ಗುರುವಾರ, 17 ಜುಲೈ 2025
×
ADVERTISEMENT
ADVERTISEMENT

ಒಳನೋಟ | ಕಮರುತ್ತಿದೆ ‘ಬಾಲ್ಯ’ದ ಬದುಕು

ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ಕೊರತೆ; ಬೇಕಿದೆ ತಳಮಟ್ಟದಲ್ಲಿಯೇ ಕಟ್ಟುನಿಟ್ಟಿನ ಕ್ರಮ
ಪ್ರಮೋದ ಕುಲಕರ್ಣಿ
Published : 10 ಆಗಸ್ಟ್ 2024, 23:30 IST
Last Updated : 10 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments
ಬಾಲ್ಯವಿವಾಹ ಅಪಾಯದ ಕುರಿತು ಕೊಪ್ಪಳದಲ್ಲಿ ನಡೆದಿದ್ದ ಜಾಗೃತಿ ಜಾಥಾದ ನೋಟ (ಸಂಗ್ರಹ ಚಿತ್ರ)

ಬಾಲ್ಯವಿವಾಹ ಅಪಾಯದ ಕುರಿತು ಕೊಪ್ಪಳದಲ್ಲಿ ನಡೆದಿದ್ದ ಜಾಗೃತಿ ಜಾಥಾದ ನೋಟ (ಸಂಗ್ರಹ ಚಿತ್ರ)

ಮುಳ್ಳಿನ ಬೇಲಿಗೆ ತಳ್ಳುತ್ತಿರುವ ಪೋಷಕರು
ಬಾಲ್ಯವಿವಾಹ ಪ್ರಕರಣಗಳಲ್ಲಿ ಅಧಿಕಾರಿಗಳ ಕೈಗೆ ಸಿಕ್ಕು ಬಿದ್ದರೆ ಬಾಲಕ, ಬಾಲಕಿಯ ಪೋಷಕರು, ಪುರೋಹಿತ, ಶಾಮಿಯಾನ ಸೌಲಭ್ಯ ಒದಗಿಸಿದ ಅಂಗಡಿಯ ಮಾಲೀಕ, ಸ್ಥಳ ನೀಡಿದವರು, ಸಾಕ್ಷಿಯಾದವರು, ಅಡುಗೆಯವರು ಹೀಗೆ ಪ್ರತಿಯೊಬ್ಬರ ಮೇಲೂ ಪ್ರಕರಣ ದಾಖಲಿಸಲಾಗುತ್ತದೆ. ಆದ್ದರಿಂದ ಇಂಥ ಪ್ರಕರಣಗಳನ್ನು ಪತ್ತೆ ಹೆಚ್ಚಲು ತೆರಳುವಾಗ ಅಧಿಕಾರಿಗಳು ಬಾಲ್ಯವಿವಾಹಕ್ಕೆ ಸಿದ್ಧವಾದ ಬಾಲಕ–ಬಾಲಕಿಯರ ಪೋಷಕರಿಂದ ಹಾಗೂ ಅವರ ಕುಟುಂಬದವರಿಂದ ಭಾರಿ ಪ್ರತಿರೋಧ ಎದುರಿಸಬೇಕಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಬಲಾಢ್ಯವಾಗಿರುವ ಕೆಲ ಸಮುದಾಯಗಳ ಮುಖಂಡರ ಒತ್ತಡ ಕೂಡ ಪ್ರಕರಣ ದಾಖಲಿಸದಂತೆ ಮಾಡುತ್ತಿದೆ.
ಬಾಲ್ಯವಿವಾಹ ಅಪಾಯದ ಕುರಿತು ಕೊಪ್ಪಳದಲ್ಲಿ ನಡೆದಿದ್ದ ಜಾಗೃತಿ ಜಾಥಾದ ನೋಟ (ಸಂಗ್ರಹ ಚಿತ್ರ)
ಬಾಲ್ಯವಿವಾಹ ಅಪಾಯದ ಕುರಿತು ಕೊಪ್ಪಳದಲ್ಲಿ ನಡೆದಿದ್ದ ಜಾಗೃತಿ ಜಾಥಾದ ನೋಟ (ಸಂಗ್ರಹ ಚಿತ್ರ)
ಮುಂದೆಯೂ ಇದೆ ಬದುಕು:
ನಾನಾ ಕಾರಣಗಳಿಂದಾಗಿ ಬಾಲ್ಯವಿವಾಹಕ್ಕೆ ಬಲಿಪಶುವಾದ ಅನೇಕ ಬಾಲಕಿಯರು ಅದರ ಕುಣಿಕೆಯಿಂದ ಹೊರಬಂದು ಈಗ ಸುಂದರ ಬದುಕು ರೂಪಿಸಿಕೊಂಡವರು ನಮ್ಮ ನಡುವೆ ಇದ್ದಾರೆ. ರಾತ್ರೋ ರಾತ್ರಿ ಮದುವೆಗೆ ಸಿದ್ಧವಾಗಬೇಕಾದ ‘ಬಾಣಲೆ’ಗೆ ಬಿದ್ದಿದ್ದ ಯಲಬುರ್ಗಾ ತಾಲ್ಲೂಕಿನ ಯುವತಿ ತನ್ನದಲ್ಲದ ತಪ್ಪಿಗೆ ಯಾಕೆ ಬದುಕು ಹಾಳುಮಾಡಿಕೊಳ್ಳಬೇಕು ಎಂದು ನಿರ್ಧರಿಸಿ ಬಾಲ್ಯದಲ್ಲಿ ಎದುರಾಗಿದ್ದ ‘ಮಾಂಗಲ್ಯ’ದ ಸಂಕೋಲೆ ಕಿತ್ತು ಹಾಕಿ ಹೊಸ ಬದುಕು ಕಟ್ಟಿಕೊಂಡಿದ್ದಾಳೆ. ಎಂ.ಕಾಂ ಮುಗಿಸಿ ಈಗ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಅವರಂತೆಯೇ ಬದುಕು ಕಟ್ಟಿಕೊಳ್ಳಲು ಬಾಲ್ಯವಿವಾಹದ ಕೆಂಡದೊಳಗೆ ಬಿದ್ದ ಎಲ್ಲ ಬಾಲಕಿಯರಿಗೂ ‘ಭಾಗ್ಯದ ಬಾಗಿಲು’ ಇದ್ದೇ ಇದೆ. ಪರಿಸ್ಥಿತಿ ಎದುರಿಸುವ ಛಾತಿಯೊಂದು ಜೊತೆಗಿದ್ದರೆ ಸಾಕು.
ಡಾ.ಶೈಲಜಾ ತಲವಾಡೆ
ಡಾ.ಶೈಲಜಾ ತಲವಾಡೆ
ಬಾಲ್ಯ ವಿವಾಹಕ್ಕೆ ಒಳಗಾಗುವ ಬಾಲಕಿಯರಿಗೆ ಕೆಲವೊಮ್ಮೆ ಬಾಣಂತಿ, ಶಿಶುವಿನ ಸಾವು ಸಂಭವಿಸುವ ಪ್ರಮಾಣವೂ ಅಧಿಕವಾಗಿರುತ್ತದೆ. ಜನಿಸುವ ಮಕ್ಕಳ ತೂಕ ಕಡಿಮೆಯಾಗಿ ಅಪೌಷ್ಟಿಕತೆಯಿಂದ ಬಳಲುವ ಸಾಧ್ಯತೆ ಹೆಚ್ಚಿರುತ್ತದೆ.
ಡಾ.ಶೈಲಜಾ ತಲವಾಡೆ, ಸ್ತ್ರೀರೋಗ ತಜ್ಞೆ, ಬೀದರ್‌ ಜಿಲ್ಲೆ
ಲಕ್ಷ್ಮಿ ಹೆಬ್ಬಾಳಕರ್
ಲಕ್ಷ್ಮಿ ಹೆಬ್ಬಾಳಕರ್
ಬಾಲ್ಯವಿವಾಹ ಹೆಚ್ಚಾಗಲು ನಮ್ಮ ಇಲಾಖೆಯಲ್ಲಿನ ದೋಷಗಳಷ್ಟೇ ಕಾರಣವಲ್ಲ. ಸ್ಥಳೀಯ ಗ್ರಾಮ ಪಂಚಾಯಿತಿಗಳಿಂದ ಹಿಡಿದು ಎಲ್ಲರ ಸಹಕಾರದಿಂದ ಇದನ್ನು ತಡೆಯಬೇಕಿದೆ. ಬಾಲಕಿಯರು ಗರ್ಭಿಣಿಯಾಗುವುದನ್ನು ಹಾಗೂ ಬಾಲ್ಯವಿವಾಹವನ್ನು ಬೇರು ಮಟ್ಟದಿಂದ ಹೋಗಲಾಡಿಸಲು ಕ್ರಮ ವಹಿಸುತ್ತೇವೆ.
ಲಕ್ಷ್ಮಿ ಹೆಬ್ಬಾಳಕರ್‌, ಸಚಿವೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ‘ಮಕ್ಕಳ ಕಾವಲು ಸಮಿತಿ’ ರಚಿಸಬೇಕು. ಶಾಲಾ ಶಿಕ್ಷಕರು ಎನ್‌ಜಿಒಗಳು ಆರೋಗ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ 20ರಿಂದ 22 ಜನರ ಸಮಿತಿ ರಚಿಸಬೇಕು. ಪಂಚಾಯಿತಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳೇ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ಪ್ರತಿ ತಿಂಗಳು ಸಭೆ ನಡೆಸಿ ಬಾಲ್ಯ ವಿವಾಹ ತಡೆಯಬೇಕು.
ವೆಂಕಟೇಶ್ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT