ಇದು ಸುಳ್ಳು ಸುದ್ದಿ ಎಂದು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್ಚೆಕ್ ಪ್ರಕಟಿಸಿದೆ. ‘ಸೆಪ್ಟೆಂಬರ್ 23ರಂದು ಭಾರತ ಜೋಡೊ ಯಾತ್ರೆಗೆ ವಿರಾಮ ನೀಡಲಾಗುತ್ತದೆ. ಅಂದು ಯಾತ್ರಿಗಳ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ ಎಂದು ಪಕ್ಷದ ನಾಯಕ ಜೈರಾಂ ರಮೇಶ್ ಅವರು ಸೆಪ್ಟೆಂಬರ್ 20ರಂದೇ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದರು. ಆ ವಿಡಿಯೊ ಟ್ವಿಟರ್ನಲ್ಲಿ ಲಭ್ಯವಿದೆ. ಜತೆಗೆ ದಿ ಹಿಂದೂ ಪತ್ರಿಕೆಯ ಸೆಪ್ಟೆಂಬರ್ 21ರ ಸಂಚಿಕೆಯಲ್ಲೂ ಈ ಸುದ್ದಿ ಪ್ರಕಟವಾಗಿದೆ. ಸೆಪ್ಟೆಂಬರ್ 23ರ ಬಂದ್ ಆಚರಣೆಗೆ ಪಿಎಫ್ಐ ಕರೆ ನೀಡಿದ್ದು ಸೆಪ್ಟೆಂಬರ್ 22ರ ಸಂಜೆ. ಹೀಗಾಗಿ ಪಿಎಫ್ಐ ಬಂದ್ ಕರೆಗೂ, ಭಾರತ ಜೋಡೊ ಜಾತ್ರೆಯ ವಿರಾಮಕ್ಕೂ ಸಂಬಂಧವಿಲ್ಲ. ಬಿಜೆಪಿ ನಾಯಕರು ಸುಳ್ಳು ಮಾಹಿತಿ ಟ್ವೀಟ್ ಮಾಡುವ ಮೂಲಕ ಜನರ ಹಾದಿ ತಪ್ಪಿಸಿದ್ದಾರೆ’ ಎಂದು ಫ್ಯಾಕ್ಟ್ಚೆಕ್ನಲ್ಲಿ ವಿವರಿಸಲಾಗಿದೆ.