ್ತದೆ. ಭೂಮಿಯಿಂದ ಎತ್ತರಕ್ಕೆ ಹೋಗುತ್ತ ಈ ಪದರಗಳನ್ನು ದಾಟಿಕೊಂಡು ಹೋಗುತ್ತೇವೆ. ಅದರಂತೆಯೇ ಸೂರ್ಯನ ಕಿರಣಗಳು ಈ ಪದರಗಳನ್ನು ದಾಟಿಕೊಂಡು ಭೂಮಿಯತ್ತ ಬರುತ್ತವೆ. ಈ ಪದರಗಳನ್ನು ದಾಟುವ ಸಮಯದಲ್ಲಿ ಕಿರಣಗಳ ಕೆಲವು ಅಂಶಗಳನ್ನು ಪದರಗಳು ಹಿಡಿದು ಹಾಕುತ್ತವೆ (ಜರಡಿ ಹಿಡಿದಂತೆ).</p>.<p>ಕಾಮನ ಬಿಲ್ಲಿನಲ್ಲಿ ಏಳು ಬಣ್ಣಗಳನ್ನು ನೋಡಿರುತ್ತೀರಿ. ಅವು ಒಟ್ಟಾಗಿ ಬಿಳಿಯ ಬಣ್ಣವನ್ನು ಕೊಡುತ್ತವೆ ಎಂಬುದೂ ನಿಮಗೆ ಗೊತ್ತಿದೆ. ಈ ಬಣ್ಣಗಳು ವಿವಿಧ ಶಾಖದ ಪ್ರಖರತೆ ಹೊಂದಿರುತ್ತವೆ ಎನ್ನುವುದು ಪ್ರಾಯಶಃ ನಿಮಗೆ ತಿಳಿದಿರಬಹುದು.</p>.<p>ಈ ಪ್ರಖರತೆ ಹಲವು ರಾಸಾಯನಿಕ ಕ್ರಿಯೆಗಳಿಗೆ ಕಾರಣವಾಗುತ್ತದೆ. ವಯೊಲೆಟ್ ಶ್ರೇಣಿಗಿಂತ ಹೆಚ್ಚು ಪ್ರಖರತೆಯ ಕಿರಣಗಳನ್ನು ಅಲ್ಟ್ರಾ ವಯೊಲೆಟ್ ಎಂದು ಕರೆಯಲಾಗುವುದು. ಈ ಲೇಖನ ಭೌತವಿಜ್ಞಾನದ ಪಾಠವಾಗಬಾರದು ಎನ್ನುವ ಕಾರಣಕ್ಕೆ ಒಂದು ಸಾಮಾನ್ಯ ರೀತಿಯಲ್ಲಿ ಇದನ್ನು ವಿವರಿಸುವ ಪ್ರಯತ್ನ ಮಾಡಿದ್ದೇನೆ</p>.<p>ಈ ಅಲ್ಟ್ರಾ ವಯೊಲೆಟ್ ಕಿರಣಗಳನ್ನು ಓಝೋನ್ ಪದರ ಹಿಡಿದಿಡುತ್ತದೆ. ಈ ಪದರದಲ್ಲಿ ರಂಧ್ರವಾದ ಕಾರಣ ಕೆಲವು ಕಿರಣಗಳು ಭೂಮಿಯನ್ನು ತಲುಪಿ ಹಲವು ರಾಸಾಯನಿಕ ಪ್ರಕ್ರಿಯೆಗಳನ್ನು ಉಂಟು ಮಾಡಿ, ಹಲವು ಸಮಸ್ಯೆಗಳನ್ನು ಸೃಷ್ಟಿಸಿದೆ.</p>.<p>ಚರ್ಮದ ಸುಡುವಿಕೆ, ದೃಷ್ಟಿದೋಷ ಮತ್ತು ಹಲವು ರೀತಿಯ ಕ್ಯಾನ್ಸರ್ ತಂದೊಡ್ಡಬಹುದು. ಈ ರಂಧ್ರವನ್ನು ಮುಚ್ಚಲು ಜಗತ್ತಿನ ಎಲ್ಲ ರಾಷ್ಟ್ರಗಳೂ ಏಕಪ್ರಕಾರವಾಗಿ ಪ್ರಯತ್ನಿಸಬೇಕು ಎನ್ನುವುದೇ ಈ ಓಝೋನ್ ದಿನಾಚರಣೆಯ ಉದ್ದೇಶ.</p>.<p><span class="Bullet">*</span>ಸ್ವಂತ ಕಾರುಗಳ ಬಳಕೆಯನ್ನು ಕಡಿಮೆ ಮಾಡಬೇಕು. ಸೈಕಲ್, ನಡಿಗೆಗಳಿಗೆ ಒತ್ತು ಕೊಡಬೇಕು.<br /><span class="Bullet">*</span>ಮನೆಗಳಲ್ಲಿ ರಾಸಾಯನಿಕಗಳ ಬದಲಿಗೆ ಪರಿಸರಸ್ನೇಹಿಯಾದ ಕೊಳೆನಾಶಕಗಳನ್ನು ಬಳಸಬೇಕು.<br /><span class="Bullet">*</span>ಹವಾ ನಿಯಂತ್ರಕಗಳು, ರೆಫ್ರಿಜರೇಟರ್ ಮುಂತಾದವುಗಳ ಬಳಕೆಯ ಮೇಲೆ ನಿಯಂತ್ರಣವಿರಬೇಕು. ನಮ್ಮ ಉಡುಪುಗಳ ಬಳಕೆ ವಾತಾವರಣಕ್ಕೆ ಅನುಕೂಲವಾಗಿರಬೇಕು, ತಂಪುಪಾನೀಯಗಳಿಗೆ ಹೂಜಿಯಂತಹವುಗಳ ಬಳಕೆಯಾಗಬೇಕು.<br /><span class="Bullet">*</span>ಬಳಸದ ಸಮಯದಲ್ಲಿ ವಿದ್ಯುದುಪಕರಣಗಳನ್ನು ಆಫ್ ಮಾಡಿರಬೇಕು.<br /><span class="Bullet">*</span>ಕ್ರಿಮಿನಾಶಕಗಳ ಬಳಕೆಯನ್ನು ನಿಲ್ಲಿಸಬೇಕು.<br /><span class="Bullet">*</span>ಬಹಳ ಮುಖ್ಯವಾಗಿ ಮರಗಳನ್ನು ಕಡಿಯುವುದನ್ನು ನಿಲ್ಲಿಸಬೇಕು.</p>.<p>ಯಾವುದೇ ಅನುಕೂಲಗಳು ಸುಲಭವಾಗಿ ಸಿಗುವುದಿಲ್ಲ. ಅದಕ್ಕೆ ಬೆಲೆ ಕೊಡಬೇಕಾಗುತ್ತದೆ. ಪ್ರಕೃತಿಯೆಡೆಗಿನ ಕಾಳಜಿ ನಿರಂತರವಾಗಿರಲಿ. ಇವನ್ನು ಕಾಪಾಡಿಕೊಳ್ಳಲು ಎಲ್ಲರೂ ಕೈ ಜೋಡಿಸೋಣ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಾಂಟ್ರಿಯಾಲ್ ಪ್ರೊಟೊಕೋಲ್ ಎಂದು ಖ್ಯಾತವಾಗಿರುವ ಘೋಷಣೆಯನ್ನು 1987ರಲ್ಲಿ ಮಾಂಟ್ರಿಯಾಲ್ ನಡೆದ ಅಂತರರಾಷ್ಟ್ರ ಸಮ್ಮೇಳನದಲ್ಲಿ ವಿಶ್ವಸಂಸ್ಥೆ ಅಂಗೀಕರಿಸಿದ ಕಾರಣ, ಪ್ರತಿ ವರ್ಷ ಸೆಪ್ಟೆಂಬರ್ 16 ಅನ್ನು ವಿಶ್ವ ಓಜೋನ್ ದಿನವನ್ನಾಗಿ ಆಚರಿಸಲಾಗುತ್ತಿದೆ.</p>.<p>ನಮ್ಮ ಭೂಮಿ ವಿವಿಧ ಪದರಗಳಿಂದ ಆವರಿಸಲ್ಪಟ್ಟಿದೆ ಎಂಬ ವಿಚಾರ ನಿಮಗೆ ತಿಳಿದಿರುತ್ತದೆ. ಭೂಮಿಯಿಂದ ಎತ್ತರಕ್ಕೆ ಹೋಗುತ್ತ ಈ ಪದರಗಳನ್ನು ದಾಟಿಕೊಂಡು ಹೋಗುತ್ತೇವೆ. ಅದರಂತೆಯೇ ಸೂರ್ಯನ ಕಿರಣಗಳು ಈ ಪದರಗಳನ್ನು ದಾಟಿಕೊಂಡು ಭೂಮಿಯತ್ತ ಬರುತ್ತವೆ. ಈ ಪದರಗಳನ್ನು ದಾಟುವ ಸಮಯದಲ್ಲಿ ಕಿರಣಗಳ ಕೆಲವು ಅಂಶಗಳನ್ನು ಪದರಗಳು ಹಿಡಿದು ಹಾಕುತ್ತವೆ (ಜರಡಿ ಹಿಡಿದಂತೆ).</p>.<p>ಕಾಮನ ಬಿಲ್ಲಿನಲ್ಲಿ ಏಳು ಬಣ್ಣಗಳನ್ನು ನೋಡಿರುತ್ತೀರಿ. ಅವು ಒಟ್ಟಾಗಿ ಬಿಳಿಯ ಬಣ್ಣವನ್ನು ಕೊಡುತ್ತವೆ ಎಂಬುದೂ ನಿಮಗೆ ಗೊತ್ತಿದೆ. ಈ ಬಣ್ಣಗಳು ವಿವಿಧ ಶಾಖದ ಪ್ರಖರತೆ ಹೊಂದಿರುತ್ತವೆ ಎನ್ನುವುದು ಪ್ರಾಯಶಃ ನಿಮಗೆ ತಿಳಿದಿರಬಹುದು.</p>.<p>ಈ ಪ್ರಖರತೆ ಹಲವು ರಾಸಾಯನಿಕ ಕ್ರಿಯೆಗಳಿಗೆ ಕಾರಣವಾಗುತ್ತದೆ. ವಯೊಲೆಟ್ ಶ್ರೇಣಿಗಿಂತ ಹೆಚ್ಚು ಪ್ರಖರತೆಯ ಕಿರಣಗಳನ್ನು ಅಲ್ಟ್ರಾ ವಯೊಲೆಟ್ ಎಂದು ಕರೆಯಲಾಗುವುದು. ಈ ಲೇಖನ ಭೌತವಿಜ್ಞಾನದ ಪಾಠವಾಗಬಾರದು ಎನ್ನುವ ಕಾರಣಕ್ಕೆ ಒಂದು ಸಾಮಾನ್ಯ ರೀತಿಯಲ್ಲಿ ಇದನ್ನು ವಿವರಿಸುವ ಪ್ರಯತ್ನ ಮಾಡಿದ್ದೇನೆ</p>.<p>ಈ ಅಲ್ಟ್ರಾ ವಯೊಲೆಟ್ ಕಿರಣಗಳನ್ನು ಓಝೋನ್ ಪದರ ಹಿಡಿದಿಡುತ್ತದೆ. ಈ ಪದರದಲ್ಲಿ ರಂಧ್ರವಾದ ಕಾರಣ ಕೆಲವು ಕಿರಣಗಳು ಭೂಮಿಯನ್ನು ತಲುಪಿ ಹಲವು ರಾಸಾಯನಿಕ ಪ್ರಕ್ರಿಯೆಗಳನ್ನು ಉಂಟು ಮಾಡಿ, ಹಲವು ಸಮಸ್ಯೆಗಳನ್ನು ಸೃಷ್ಟಿಸಿದೆ.</p>.<p>ಚರ್ಮದ ಸುಡುವಿಕೆ, ದೃಷ್ಟಿದೋಷ ಮತ್ತು ಹಲವು ರೀತಿಯ ಕ್ಯಾನ್ಸರ್ ತಂದೊಡ್ಡಬಹುದು. ಈ ರಂಧ್ರವನ್ನು ಮುಚ್ಚಲು ಜಗತ್ತಿನ ಎಲ್ಲ ರಾಷ್ಟ್ರಗಳೂ ಏಕಪ್ರಕಾರವಾಗಿ ಪ್ರಯತ್ನಿಸಬೇಕು ಎನ್ನುವುದೇ ಈ ಓಝೋನ್ ದಿನಾಚರಣೆಯ ಉದ್ದೇಶ.</p>.<p><span class="Bullet">*</span>ಸ್ವಂತ ಕಾರುಗಳ ಬಳಕೆಯನ್ನು ಕಡಿಮೆ ಮಾಡಬೇಕು. ಸೈಕಲ್, ನಡಿಗೆಗಳಿಗೆ ಒತ್ತು ಕೊಡಬೇಕು.<br /><span class="Bullet">*</span>ಮನೆಗಳಲ್ಲಿ ರಾಸಾಯನಿಕಗಳ ಬದಲಿಗೆ ಪರಿಸರಸ್ನೇಹಿಯಾದ ಕೊಳೆನಾಶಕಗಳನ್ನು ಬಳಸಬೇಕು.<br /><span class="Bullet">*</span>ಹವಾ ನಿಯಂತ್ರಕಗಳು, ರೆಫ್ರಿಜರೇಟರ್ ಮುಂತಾದವುಗಳ ಬಳಕೆಯ ಮೇಲೆ ನಿಯಂತ್ರಣವಿರಬೇಕು. ನಮ್ಮ ಉಡುಪುಗಳ ಬಳಕೆ ವಾತಾವರಣಕ್ಕೆ ಅನುಕೂಲವಾಗಿರಬೇಕು, ತಂಪುಪಾನೀಯಗಳಿಗೆ ಹೂಜಿಯಂತಹವುಗಳ ಬಳಕೆಯಾಗಬೇಕು.<br /><span class="Bullet">*</span>ಬಳಸದ ಸಮಯದಲ್ಲಿ ವಿದ್ಯುದುಪಕರಣಗಳನ್ನು ಆಫ್ ಮಾಡಿರಬೇಕು.<br /><span class="Bullet">*</span>ಕ್ರಿಮಿನಾಶಕಗಳ ಬಳಕೆಯನ್ನು ನಿಲ್ಲಿಸಬೇಕು.<br /><span class="Bullet">*</span>ಬಹಳ ಮುಖ್ಯವಾಗಿ ಮರಗಳನ್ನು ಕಡಿಯುವುದನ್ನು ನಿಲ್ಲಿಸಬೇಕು.</p>.<p>ಯಾವುದೇ ಅನುಕೂಲಗಳು ಸುಲಭವಾಗಿ ಸಿಗುವುದಿಲ್ಲ. ಅದಕ್ಕೆ ಬೆಲೆ ಕೊಡಬೇಕಾಗುತ್ತದೆ. ಪ್ರಕೃತಿಯೆಡೆಗಿನ ಕಾಳಜಿ ನಿರಂತರವಾಗಿರಲಿ. ಇವನ್ನು ಕಾಪಾಡಿಕೊಳ್ಳಲು ಎಲ್ಲರೂ ಕೈ ಜೋಡಿಸೋಣ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>