<p>ಪುಟ್ಟ ಮಗುವಿನ ಚರ್ಮ ತುಂಬಾ ಸೂಕ್ಷ್ಮ. ಈ ಕಾರಣಕ್ಕೆ ವಿಶೇಷ ಕಾಳಜಿ ವಹಿಸಬೇಕು. ಅದರಲ್ಲೂ ಮಳೆಗಾಲದಲ್ಲಿ ದದ್ದು, ತುರಿಕೆಯಂತಹ ಚರ್ಮದ ಸಮಸ್ಯೆಗಳು ಕಾಣಿಸಿಕೊಂಡು ಮಗುವಿಗೆ ಕಿರಿಕಿರಿ ಉಂಟುಮಾಡುತ್ತವೆ. ಅಂತಹ ಸಮಸ್ಯೆಗಳಾಗದಂತೆ ತಾಯಂದಿರು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು.</p>.<p>ಋತುಮಾನಕ್ಕೆ ತಕ್ಕಂತೆ ನಿಮ್ಮ ಮುದ್ದು ಮಗುವಿನ ತಚ್ಚೆ ರಕ್ಷಣೆಯ ದಿನಚರಿಯನ್ನು ಬದಲಿಸಬೇಕು. ಅಲ್ಲದೆ ಋತುಮಾನಕ್ಕೆ ಹೊಂದುವಂತಹ ಉತ್ಪನ್ನಗಳನ್ನು ಬಳಬೇಕು. ಸೌಮ್ಯ ಹಾಗೂ ಸುರಕ್ಷಿತ ಉತ್ಪನ್ನಗಳಿಂದ ತಲೆಯಿಂದ ಕಾಲಿನವರೆಗೂ ಮಗುವಿನ ಚರ್ಮವನ್ನು ರಕ್ಷಿಸುವುದು ತುಂಬಾ ಮುಖ್ಯ.</p>.<p>ಮಳೆಗಾಲದಲ್ಲಿ ಮಗುವಿನ ಚರ್ಮದ ರಕ್ಷಣೆ ಮಾಡುವ ಕೆಲವು ಉಪಾಯಗಳು ಇಲ್ಲಿವೆ.</p>.<p>* ಮಳೆಗಾಲದಲ್ಲಿ ಪ್ರತಿದಿನ ತಪ್ಪದೇ ಸ್ನಾನ ಮಾಡಿಸುವುದು, ತೊಟ್ಟಿಲಿನಲ್ಲಿ ಬಳಸುವ ಬಟ್ಟೆಗಳನ್ನು ಬದಲಿಸುವುದು, ಸ್ನಾನದ ನಂತರ ಚೆನ್ನಾಗಿ ಮೈ ಒರೆಸುವುದು ಅಗತ್ಯ.</p>.<p>* ಡಯಾಪರ್ನಿಂದಾಗುವ ದದ್ದುಗಳನ್ನು ತಡೆಯಲು ಮಳೆಗಾಲಕ್ಕೆ ಸೂಕ್ತವಾಗುವ ಬಟ್ಟೆಗಳನ್ನು ತೊಡಿಸುವುದು ಉತ್ತಮ.</p>.<p>* ಆಲಿವ್ ಎಣ್ಣೆ ಹಾಗೂ ಬಾದಾಮಿ ಎಣ್ಣೆ ಸಮೃದ್ಧವಾಗಿರುವ ಬೇಬಿ ಸೋಪ್ನಿಂದ ಸ್ನಾನ ಮಾಡಿಸಿ. ಬಾದಾಮಿ ಎಣ್ಣೆ ಚರ್ಮದಲ್ಲಿ ತೇವಾಂಶ ಉಳಿಯಲು ಸಹಾಯ ಮಾಡುತ್ತದೆ ಹಾಗೂ ಆಲಿವ್ ಎಣ್ಣೆ ಶುಷ್ಕತೆಯನ್ನು ದೂರ ಮಾಡಿ ಒಣ ಚರ್ಮದಿಂದ ಮುಕ್ತಿ ನೀಡುತ್ತದೆ.</p>.<p>* ದಾಸವಾಳ ಸೊಪ್ಪು ಹಾಗೂ ಕಡಲೆ ಹಿಟ್ಟು ಮುಂತಾದ ಅಂಶಗಳಿರುವ ಶಾಂಪೂವಿನಿಂದ ಮಗುವಿನ ಕೂದಲ ಆರೈಕೆ ಮಾಡಿ. ದಾಸವಾಳ ಕೂದಲಿನಲ್ಲಿ ತೇವಾಂಶ ಹೆಚ್ಚಲು ಸಹಾಯ ಮಾಡುತ್ತದೆ. ಜೊತೆಗೆ ಇದು ಕೂದಲ ಪೋಷಣೆಗೂ ಸಹಕಾರಿ.</p>.<p>* ಮಗುವಿಗೆ ಸ್ನಾನ ಮಾಡಿಸಿದ ಮೇಲೆ ಚೆನ್ನಾಗಿ ಒರೆಸುವುದು ಅತೀ ಅವಶ್ಯ. ಅದರಲ್ಲೂ ಚರ್ಮ ಮಡಿಕೆಯಾಗುವ ಗಲ್ಲದ ಕೆಳಗೆ, ಕುತ್ತಿಗೆ, ಮಂಡಿಯ ಕೆಳಗೆ ನೀರನ್ನು ಚೆನ್ನಾಗಿ ಒರೆಸಬೇಕು.</p>.<p>* ಒದ್ದೆ ನ್ಯಾಪ್ಕಿನ್ನಿಂದ ದದ್ದುಗಳಾಗುವುದು ಸಾಮಾನ್ಯ. ಇದರಿಂದ ಮಕ್ಕಳಿಗೆ ಕಿರಿಕಿರಿಯಾಗಬಹುದು. ಹಾಗಾಗಿ ದದ್ದು ನಿವಾರಿಸಲು ಬಾದಾಮಿ ಎಣ್ಣೆ ಬಳಸುವುದು ಉತ್ತಮ.</p>.<p>* ಹಗುರವಾಗಿರುವ ಹಾಗೂ ಪೂರ್ತಿ ಮೈ ಮುಚ್ಚುವ ಬಟ್ಟೆ ತೊಡಿಸುವುದು ಅಗತ್ಯ. ಅದರಲ್ಲೂ ಕಾಟನ್ ಬಟ್ಟೆಯನ್ನೇ ತೊಡಿಸಬೇಕು. ಮಗುವಿಗೆ ಉಸಿರುಗಟ್ಟುವಷ್ಟು ಬಟ್ಟೆ ತೊಡಿಸುವುದಕ್ಕಿಂತ ಹಗುರ ಎನ್ನಿಸುವ ಜಾಕೆಟ್ ಹಾಗೂ ಬ್ಲಾಂಕೆಟ್ ಹೊದೆಸಿ.</p>.<p>* ಮಳೆಗಾಲದಲ್ಲಿ ಹೆಚ್ಚು ಕಾಡುವ ಸಮಸ್ಯೆ ಎಂದರೆ ಸೊಳ್ಳೆಗಳ ಕಾಟ. ಆ ಕಾರಣಕ್ಕೆ ಮನೆ ಹಾಗೂ ಮನೆಯ ಸುತ್ತಲಿನ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯ. ಮನೆಯ ಸುತ್ತಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಇದರಿಂದ ಸೊಳ್ಳೆ ಹಾಗೂ ಕೀಟಗಳು ಕಡಿಯದಂತೆ ಕಾಪಾಡಬಹುದು. ಜೊತೆಗೆ ಸೊಳ್ಳೆ ಪರದೆಗಳನ್ನು ಬಳಸಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪುಟ್ಟ ಮಗುವಿನ ಚರ್ಮ ತುಂಬಾ ಸೂಕ್ಷ್ಮ. ಈ ಕಾರಣಕ್ಕೆ ವಿಶೇಷ ಕಾಳಜಿ ವಹಿಸಬೇಕು. ಅದರಲ್ಲೂ ಮಳೆಗಾಲದಲ್ಲಿ ದದ್ದು, ತುರಿಕೆಯಂತಹ ಚರ್ಮದ ಸಮಸ್ಯೆಗಳು ಕಾಣಿಸಿಕೊಂಡು ಮಗುವಿಗೆ ಕಿರಿಕಿರಿ ಉಂಟುಮಾಡುತ್ತವೆ. ಅಂತಹ ಸಮಸ್ಯೆಗಳಾಗದಂತೆ ತಾಯಂದಿರು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು.</p>.<p>ಋತುಮಾನಕ್ಕೆ ತಕ್ಕಂತೆ ನಿಮ್ಮ ಮುದ್ದು ಮಗುವಿನ ತಚ್ಚೆ ರಕ್ಷಣೆಯ ದಿನಚರಿಯನ್ನು ಬದಲಿಸಬೇಕು. ಅಲ್ಲದೆ ಋತುಮಾನಕ್ಕೆ ಹೊಂದುವಂತಹ ಉತ್ಪನ್ನಗಳನ್ನು ಬಳಬೇಕು. ಸೌಮ್ಯ ಹಾಗೂ ಸುರಕ್ಷಿತ ಉತ್ಪನ್ನಗಳಿಂದ ತಲೆಯಿಂದ ಕಾಲಿನವರೆಗೂ ಮಗುವಿನ ಚರ್ಮವನ್ನು ರಕ್ಷಿಸುವುದು ತುಂಬಾ ಮುಖ್ಯ.</p>.<p>ಮಳೆಗಾಲದಲ್ಲಿ ಮಗುವಿನ ಚರ್ಮದ ರಕ್ಷಣೆ ಮಾಡುವ ಕೆಲವು ಉಪಾಯಗಳು ಇಲ್ಲಿವೆ.</p>.<p>* ಮಳೆಗಾಲದಲ್ಲಿ ಪ್ರತಿದಿನ ತಪ್ಪದೇ ಸ್ನಾನ ಮಾಡಿಸುವುದು, ತೊಟ್ಟಿಲಿನಲ್ಲಿ ಬಳಸುವ ಬಟ್ಟೆಗಳನ್ನು ಬದಲಿಸುವುದು, ಸ್ನಾನದ ನಂತರ ಚೆನ್ನಾಗಿ ಮೈ ಒರೆಸುವುದು ಅಗತ್ಯ.</p>.<p>* ಡಯಾಪರ್ನಿಂದಾಗುವ ದದ್ದುಗಳನ್ನು ತಡೆಯಲು ಮಳೆಗಾಲಕ್ಕೆ ಸೂಕ್ತವಾಗುವ ಬಟ್ಟೆಗಳನ್ನು ತೊಡಿಸುವುದು ಉತ್ತಮ.</p>.<p>* ಆಲಿವ್ ಎಣ್ಣೆ ಹಾಗೂ ಬಾದಾಮಿ ಎಣ್ಣೆ ಸಮೃದ್ಧವಾಗಿರುವ ಬೇಬಿ ಸೋಪ್ನಿಂದ ಸ್ನಾನ ಮಾಡಿಸಿ. ಬಾದಾಮಿ ಎಣ್ಣೆ ಚರ್ಮದಲ್ಲಿ ತೇವಾಂಶ ಉಳಿಯಲು ಸಹಾಯ ಮಾಡುತ್ತದೆ ಹಾಗೂ ಆಲಿವ್ ಎಣ್ಣೆ ಶುಷ್ಕತೆಯನ್ನು ದೂರ ಮಾಡಿ ಒಣ ಚರ್ಮದಿಂದ ಮುಕ್ತಿ ನೀಡುತ್ತದೆ.</p>.<p>* ದಾಸವಾಳ ಸೊಪ್ಪು ಹಾಗೂ ಕಡಲೆ ಹಿಟ್ಟು ಮುಂತಾದ ಅಂಶಗಳಿರುವ ಶಾಂಪೂವಿನಿಂದ ಮಗುವಿನ ಕೂದಲ ಆರೈಕೆ ಮಾಡಿ. ದಾಸವಾಳ ಕೂದಲಿನಲ್ಲಿ ತೇವಾಂಶ ಹೆಚ್ಚಲು ಸಹಾಯ ಮಾಡುತ್ತದೆ. ಜೊತೆಗೆ ಇದು ಕೂದಲ ಪೋಷಣೆಗೂ ಸಹಕಾರಿ.</p>.<p>* ಮಗುವಿಗೆ ಸ್ನಾನ ಮಾಡಿಸಿದ ಮೇಲೆ ಚೆನ್ನಾಗಿ ಒರೆಸುವುದು ಅತೀ ಅವಶ್ಯ. ಅದರಲ್ಲೂ ಚರ್ಮ ಮಡಿಕೆಯಾಗುವ ಗಲ್ಲದ ಕೆಳಗೆ, ಕುತ್ತಿಗೆ, ಮಂಡಿಯ ಕೆಳಗೆ ನೀರನ್ನು ಚೆನ್ನಾಗಿ ಒರೆಸಬೇಕು.</p>.<p>* ಒದ್ದೆ ನ್ಯಾಪ್ಕಿನ್ನಿಂದ ದದ್ದುಗಳಾಗುವುದು ಸಾಮಾನ್ಯ. ಇದರಿಂದ ಮಕ್ಕಳಿಗೆ ಕಿರಿಕಿರಿಯಾಗಬಹುದು. ಹಾಗಾಗಿ ದದ್ದು ನಿವಾರಿಸಲು ಬಾದಾಮಿ ಎಣ್ಣೆ ಬಳಸುವುದು ಉತ್ತಮ.</p>.<p>* ಹಗುರವಾಗಿರುವ ಹಾಗೂ ಪೂರ್ತಿ ಮೈ ಮುಚ್ಚುವ ಬಟ್ಟೆ ತೊಡಿಸುವುದು ಅಗತ್ಯ. ಅದರಲ್ಲೂ ಕಾಟನ್ ಬಟ್ಟೆಯನ್ನೇ ತೊಡಿಸಬೇಕು. ಮಗುವಿಗೆ ಉಸಿರುಗಟ್ಟುವಷ್ಟು ಬಟ್ಟೆ ತೊಡಿಸುವುದಕ್ಕಿಂತ ಹಗುರ ಎನ್ನಿಸುವ ಜಾಕೆಟ್ ಹಾಗೂ ಬ್ಲಾಂಕೆಟ್ ಹೊದೆಸಿ.</p>.<p>* ಮಳೆಗಾಲದಲ್ಲಿ ಹೆಚ್ಚು ಕಾಡುವ ಸಮಸ್ಯೆ ಎಂದರೆ ಸೊಳ್ಳೆಗಳ ಕಾಟ. ಆ ಕಾರಣಕ್ಕೆ ಮನೆ ಹಾಗೂ ಮನೆಯ ಸುತ್ತಲಿನ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯ. ಮನೆಯ ಸುತ್ತಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಇದರಿಂದ ಸೊಳ್ಳೆ ಹಾಗೂ ಕೀಟಗಳು ಕಡಿಯದಂತೆ ಕಾಪಾಡಬಹುದು. ಜೊತೆಗೆ ಸೊಳ್ಳೆ ಪರದೆಗಳನ್ನು ಬಳಸಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>