ಮಂಗಳವಾರ, ಮಾರ್ಚ್ 28, 2023
23 °C

ದೇಶದ 17 ನಗರಗಳ ವಾಯುಗುಣಮಟ್ಟ ಭೀಕರ: ವೈದ್ಯರ ಆತಂಕ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯು ಶನಿವಾರ (ಸಿಪಿಸಿಬಿ) ಭಾರತದ 138 ನಗರಗಳ ವಾಯು ಗುಣಮಟ್ಟ ಸೂಚ್ಯಂಕಗಳನ್ನು ಬಿಡುಗಡೆ ಮಾಡಿದೆ. ಅವುಗಳಲ್ಲಿ 17 ನಗರಗಳ ವಾಯುಗುಣಮಟ್ಟವು ಅತ್ಯಂತ ಕೆಟ್ಟದ್ದಾಗಿದೆ

ಉತ್ತರ ಪ್ರದೇಶದ ಘಾಜಿಯಾಬಾದ್‌ ಪರಿಸ್ಥಿತಿ ಅತ್ಯಂತ ಭೀಕರವಾಗಿದ್ದು, ಅದರ ವಾಯು ಗುಣಮಟ್ಟ ಸೂಚ್ಯಂಕವು 466 ಆಗಿದೆ.

ಘಾಜಿಯಾಬಾದ್‌ ನಂತರದ ಸ್ಥಾನಗಳಲ್ಲಿ ಬಾಗ್‌ಪತ್, ವಲ್ಲಬ್‌ಗಢ್, ಬುಲಂದ್‌ಶಹರ್, ಚಾರ್ಖಿ ದಾದ್ರಿ, ದೆಹಲಿ, ಫರಿದಾಬಾದ್, ಫಿರೋಜಾಬಾದ್, ಗ್ರೇಟರ್ ನೋಯ್ಡಾ, ಗುರುಗ್ರಾಮ, ಹಾಪುರ, ಹಿಸಾರ್, ಜಿಂದ್, ಮೀರತ್, ಮೊರಾದಾಬಾದ್, ನೋಯ್ಡಾ ಮತ್ತು ವೃಂದಾವನ ನಗರಗಳು ಸಿಪಿಸಿಬಿ ಪಟ್ಟಿಯಲ್ಲಿವೆ.

ದೀಪಾವಳಿ ಹಿನ್ನೆಲೆಯಲ್ಲಿ ದೇಶದ ಹಲವು ನಗರಗಳ ವಾಯುಗುಣಮಟ್ಟ ಕಳೆದ ಎರಡು ದಿನಗಳಲ್ಲಿ ತೀವ್ರವಾಗಿ ಕುಸಿದಿದೆ.

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿನ ವಾಯುಗುಣಮಟ್ಟವು ತೃಪ್ತಿದಾಯಕವಾಗಿದೆ. ಬೆಂಗಳೂರಿನ ವಾಯುಗುಣಮಟ್ಟ ಸೂಚ್ಯಂಕವು 70 ಆಗಿದೆ.

ವಾಯುಮಾಲಿನ್ಯ ಕೋವಿಡ್‌ ಸಾಂಕ್ರಾಮಿಕಕ್ಕಿಂತಲೂ ದೊಡ್ಡದು : ತಜ್ಞರು

ವಾಯುಮಾಲಿನ್ಯವು ಈಗ ಕೋವಿಡ್‌ಗಿಂತ ದೊಡ್ಡ ಅಪಾಯವಾಗಿ ಮಾರ್ಪಟ್ಟಿದೆ ಎಂದು ದೆಹಲಿಯ ಎಐಐಎಂಎಸ್‌ನ ಹೃದ್ರೋಗ ತಜ್ಞ, ಪ್ರಾಧ್ಯಾಪಕ ಅಂಬುಜ್‌ ರಾಯ್‌ ಅವರು ಅಭಿಪ್ರಾಯಪಟ್ಟಿದ್ದಾರೆ.

ವಯಸ್ಸಾದವರು, ಶ್ವಾಸಕೋಶ ಮತ್ತು ಹೃದಯದ ಸಮಸ್ಯೆಗಳಿರುವ ರೋಗಿಗಳು, ಕೋವಿಡ್‌ನಿಂದ ಚೇತರಿಸಿಕೊಂಡ ರೋಗಿಗಳು ಮತ್ತು ಗರ್ಭಿಣಿಯರು ಇಂಥ ಕಳಪೆ ವಾಯುಗುಣಕ್ಕೆ ಬಹುಬೇಗ ತುತ್ತಾಗುತ್ತಾರೆ ಎಂದು ಅವರು ಎಚ್ಚರಿಸಿದ್ದಾರೆ.

‘ಎಲ್ಲರೂ ವಾಯು ಮಾಲಿನ್ಯದಿಂದ ಬಳಲುತ್ತಿದ್ದಾರೆ. ಜನರು ತಲೆನೋವು, ಉಸಿರಾಟದ ಸಮಸ್ಯೆಗಳ ಬಗ್ಗೆ ದೂರುತ್ತಿದ್ದಾರೆ. ವಿಶೇಷವಾಗಿ ಅಸ್ತಮಾ ಮತ್ತು ಶ್ವಾಸಕೋಶದ ಸಮಸ್ಯೆಗಳಿರುವವರು, ಚಿಕ್ಕ ಮಕ್ಕಳು ತುಂಬಾ ಸಮಸ್ಯೆಗೆ ಒಳಗಾಗಿದ್ದಾರೆ. ಈ ಮಾಲಿನ್ಯವು ಮಕ್ಕಳ ಮೆದುಳಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು,’ ಎಂದು ವೈದ್ಯ ನರೇಶ್ ಟ್ರೆಹಾನ್ ಎಂಬುವವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು