ಬಾಲ್ಯವಿವಾಹ ಅಪಾಯದ ಕುರಿತು ಕೊಪ್ಪಳದಲ್ಲಿ ನಡೆದಿದ್ದ ಜಾಗೃತಿ ಜಾಥಾದ ನೋಟ (ಸಂಗ್ರಹ ಚಿತ್ರ)
ಬಾಲ್ಯ ವಿವಾಹಕ್ಕೆ ಒಳಗಾಗುವ ಬಾಲಕಿಯರಿಗೆ ಕೆಲವೊಮ್ಮೆ ಬಾಣಂತಿ, ಶಿಶುವಿನ ಸಾವು ಸಂಭವಿಸುವ ಪ್ರಮಾಣವೂ ಅಧಿಕವಾಗಿರುತ್ತದೆ. ಜನಿಸುವ ಮಕ್ಕಳ ತೂಕ ಕಡಿಮೆಯಾಗಿ ಅಪೌಷ್ಟಿಕತೆಯಿಂದ ಬಳಲುವ ಸಾಧ್ಯತೆ ಹೆಚ್ಚಿರುತ್ತದೆ.ಡಾ.ಶೈಲಜಾ ತಲವಾಡೆ, ಸ್ತ್ರೀರೋಗ ತಜ್ಞೆ, ಬೀದರ್ ಜಿಲ್ಲೆ
ಬಾಲ್ಯವಿವಾಹ ಹೆಚ್ಚಾಗಲು ನಮ್ಮ ಇಲಾಖೆಯಲ್ಲಿನ ದೋಷಗಳಷ್ಟೇ ಕಾರಣವಲ್ಲ. ಸ್ಥಳೀಯ ಗ್ರಾಮ ಪಂಚಾಯಿತಿಗಳಿಂದ ಹಿಡಿದು ಎಲ್ಲರ ಸಹಕಾರದಿಂದ ಇದನ್ನು ತಡೆಯಬೇಕಿದೆ. ಬಾಲಕಿಯರು ಗರ್ಭಿಣಿಯಾಗುವುದನ್ನು ಹಾಗೂ ಬಾಲ್ಯವಿವಾಹವನ್ನು ಬೇರು ಮಟ್ಟದಿಂದ ಹೋಗಲಾಡಿಸಲು ಕ್ರಮ ವಹಿಸುತ್ತೇವೆ.ಲಕ್ಷ್ಮಿ ಹೆಬ್ಬಾಳಕರ್, ಸಚಿವೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ‘ಮಕ್ಕಳ ಕಾವಲು ಸಮಿತಿ’ ರಚಿಸಬೇಕು. ಶಾಲಾ ಶಿಕ್ಷಕರು ಎನ್ಜಿಒಗಳು ಆರೋಗ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ 20ರಿಂದ 22 ಜನರ ಸಮಿತಿ ರಚಿಸಬೇಕು. ಪಂಚಾಯಿತಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳೇ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ಪ್ರತಿ ತಿಂಗಳು ಸಭೆ ನಡೆಸಿ ಬಾಲ್ಯ ವಿವಾಹ ತಡೆಯಬೇಕು.ವೆಂಕಟೇಶ್ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.