<p><strong>ಬಳ್ಳಾರಿ:</strong> ಜಿಲ್ಲೆಯಲ್ಲಿ ಬೇಸಿಗೆಗೆ ಮುನ್ನವೇ ತಾಪಮಾನ ಹೆಚ್ಚಳ ಕಂಡಿದೆ. ಫೆಬ್ರುವರಿ ಅಂತ್ಯದವರೆಗೂ ಇದ್ದ ತಂಪು ವಾತಾವರಣ ಕಾಣೆಯಾಗಿ ಪ್ರಖರ ಬಿಸಿಲು ಝಳಪಿಸುತ್ತಿದೆ.</p>.<p>ನಗರದ ಪಾರ್ವತಿ ನಗರ ಮುಖ್ಯ ರಸ್ತೆ, ಏಳು ಮಕ್ಕಳ ತಾಯಿ ದೇವಾಲಯದ ರಸ್ತೆ ಹಾಗೂ ರಾಘವ ಕಲಾಮಂದಿರದ ರಸ್ತೆಯಲ್ಲಿ ಬಿಸಿಲಿನ ನಡುವೆಯೇ ಜನ ಮಣ್ಣಿನ ಮಡಕೆಗಳ ಖರೀದಿಯಲ್ಲಿ ತೊಡಗಿರುವ ದೃಶ್ಯಗಳು ಕಂಡುಬರುತ್ತಿವೆ.</p>.<p>ಸೇರಿದಂತೆ ಹಲವ ಪ್ರಮುಖ ರಸ್ತೆಗಳ ಬದಿಯಲ್ಲಿ ಎಂದಿನಂತೆ ರಾಜಾಸ್ತಾನದ ವರ್ಣರಂಜಿತ ಕೊಡಗಳ ಖರೀದಿ ಭರಾಟೆಯೂ ಆರಂಭವಾಗಿದೆ. ನೀರಿನ ದಾನಿಗಳು ಅರವಟ್ಟಿಗೆಗಳನ್ನು ಸ್ಥಾಪಿಸಲು ಆರಂಭಿಸಿದ್ದಾರೆ.</p>.<p>ಆಕರ್ಷಕ, ದುಬಾರಿ: ಸುಂದರವಾದ ರಾಜಸ್ಥಾನದ ಬಿಂದಿಗಳಿಗೆ ಜನ ಆಕರ್ಷಿತರಾಗಿದ್ದಾರೆ. ಮಣ್ಣಿನ ಬಣ್ಣದ ಮೇಲೆ ಬಿಳಿಯ ಚಿತ್ತಾರ ಬಿಡಿಸಿದ ಕೊಡಗಳು ಬಿಸಿಲಿನ ಬವಣೆಯನ್ನು ಮರೆಸುವ ರೀತಿಯಲ್ಲಿ ಕಾಣುತ್ತಿವೆ.</p>.<p>ಆಕರ್ಷಕವಾದರೂ ಈ ಕೊಡಗಳು ಬಲು ದುಬಾರಿ. ಇಪ್ಪತ್ತು ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಬಿಂದಿಗೆ ₹ 250. ಹಿಂದಿನ ವರ್ಷ ಇದರ ಬೆಲೆ ₹200 ಇತ್ತು. ಈ ಬಾರಿ ₹50 ಹೆಚ್ಚಾಗಿದೆ. ಇನ್ನೂ ಹೆಚ್ಚು ಗಾತ್ರದ ಕೊಡದ ಬೆಲೆ ₹ 300 ನಿಗದಿಯಾಗಿದೆ.</p>.<p>ಕೊಡವನ್ನು ಇಡಲು ಕಬ್ಬಿಣದ ನಿಲ್ಲುಕಂಬದ ಬೆಲೆ ₹100. ಹೀಗಾಗಿ ಕೊಡ ಖರೀದಿಸಲು ಬಯಸುವವರು ₹400 ವ್ಯಯಿಸಲೇಬೇಕು. ದೊಡ್ಡ ಗಾತ್ರದ ಕೊಡ ಬೇಕೆನ್ನುವವರು ಇನ್ನೂ ಹೆಚ್ಚು ಹಣ ತೆರಬೇಕು.</p>.<p>ಅರವಟ್ಟಿಗೆ: ಮಾರ್ಚ್ ಮೊದಲ ವಾರದಿಂದಲೇ ಅರವಟ್ಟಿಗೆಗಳ ಆರಂಭವಾಗುತ್ತವೆ. ಎಂದಿನಂತೆ, ಎಲ್ಲರಿಗಿಂತ ಮೊದಲು ನಗರದ ಎಸ್ಪಿ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿ ಯುವಕರ ಬಳಗದ ಸದಸ್ಯರು ಅರವಟ್ಟಿಗೆ ಸ್ಥಾಪಿಸಿದ್ದಾರೆ.</p>.<p>300 ಲೀಟರ್ ಸಂಗ್ರಹ ಸಾಮರ್ಥ್ಯದ ಒಂದು ಡ್ರಂ ಹಾಗೂ ದೊಡ್ಡ ಗಾತ್ರದ ಮಣ್ಣಿನ ಕೊಡಗಳನ್ನು ಇಡಲಾಗಿದೆ. ಶುದ್ಧೀಕರಿಸಿದ<br /> ನೀರನ್ನು ಸಾರ್ವಜನಿಕರಿಗೆ ಪೂರೈಸಲಾಗುತ್ತಿದೆ.</p>.<p>‘ಪ್ರತಿ ದಿನವೂ ಒಂದು ಡ್ರಂ ನೀರನ್ನು ಜನರಿಗೆ ಕೊಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ನೀರು ಪೂರೈಸುತ್ತೇವೆ. ಮೂರು ತಿಂಗಳ ಕಾಲ ಅರವಟ್ಟಿಗೆಯನ್ನು ನಡೆಸುತ್ತೇವೆ’ ಎಂದು ಅರವಟ್ಟಿಗೆಯಲ್ಲಿದ್ದ ವೃದ್ಧರಾದ ಪಂಚಾಕ್ಷರಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ:</strong> ಜಿಲ್ಲೆಯಲ್ಲಿ ಬೇಸಿಗೆಗೆ ಮುನ್ನವೇ ತಾಪಮಾನ ಹೆಚ್ಚಳ ಕಂಡಿದೆ. ಫೆಬ್ರುವರಿ ಅಂತ್ಯದವರೆಗೂ ಇದ್ದ ತಂಪು ವಾತಾವರಣ ಕಾಣೆಯಾಗಿ ಪ್ರಖರ ಬಿಸಿಲು ಝಳಪಿಸುತ್ತಿದೆ.</p>.<p>ನಗರದ ಪಾರ್ವತಿ ನಗರ ಮುಖ್ಯ ರಸ್ತೆ, ಏಳು ಮಕ್ಕಳ ತಾಯಿ ದೇವಾಲಯದ ರಸ್ತೆ ಹಾಗೂ ರಾಘವ ಕಲಾಮಂದಿರದ ರಸ್ತೆಯಲ್ಲಿ ಬಿಸಿಲಿನ ನಡುವೆಯೇ ಜನ ಮಣ್ಣಿನ ಮಡಕೆಗಳ ಖರೀದಿಯಲ್ಲಿ ತೊಡಗಿರುವ ದೃಶ್ಯಗಳು ಕಂಡುಬರುತ್ತಿವೆ.</p>.<p>ಸೇರಿದಂತೆ ಹಲವ ಪ್ರಮುಖ ರಸ್ತೆಗಳ ಬದಿಯಲ್ಲಿ ಎಂದಿನಂತೆ ರಾಜಾಸ್ತಾನದ ವರ್ಣರಂಜಿತ ಕೊಡಗಳ ಖರೀದಿ ಭರಾಟೆಯೂ ಆರಂಭವಾಗಿದೆ. ನೀರಿನ ದಾನಿಗಳು ಅರವಟ್ಟಿಗೆಗಳನ್ನು ಸ್ಥಾಪಿಸಲು ಆರಂಭಿಸಿದ್ದಾರೆ.</p>.<p>ಆಕರ್ಷಕ, ದುಬಾರಿ: ಸುಂದರವಾದ ರಾಜಸ್ಥಾನದ ಬಿಂದಿಗಳಿಗೆ ಜನ ಆಕರ್ಷಿತರಾಗಿದ್ದಾರೆ. ಮಣ್ಣಿನ ಬಣ್ಣದ ಮೇಲೆ ಬಿಳಿಯ ಚಿತ್ತಾರ ಬಿಡಿಸಿದ ಕೊಡಗಳು ಬಿಸಿಲಿನ ಬವಣೆಯನ್ನು ಮರೆಸುವ ರೀತಿಯಲ್ಲಿ ಕಾಣುತ್ತಿವೆ.</p>.<p>ಆಕರ್ಷಕವಾದರೂ ಈ ಕೊಡಗಳು ಬಲು ದುಬಾರಿ. ಇಪ್ಪತ್ತು ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಬಿಂದಿಗೆ ₹ 250. ಹಿಂದಿನ ವರ್ಷ ಇದರ ಬೆಲೆ ₹200 ಇತ್ತು. ಈ ಬಾರಿ ₹50 ಹೆಚ್ಚಾಗಿದೆ. ಇನ್ನೂ ಹೆಚ್ಚು ಗಾತ್ರದ ಕೊಡದ ಬೆಲೆ ₹ 300 ನಿಗದಿಯಾಗಿದೆ.</p>.<p>ಕೊಡವನ್ನು ಇಡಲು ಕಬ್ಬಿಣದ ನಿಲ್ಲುಕಂಬದ ಬೆಲೆ ₹100. ಹೀಗಾಗಿ ಕೊಡ ಖರೀದಿಸಲು ಬಯಸುವವರು ₹400 ವ್ಯಯಿಸಲೇಬೇಕು. ದೊಡ್ಡ ಗಾತ್ರದ ಕೊಡ ಬೇಕೆನ್ನುವವರು ಇನ್ನೂ ಹೆಚ್ಚು ಹಣ ತೆರಬೇಕು.</p>.<p>ಅರವಟ್ಟಿಗೆ: ಮಾರ್ಚ್ ಮೊದಲ ವಾರದಿಂದಲೇ ಅರವಟ್ಟಿಗೆಗಳ ಆರಂಭವಾಗುತ್ತವೆ. ಎಂದಿನಂತೆ, ಎಲ್ಲರಿಗಿಂತ ಮೊದಲು ನಗರದ ಎಸ್ಪಿ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿ ಯುವಕರ ಬಳಗದ ಸದಸ್ಯರು ಅರವಟ್ಟಿಗೆ ಸ್ಥಾಪಿಸಿದ್ದಾರೆ.</p>.<p>300 ಲೀಟರ್ ಸಂಗ್ರಹ ಸಾಮರ್ಥ್ಯದ ಒಂದು ಡ್ರಂ ಹಾಗೂ ದೊಡ್ಡ ಗಾತ್ರದ ಮಣ್ಣಿನ ಕೊಡಗಳನ್ನು ಇಡಲಾಗಿದೆ. ಶುದ್ಧೀಕರಿಸಿದ<br /> ನೀರನ್ನು ಸಾರ್ವಜನಿಕರಿಗೆ ಪೂರೈಸಲಾಗುತ್ತಿದೆ.</p>.<p>‘ಪ್ರತಿ ದಿನವೂ ಒಂದು ಡ್ರಂ ನೀರನ್ನು ಜನರಿಗೆ ಕೊಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ನೀರು ಪೂರೈಸುತ್ತೇವೆ. ಮೂರು ತಿಂಗಳ ಕಾಲ ಅರವಟ್ಟಿಗೆಯನ್ನು ನಡೆಸುತ್ತೇವೆ’ ಎಂದು ಅರವಟ್ಟಿಗೆಯಲ್ಲಿದ್ದ ವೃದ್ಧರಾದ ಪಂಚಾಕ್ಷರಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>