<p><strong>ವಾಷಿಂಗ್ಟನ್: </strong>ಭೂಮಿಯ ಆರನೇ ಒಂದು ಭಾಗದಲ್ಲಿರುವ ಬಳಕೆ ಯೋಗ್ಯ ಜಮೀನು ಹಾಗೂ ಸಿಹಿನೀರಿರುವ ಭಾಗವು ರಕ್ಷಿತ ಇಲ್ಲವೇ ಸಂರಕ್ಷಣೆಗೊಳಪಟ್ಟ ಪ್ರದೇಶದಲ್ಲಿದೆ. ಜೀವವೈವಿಧ್ಯದ ನಷ್ಟ ತಡೆಯುವಲ್ಲಿ ಈ ಪ್ರದೇಶಗಳೇ ಮಹತ್ವದ ಪಾತ್ರ ವಹಿಸುತ್ತವೆ ಎಂದು ವಿಶ್ವಸಂಸ್ಥೆ ಹೇಳಿದೆ.</p>.<p>ವಿಶ್ವಸಂಸ್ಥೆ ‘ಪ್ರೊಟೆಕ್ಟೆಡ್ ಪ್ಲ್ಯಾನೆಟ್’ ಎಂಬ ವರದಿಯನ್ನು ಬಿಡುಗಡೆ ಮಾಡಿದೆ. ಜೀವವೈವಿಧ್ಯ, ಹವಾಮಾನ ಬದಲಾವಣೆ ಮತ್ತಿತರ ವಿಷಯಗಳ ಮೇಲೆ ಈ ವರದಿಯಲ್ಲಿ ಬೆಳಕು ಚೆಲ್ಲಲಾಗಿದೆ.</p>.<p>‘ರಕ್ಷಿತ ಮತ್ತು ಸಂರಕ್ಷಿತ ಪ್ರದೇಶಗಳನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡುವುದು ಮುಖ್ಯ. ಈ ಪ್ರದೇಶದ ಒಟ್ಟು ವಿಸ್ತೀರ್ಣವನ್ನು ಹೆಚ್ಚಿಸಲು ಗಮನ ಹರಿಸಬೇಕು. ಇದರಿಂದ ಹವಾಮಾನದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಬಹುದು. ಜೀವವೈವಿಧ್ಯಕ್ಕಾಗುವ ನಷ್ಟವನ್ನು ತಡೆಯಲು ಸಾಧ್ಯ’ ಎಂದು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ವಿಶ್ವ ಸಂರಕ್ಷಣೆ ಕಣ್ಗಾವಲು ಕೇಂದ್ರದ ನಿರ್ದೇಶಕ ನೆವಿಲ್ ಆ್ಯಶ್ ಪ್ರತಿಪಾದಿಸಿದ್ದಾರೆ.</p>.<p>‘ಸಮುದ್ರದಲ್ಲಿರುವ ಪರಿಸರವನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಕಳೆದ ದಶಕದಲ್ಲಿ ಗಮನಾರ್ಹ ಕಾರ್ಯವಾಗಿದೆ. ಆದರೆ, ಇದೇ ಅವಧಿಯಲ್ಲಿ ಭೂಭಾಗದಲ್ಲಿನ ಸಂರಕ್ಷಿತ ಪ್ರದೇಶವನ್ನು ವಿಸ್ತರಿಸುವ ಕಾರ್ಯದಲ್ಲಿ ಅಷ್ಟೊಂದು ಪ್ರಗತಿಯಾಗಿಲ್ಲ’ ಎಂದು ಡ್ಯೂಕ್ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನಿ ಸ್ಟುವರ್ಟ್ ಪಿಮ್ ಹೇಳುತ್ತಾರೆ.</p>.<p>‘ರಕ್ಷಿತ ಪ್ರದೇಶಗಳನ್ನು ವಿಸ್ತೀರ್ಣದ ದೃಷ್ಟಿಯಿಂದ ಮಾತ್ರ ನೋಡಬಾರದು. ಅವುಗಳ ಗುಣಮಟ್ಟದ ಕಡೆಗೂ ಗಮನ ಹರಿಸುವುದು ಮುಖ್ಯ’ ಎಂದು ಪಿಮ್ ಪ್ರತಿಪಾದಿಸುತ್ತಾರೆ.</p>.<p>ಕರಾವಳಿ ಹಾಗೂ ಸಾಗರದ ನೀರಿನ ಪೈಕಿ ಶೇ 8ರಷ್ಟು ಭಾಗ ರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿಯೇ ಇದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾಷಿಂಗ್ಟನ್: </strong>ಭೂಮಿಯ ಆರನೇ ಒಂದು ಭಾಗದಲ್ಲಿರುವ ಬಳಕೆ ಯೋಗ್ಯ ಜಮೀನು ಹಾಗೂ ಸಿಹಿನೀರಿರುವ ಭಾಗವು ರಕ್ಷಿತ ಇಲ್ಲವೇ ಸಂರಕ್ಷಣೆಗೊಳಪಟ್ಟ ಪ್ರದೇಶದಲ್ಲಿದೆ. ಜೀವವೈವಿಧ್ಯದ ನಷ್ಟ ತಡೆಯುವಲ್ಲಿ ಈ ಪ್ರದೇಶಗಳೇ ಮಹತ್ವದ ಪಾತ್ರ ವಹಿಸುತ್ತವೆ ಎಂದು ವಿಶ್ವಸಂಸ್ಥೆ ಹೇಳಿದೆ.</p>.<p>ವಿಶ್ವಸಂಸ್ಥೆ ‘ಪ್ರೊಟೆಕ್ಟೆಡ್ ಪ್ಲ್ಯಾನೆಟ್’ ಎಂಬ ವರದಿಯನ್ನು ಬಿಡುಗಡೆ ಮಾಡಿದೆ. ಜೀವವೈವಿಧ್ಯ, ಹವಾಮಾನ ಬದಲಾವಣೆ ಮತ್ತಿತರ ವಿಷಯಗಳ ಮೇಲೆ ಈ ವರದಿಯಲ್ಲಿ ಬೆಳಕು ಚೆಲ್ಲಲಾಗಿದೆ.</p>.<p>‘ರಕ್ಷಿತ ಮತ್ತು ಸಂರಕ್ಷಿತ ಪ್ರದೇಶಗಳನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡುವುದು ಮುಖ್ಯ. ಈ ಪ್ರದೇಶದ ಒಟ್ಟು ವಿಸ್ತೀರ್ಣವನ್ನು ಹೆಚ್ಚಿಸಲು ಗಮನ ಹರಿಸಬೇಕು. ಇದರಿಂದ ಹವಾಮಾನದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಬಹುದು. ಜೀವವೈವಿಧ್ಯಕ್ಕಾಗುವ ನಷ್ಟವನ್ನು ತಡೆಯಲು ಸಾಧ್ಯ’ ಎಂದು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ವಿಶ್ವ ಸಂರಕ್ಷಣೆ ಕಣ್ಗಾವಲು ಕೇಂದ್ರದ ನಿರ್ದೇಶಕ ನೆವಿಲ್ ಆ್ಯಶ್ ಪ್ರತಿಪಾದಿಸಿದ್ದಾರೆ.</p>.<p>‘ಸಮುದ್ರದಲ್ಲಿರುವ ಪರಿಸರವನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಕಳೆದ ದಶಕದಲ್ಲಿ ಗಮನಾರ್ಹ ಕಾರ್ಯವಾಗಿದೆ. ಆದರೆ, ಇದೇ ಅವಧಿಯಲ್ಲಿ ಭೂಭಾಗದಲ್ಲಿನ ಸಂರಕ್ಷಿತ ಪ್ರದೇಶವನ್ನು ವಿಸ್ತರಿಸುವ ಕಾರ್ಯದಲ್ಲಿ ಅಷ್ಟೊಂದು ಪ್ರಗತಿಯಾಗಿಲ್ಲ’ ಎಂದು ಡ್ಯೂಕ್ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನಿ ಸ್ಟುವರ್ಟ್ ಪಿಮ್ ಹೇಳುತ್ತಾರೆ.</p>.<p>‘ರಕ್ಷಿತ ಪ್ರದೇಶಗಳನ್ನು ವಿಸ್ತೀರ್ಣದ ದೃಷ್ಟಿಯಿಂದ ಮಾತ್ರ ನೋಡಬಾರದು. ಅವುಗಳ ಗುಣಮಟ್ಟದ ಕಡೆಗೂ ಗಮನ ಹರಿಸುವುದು ಮುಖ್ಯ’ ಎಂದು ಪಿಮ್ ಪ್ರತಿಪಾದಿಸುತ್ತಾರೆ.</p>.<p>ಕರಾವಳಿ ಹಾಗೂ ಸಾಗರದ ನೀರಿನ ಪೈಕಿ ಶೇ 8ರಷ್ಟು ಭಾಗ ರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿಯೇ ಇದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>