‘ಭಾರತದೊಂದಿಗೆ ಚೀನಾ ಸಂಘರ್ಷ ತಾರಕಕ್ಕೇರಿರುವ ಸಮಯದಲ್ಲಿ ಚೀನಾ ಗಡಿಯಲ್ಲಿ ಜಪಾನ್ ಖಂಡಾಂತರ ಕ್ಷಿಪಣಿಗಳನ್ನು ನಿಯೋಜಿಸಿದೆ’ ಎಂದು ಜೂನ್ 20ರಂದು ಥಾಯ್ಲೆಂಡ್ ಮೂಲದ ‘ಏಷ್ಯಾ ನ್ಯೂಸ್’ ಪ್ರಕಟಿಸಿತ್ತು.ಪೇಟ್ರಿಯಾಟ್ ಪ್ಯಾಕ್ -3 ಎಂಎಸ್ಇ ವಾಯುರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ತನ್ನ 4 ವಾಯುನೆಲೆಗಳಲ್ಲಿ ನಿಯೋಜನೆ ಮಾಡಲು ಜಪಾನ್ ನಿರ್ಧರಿಸಿದೆ ಎಂದು ಪತ್ರಿಕೆ ವರದಿ ಮಾಡಿತ್ತು. ಇದು ಟ್ವಿಟರ್ ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಬಾರಿ ಶೇರ್ ಆಗಿತ್ತು. ರಿಪಬ್ಲಿಕ್ ಟಿ.ವಿ ಕೂಡ ಟ್ವೀಟ್ ಮಾಡಿತ್ತು. ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಟ್ವಿಟರ್ನಲ್ಲಿ ಇದನ್ನು ಹಂಚಿಕೊಂಡಿದ್ದರು.