‘ಕೊರೊನಾ ವೈರಸ್ ಪ್ರಸರಣ ತಡೆಗೆ ದೇಶದಾದ್ಯಂತ ಹೇರಲಾಗಿದ್ದ ಲಾಕ್ಡೌನ್ ಎಷ್ಟೊ ಜನರ ಅನ್ನಕ್ಕೂ ತತ್ವಾರ ಉಂಟು ಮಾಡಿದೆ. ಹೀಗಾಗಿ ಕೇಂದ್ರ ಸರ್ಕಾರವು ಪ್ರತಿಯೊಬ್ಬ ನಾಗರಿಕನಿಗೂ ತಲಾ ‘₹2000 ಲಾಕ್ಡೌನ್ ಪರಿಹಾರ ನಿಧಿ’ ನೀಡಲಿದೆ. ಇದನ್ನು ಒಬ್ಬರು ಒಮ್ಮೆ ಮಾತ್ರ ಪಡೆಯಲು ಅರ್ಹರು. ಕೆಳಗಿರುವ ಲಿಂಕ್ ಕ್ಲಿಕ್ ಮಾಡಿ, ಪರಿಹಾರ ಧನವನ್ನು ಈಗಲೇ ನಿಮ್ಮದಾಗಿಸಿಕೊಳ್ಳಿ’ ಎಂದು ಸೂಚಿಸುವ ವಾಟ್ಸ್ಆ್ಯಪ್ ಸಂದೇಶವು ಸಾಮಾಜಿಕ ಜಾಲತಾಣಗಳಲ್ಲಿ ಷೇರ್ ಆಗುತ್ತಿದೆ.