<p><strong>ನಾಗಪುರ</strong>: ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯಲ್ಲಿನ ಲೋನಾರ್ ಕೆರೆಯ ನೀರು ಈಚೆಗೆ ಗುಲಾಬಿ ಬಣ್ಣಕ್ಕೆ ತಿರುಗಿದ್ದರ ಹಿಂದಿನ ಸೋಜಿಗವನ್ನು ಪತ್ತೆ ಮಾಡಲು ಇಲ್ಲಿನ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆಯ (ಎನ್ಇಇಆರ್ಐ) ತಂಡ ಶೀಘ್ರವೇ ಭೇಟಿ ನೀಡಲಿದೆ.</p>.<p>ದುಂಡಗಿನ ಆಕೃತಿಯುಳ್ಳ ಲೋನಾರ್ ಕೆರೆಯು ಸುಮಾರು 50 ಸಾವಿರ ವರ್ಷಗಳ ಹಿಂದೆ ಉಲ್ಕಾಪಾತದ ಪರಿಣಾಮ ಅಸ್ತಿತ್ವಕ್ಕೆ ಬಂದಿದೆ. ಇದು, ಮಹಾರಾಷ್ಟ್ರ ಹೆಸರಾಂತ ಪ್ರವಾಸಿ ತಾಣವೂ ಆಗಿದ್ದು, ಪ್ರಕೃತಿ ಪ್ರಿಯರು ಹಾಗೂ ವಿಜ್ಞಾನಿಗಳನ್ನು ಸೆಳೆಯುತ್ತಿದೆ. ಕೆರೆಯ ಒಟ್ಟು ತ್ಯಾಜ್ಯ 1.2 ಕಿ.ಮೀ ಆಗಿದೆ.</p>.<p>ಕೆರೆಯ ನೀರು ಇತ್ತೀಚೆಗೆ ಗುಲಾಬಿ ಬಣ್ಣಕ್ಕೆ ತಿರುಗಿದ್ದು, ಸ್ಥಳೀಯರಿಗಷ್ಟೇ ಅಲ್ಲದೆ ಪ್ರಕೃತಿ ಪ್ರಿಯರು, ವಿಜ್ಞಾನಿಗಳ ಆಸಕ್ತಿಯನ್ನು ಕೆರಳಿಸಿತ್ತು.</p>.<p>ಪರಿಣತರ ತಂಡ ಕೆರೆಯ ನೀರನ್ನು ವಿಶ್ಲೇಷಿಸಲಿದ್ದು, ಬಣ್ಣ ಬದಲಾವಣೆಯ ಕಾರಣವನ್ನು ಪತ್ತೆ ಮಾಡಲಿದೆ ಎಂದು ಬುಲ್ದಾನಾ ಜಿಲ್ಲಾಧಿಕಾರಿ ಸುಮನ್ ಚಂದ್ರಾ ತಿಳಿಸಿದರು.</p>.<p>ಬ್ರಿಟಿಷ್ ಅಧಿಕಾರಿ ಸಿ.ಜೆ.ಇ. ಅಲೆಕ್ಸಾಂಡರ್ ಅವರು 1823ರಲ್ಲಿ ಈ ಕೆರೆಯ ತಾಣವನ್ನು ವಿಶಿಷ್ಟ ಭೌಗೋಳಿಕಸ್ಥಳ ಎಂದು ಗುರುತಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಗಪುರ</strong>: ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯಲ್ಲಿನ ಲೋನಾರ್ ಕೆರೆಯ ನೀರು ಈಚೆಗೆ ಗುಲಾಬಿ ಬಣ್ಣಕ್ಕೆ ತಿರುಗಿದ್ದರ ಹಿಂದಿನ ಸೋಜಿಗವನ್ನು ಪತ್ತೆ ಮಾಡಲು ಇಲ್ಲಿನ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆಯ (ಎನ್ಇಇಆರ್ಐ) ತಂಡ ಶೀಘ್ರವೇ ಭೇಟಿ ನೀಡಲಿದೆ.</p>.<p>ದುಂಡಗಿನ ಆಕೃತಿಯುಳ್ಳ ಲೋನಾರ್ ಕೆರೆಯು ಸುಮಾರು 50 ಸಾವಿರ ವರ್ಷಗಳ ಹಿಂದೆ ಉಲ್ಕಾಪಾತದ ಪರಿಣಾಮ ಅಸ್ತಿತ್ವಕ್ಕೆ ಬಂದಿದೆ. ಇದು, ಮಹಾರಾಷ್ಟ್ರ ಹೆಸರಾಂತ ಪ್ರವಾಸಿ ತಾಣವೂ ಆಗಿದ್ದು, ಪ್ರಕೃತಿ ಪ್ರಿಯರು ಹಾಗೂ ವಿಜ್ಞಾನಿಗಳನ್ನು ಸೆಳೆಯುತ್ತಿದೆ. ಕೆರೆಯ ಒಟ್ಟು ತ್ಯಾಜ್ಯ 1.2 ಕಿ.ಮೀ ಆಗಿದೆ.</p>.<p>ಕೆರೆಯ ನೀರು ಇತ್ತೀಚೆಗೆ ಗುಲಾಬಿ ಬಣ್ಣಕ್ಕೆ ತಿರುಗಿದ್ದು, ಸ್ಥಳೀಯರಿಗಷ್ಟೇ ಅಲ್ಲದೆ ಪ್ರಕೃತಿ ಪ್ರಿಯರು, ವಿಜ್ಞಾನಿಗಳ ಆಸಕ್ತಿಯನ್ನು ಕೆರಳಿಸಿತ್ತು.</p>.<p>ಪರಿಣತರ ತಂಡ ಕೆರೆಯ ನೀರನ್ನು ವಿಶ್ಲೇಷಿಸಲಿದ್ದು, ಬಣ್ಣ ಬದಲಾವಣೆಯ ಕಾರಣವನ್ನು ಪತ್ತೆ ಮಾಡಲಿದೆ ಎಂದು ಬುಲ್ದಾನಾ ಜಿಲ್ಲಾಧಿಕಾರಿ ಸುಮನ್ ಚಂದ್ರಾ ತಿಳಿಸಿದರು.</p>.<p>ಬ್ರಿಟಿಷ್ ಅಧಿಕಾರಿ ಸಿ.ಜೆ.ಇ. ಅಲೆಕ್ಸಾಂಡರ್ ಅವರು 1823ರಲ್ಲಿ ಈ ಕೆರೆಯ ತಾಣವನ್ನು ವಿಶಿಷ್ಟ ಭೌಗೋಳಿಕಸ್ಥಳ ಎಂದು ಗುರುತಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>