<p>ಇಷ್ಟವಾದ ತಿಂಡಿ ಎಂದು ಕೆಲವೊಮ್ಮೆ ಯಥೇಚ್ಛವಾಗಿ ತಿಂದುಬಿಡುತ್ತೇವೆ. ಆದರೆ ಈ ರೀತಿ ತಿಂದಾಗ ಆಹಾರ ಸರಿಯಾಗಿ ಜೀರ್ಣವಾಗದೆ ಹೊಟ್ಟೆ ನೋವು, ಹೊಟ್ಟೆಯುಬ್ಬರ ಕಾಣಿಸಿಕೊಳ್ಳುತ್ತದೆ. ಒಂದಲ್ಲ ಒಂದು ಸಲ ಎಲ್ಲರೂ ಈ ಸಮಸ್ಯೆಯನ್ನು ಎದುರಿಸಿಯೇ ಇರುತ್ತಾರೆ,</p><p>ಈ ಸಮಸ್ಯೆಯನ್ನು ನಿರ್ಲಕ್ಷಿಸದೆ ಮನೆಯಲ್ಲೇ ಸಿಗುವ ವಸ್ತುಗಳಿಂದ ಹೇಗೆ ನಿಯಂತ್ರಿಸಬಹುದು ಎನ್ನುವ ಬಗ್ಗೆ ಆಯುರ್ವೇದ ತಜ್ಞ ಡಾ. ಶರದ್ ಕುಲಕರ್ಣಿ ಅವರು ಮಾಹಿತಿ ನೀಡಿದ್ದಾರೆ.</p>.ಮಕ್ಕಳ ಮುಖದ ಮೇಲಾಗುವ ಬಿಳಿ ಮಚ್ಚೆಗಳಿಗೆ ಕಾರಣಗಳೇನು ? .ಬಹುಉಪಯೋಗಿ ಬಾದಾಮಿ.<h2><strong><ins>ಗ್ಯಾಸ್ಟ್ರಿಟಿಸ್ ಎಂದರೇನು</ins></strong></h2><p>ಹೊಟ್ಟೆಯ ಒಳಭಾಗವು ಗೋಡೆಯಾಕಾರದಲ್ಲಿ ಇರುತ್ತದೆ. ನಾವು ಸೇವಿಸುವ ಆಹಾರದಲ್ಲಿ ಸ್ವಲ್ಪ ವ್ಯತ್ಯಾಸವಾದರೆ, ಹೊಟ್ಟೆಯೊಳಗಿನ ಗೋಡೆಗೆ ನೇರ ಪರಿಣಾಮ ಉಂಟಾಗಿ ಅಸಿಡಿಟಿ ಉದ್ಭವವಾಗುವ ಸಾಧ್ಯತೆ ಇರುತ್ತದೆ. </p>.<h2><strong><ins>ಅಸಿಡಿಟಿಗೆ ಕಾರಣಗಳು</ins></strong></h2><ul><li><p><strong>ಆಹಾರ ಪದ್ಧತಿ</strong>: ಬೆಳಿಗ್ಗಿನ ತಿಂಡಿಯನ್ನು ತಪ್ಪಿಸಿ ಮಧ್ಯಾಹ್ನ ಊಟ ಮಾಡುವುದು. ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡದೆ, ಯಾವುದೋ ಸಮಯದಲ್ಲಿ ಊಟ ಮಾಡುವುದು ಈ ಸಮಸ್ಯೆಯ ಮುಖ್ಯ ಕಾರಣವಾಗಿದೆ.</p></li><li><p><strong>ಪದೇ ಪದೇ ಆಹಾರ ಸೇವನೆ:</strong> ಊಟ ಸೇವಿಸಿದ ಐದು ಹತ್ತು ನಿಮಿಷಗಳಲ್ಲಿ ಮತ್ತೇನೋ ಸೇವಿಸುವುದರಿಂದ ಸರಿಯಾಗಿ ಜೀರ್ಣಕ್ರಿಯೆ ಆಗದೆ ಗ್ಯಾಸ್ಟ್ರಿಕ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ.</p></li><li><p><strong>ಮಾನಸಿಕ ಒತ್ತಡ:</strong> ಮಾನಸಿಕ ಒತ್ತಡಕ್ಕೆ ಒಳಗಾಗಿ ಸರಿಯಾಗಿ ಊಟ, ನಿದ್ದೆ ಮಾಡದೆ ಇರುವುದರಿಂದ ಗ್ಯಾಸ್ಟ್ರಿಕ್ಗೆ ಕಾರಣವಾಗಿದೆ.</p></li><li><p><strong>ಅತಿಯಾದ ಖಾರ ಸೇವನೆ:</strong> ಊಟದಲ್ಲಿ ಅತಿಯಾದ ಖಾರ, ಹುಳಿ ಅಂಶವನ್ನು ಹೆಚ್ಚು ಸೇವಿಸುವುದರಿಂದಲೂ ಗ್ಯಾಸ್ಟ್ರಿಕ್ ಬರುತ್ತದೆ.</p></li><li><p><strong>ಅತಿಯಾದ ಮಾತ್ರೆ ಸೇವನೆ</strong>: ದೇಹದಲ್ಲಿ ಕಾಡುವ ಸಣ್ಣ ಪುಟ್ಟ ನೋವುಗಳಿಗೂ ಪದೇ ಪದೇ ಮಾತ್ರೆ ತೆಗೆದುಕೊಳ್ಳುವುದು ಕೂಡ ಅಸಿಡಿಟಿಯನ್ನು ಉಂಟುಮಾಡುತ್ತದೆ.</p></li></ul>.<h2><strong><ins>ಗ್ಯಾಸ್ಟ್ರಿಕ್ ಲಕ್ಷಣಗಳು</ins></strong></h2><ul><li><p><strong>ಎದೆಉರಿ:</strong> ಗ್ಯಾಸ್ಟ್ರಿಕ್ಗೆ ಒಳಗಾಗದ ವ್ಯಕ್ತಿಯು ಏನಾದರೂ ಕರಿದ ಪದಾರ್ಥಗಳನ್ನು ಸೇವಿಸಿದಾಗ ಕೂಡಲೇ ಎದೆಯುರಿ ಆರಂಭವಾಗುತ್ತದೆ. </p></li><li><p><strong>ವಾಕರಿಕೆ:</strong> ಅಸಿಡಿಟಿ ಹೆಚ್ಚಾದಾಗ ಬಾಯಿಯಲ್ಲಿ ನೀರು ತುಂಬಿ ವಾಕರಿಕೆ ಬಂದಂತೆ ಆಗುತ್ತದೆ. ಇನ್ನೂ ಕೆಲವರು ಹಳದಿ ಬಣ್ಣದ ಪಿತ್ತವನ್ನು ವಾಂತಿ ಮಾಡುವ ಸಾಧ್ಯತೆ ಇರುತ್ತದೆ. </p></li><li><p><strong>ದೇಹದ ಅಂಗಗಳಲ್ಲಿ ನೋವು :</strong> ಗ್ಯಾಸ್ಟ್ರಿಕ್ ಹೆಚ್ಚಾಗುತ್ತಿದ್ದಂತೆ ಎದೆ, ಹೊಟ್ಟೆ, ಬೆನ್ನು, ಕೈ, ಕಾಲುಗಳು ನೋವು ಆಗುತ್ತಿರುತ್ತವೆ. ಕೆಲವೊಂದು ಬಾರಿ ಉಸಿರಾಟದಲ್ಲಿ ತೊಂದರೆ ಕಾಣಿಸುವ ಸಾಧ್ಯತೆ ಹೆಚ್ಚಿರುತ್ತದೆ. </p></li><li><p><strong>ತಲೆ ನೋವು:</strong> ಕೆಲವರಿಗೆ ಪ್ರತಿದಿನ ತಲೆನೋವು ಕಾಡುತ್ತಿರುತ್ತದೆ.</p></li><li><p><strong>ಮಲವಿಸರ್ಜನೆಯಲ್ಲಿ ತೊಂದರೆ:</strong> ಗ್ಯಾಸ್ಟ್ರಿಕ್ಗೆ ಒಳಗಾಗದ ವ್ಯಕ್ತಿಗೆ ಮಲವಿಸರ್ಜನೆ ವೇಳೆ ಉರಿ ಕಾಣಿಸಿಕೊಳ್ಳುವುದು ಕೂಡ ಇದರ ಪ್ರಮುಖ ಲಕ್ಷಣವಾಗಿದೆ.</p></li></ul><h2><strong><ins>ಪರಿಹಾರ ಕ್ರಮಗಳು</ins></strong></h2><ul><li><p><strong>ಆಹಾರ ಕ್ರಮ :</strong> ಪ್ರತಿದಿನ ತಪ್ಪದೇ ನಿಗದಿತ ಸಮಯದೊಳಗೆ ಊಟ ಸೇವಿಸಬೇಕು. ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ಹೆಚ್ಚು ಸೇವಿಸಬಾರದು. </p></li><li><p><strong>ಉಪ್ಪು, ಶುಂಠಿ ಸೇವನೆ:</strong> ಊಟಕ್ಕೂ ಐದು ನಿಮಿಷ ಮೊದಲು ಚಿಟಿಕೆಯಷ್ಟು ಉಪ್ಪು, ಶುಂಠಿಯನ್ನು ಜಜ್ಜಿ, ಚೆನ್ನಾಗಿ ಜಗಿದು ಸೇವಿಸಬೇಕು. ಹೀಗೆ ವಾರದಲ್ಲಿ ಮೂರು ಬಾರಿ ಮಾಡುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿಯಂತ್ರಿಸಿಕೊಳ್ಳಬಹುದು. </p></li><li><p><strong>ನೋವು ನಿವಾರಕ ಮಾತ್ರೆಗಳನ್ನು ಸೇವನೆ ಮಾಡಬಾರದು :</strong> ತಲೆ ನೋವು, ಕೈ, ಕಾಲು ನೋವು ಹೀಗೆ ಸಣ್ಣ ಪುಟ್ಟ ವಿಷಯಗಳಿಗೂ ಮಾತ್ರೆಗಳನ್ನು ಸೇವಿಸುವುದನ್ನು ನಿಯಂತ್ರಿಸುವುದರಿಂದ ಗ್ಯಾಸ್ಟ್ರಿಕ್ ತಡೆಯಲು ಸಹಕಾರಿಯಾಗಿದೆ.</p></li><li><p><strong>ನಿಯಮಿತ ನೀರು ಸೇವನೆ:</strong> ಪ್ರತಿದಿನ 3–4 ಲೀಟರ್ ನೀರು ಕುಡಿಯುವುದರಿಂದ ಅಸಿಡಿಟಿಯನ್ನು ತಪ್ಪಿಸಬಹುದು.</p></li><li><p><strong>ಮಜ್ಜಿಗೆ ಸೇವನೆ:</strong> 1 ಲೋಟ ಮಜ್ಜಿಗೆಗೆ ಚಿಟಿಕೆಯಷ್ಟು ಕಾಳು ಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು ಹಾಗೂ ಅರ್ಧ ಲೋಟ ನೀರು ಬೆರೆಸಿ ಕುಡಿಯುವುದರಿಂದ ಅಸಿಡಿಟಿ ನಿಯಂತ್ರಿಸಿಕೊಳ್ಳಲು ಸಾಧ್ಯ.</p></li><li><p><strong>ಓಮಕಾಳು</strong>: ಉಗುರು ಬೆಚ್ಚಗಿನ ನೀರಿಗೆ ಚಿಟಿಕೆಯಷ್ಟು ಓಮಕಾಳನ್ನು ಸೇರಿಸಿ ಮಿಶ್ರಣ ಮಾಡಿ ಕುಡಿಯುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ತಪ್ಪಿಸಿಕೊಳ್ಳಬಹುದು. </p></li><li><p><strong>ಜೀರಿಗೆ ನೀರು</strong>: ಒಂದು ಲೋಟ ನೀರಿಗೆ ಅರ್ಧ ಚಮಚ ಜೀರಿಗೆ ಸೇರಿಸಿ ಕುದಿಸಿ ಕುಡಿಯುವುದರಿಂದ ಅಸಿಡಿಟಿಯನ್ನು ನಿಯಂತ್ರಿಸಿಕೊಳ್ಳಬಹುದು ಎನ್ನುತ್ತಾರೆ ಆಯುರ್ವೇದ ವೈದ್ಯರು.</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇಷ್ಟವಾದ ತಿಂಡಿ ಎಂದು ಕೆಲವೊಮ್ಮೆ ಯಥೇಚ್ಛವಾಗಿ ತಿಂದುಬಿಡುತ್ತೇವೆ. ಆದರೆ ಈ ರೀತಿ ತಿಂದಾಗ ಆಹಾರ ಸರಿಯಾಗಿ ಜೀರ್ಣವಾಗದೆ ಹೊಟ್ಟೆ ನೋವು, ಹೊಟ್ಟೆಯುಬ್ಬರ ಕಾಣಿಸಿಕೊಳ್ಳುತ್ತದೆ. ಒಂದಲ್ಲ ಒಂದು ಸಲ ಎಲ್ಲರೂ ಈ ಸಮಸ್ಯೆಯನ್ನು ಎದುರಿಸಿಯೇ ಇರುತ್ತಾರೆ,</p><p>ಈ ಸಮಸ್ಯೆಯನ್ನು ನಿರ್ಲಕ್ಷಿಸದೆ ಮನೆಯಲ್ಲೇ ಸಿಗುವ ವಸ್ತುಗಳಿಂದ ಹೇಗೆ ನಿಯಂತ್ರಿಸಬಹುದು ಎನ್ನುವ ಬಗ್ಗೆ ಆಯುರ್ವೇದ ತಜ್ಞ ಡಾ. ಶರದ್ ಕುಲಕರ್ಣಿ ಅವರು ಮಾಹಿತಿ ನೀಡಿದ್ದಾರೆ.</p>.ಮಕ್ಕಳ ಮುಖದ ಮೇಲಾಗುವ ಬಿಳಿ ಮಚ್ಚೆಗಳಿಗೆ ಕಾರಣಗಳೇನು ? .ಬಹುಉಪಯೋಗಿ ಬಾದಾಮಿ.<h2><strong><ins>ಗ್ಯಾಸ್ಟ್ರಿಟಿಸ್ ಎಂದರೇನು</ins></strong></h2><p>ಹೊಟ್ಟೆಯ ಒಳಭಾಗವು ಗೋಡೆಯಾಕಾರದಲ್ಲಿ ಇರುತ್ತದೆ. ನಾವು ಸೇವಿಸುವ ಆಹಾರದಲ್ಲಿ ಸ್ವಲ್ಪ ವ್ಯತ್ಯಾಸವಾದರೆ, ಹೊಟ್ಟೆಯೊಳಗಿನ ಗೋಡೆಗೆ ನೇರ ಪರಿಣಾಮ ಉಂಟಾಗಿ ಅಸಿಡಿಟಿ ಉದ್ಭವವಾಗುವ ಸಾಧ್ಯತೆ ಇರುತ್ತದೆ. </p>.<h2><strong><ins>ಅಸಿಡಿಟಿಗೆ ಕಾರಣಗಳು</ins></strong></h2><ul><li><p><strong>ಆಹಾರ ಪದ್ಧತಿ</strong>: ಬೆಳಿಗ್ಗಿನ ತಿಂಡಿಯನ್ನು ತಪ್ಪಿಸಿ ಮಧ್ಯಾಹ್ನ ಊಟ ಮಾಡುವುದು. ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡದೆ, ಯಾವುದೋ ಸಮಯದಲ್ಲಿ ಊಟ ಮಾಡುವುದು ಈ ಸಮಸ್ಯೆಯ ಮುಖ್ಯ ಕಾರಣವಾಗಿದೆ.</p></li><li><p><strong>ಪದೇ ಪದೇ ಆಹಾರ ಸೇವನೆ:</strong> ಊಟ ಸೇವಿಸಿದ ಐದು ಹತ್ತು ನಿಮಿಷಗಳಲ್ಲಿ ಮತ್ತೇನೋ ಸೇವಿಸುವುದರಿಂದ ಸರಿಯಾಗಿ ಜೀರ್ಣಕ್ರಿಯೆ ಆಗದೆ ಗ್ಯಾಸ್ಟ್ರಿಕ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ.</p></li><li><p><strong>ಮಾನಸಿಕ ಒತ್ತಡ:</strong> ಮಾನಸಿಕ ಒತ್ತಡಕ್ಕೆ ಒಳಗಾಗಿ ಸರಿಯಾಗಿ ಊಟ, ನಿದ್ದೆ ಮಾಡದೆ ಇರುವುದರಿಂದ ಗ್ಯಾಸ್ಟ್ರಿಕ್ಗೆ ಕಾರಣವಾಗಿದೆ.</p></li><li><p><strong>ಅತಿಯಾದ ಖಾರ ಸೇವನೆ:</strong> ಊಟದಲ್ಲಿ ಅತಿಯಾದ ಖಾರ, ಹುಳಿ ಅಂಶವನ್ನು ಹೆಚ್ಚು ಸೇವಿಸುವುದರಿಂದಲೂ ಗ್ಯಾಸ್ಟ್ರಿಕ್ ಬರುತ್ತದೆ.</p></li><li><p><strong>ಅತಿಯಾದ ಮಾತ್ರೆ ಸೇವನೆ</strong>: ದೇಹದಲ್ಲಿ ಕಾಡುವ ಸಣ್ಣ ಪುಟ್ಟ ನೋವುಗಳಿಗೂ ಪದೇ ಪದೇ ಮಾತ್ರೆ ತೆಗೆದುಕೊಳ್ಳುವುದು ಕೂಡ ಅಸಿಡಿಟಿಯನ್ನು ಉಂಟುಮಾಡುತ್ತದೆ.</p></li></ul>.<h2><strong><ins>ಗ್ಯಾಸ್ಟ್ರಿಕ್ ಲಕ್ಷಣಗಳು</ins></strong></h2><ul><li><p><strong>ಎದೆಉರಿ:</strong> ಗ್ಯಾಸ್ಟ್ರಿಕ್ಗೆ ಒಳಗಾಗದ ವ್ಯಕ್ತಿಯು ಏನಾದರೂ ಕರಿದ ಪದಾರ್ಥಗಳನ್ನು ಸೇವಿಸಿದಾಗ ಕೂಡಲೇ ಎದೆಯುರಿ ಆರಂಭವಾಗುತ್ತದೆ. </p></li><li><p><strong>ವಾಕರಿಕೆ:</strong> ಅಸಿಡಿಟಿ ಹೆಚ್ಚಾದಾಗ ಬಾಯಿಯಲ್ಲಿ ನೀರು ತುಂಬಿ ವಾಕರಿಕೆ ಬಂದಂತೆ ಆಗುತ್ತದೆ. ಇನ್ನೂ ಕೆಲವರು ಹಳದಿ ಬಣ್ಣದ ಪಿತ್ತವನ್ನು ವಾಂತಿ ಮಾಡುವ ಸಾಧ್ಯತೆ ಇರುತ್ತದೆ. </p></li><li><p><strong>ದೇಹದ ಅಂಗಗಳಲ್ಲಿ ನೋವು :</strong> ಗ್ಯಾಸ್ಟ್ರಿಕ್ ಹೆಚ್ಚಾಗುತ್ತಿದ್ದಂತೆ ಎದೆ, ಹೊಟ್ಟೆ, ಬೆನ್ನು, ಕೈ, ಕಾಲುಗಳು ನೋವು ಆಗುತ್ತಿರುತ್ತವೆ. ಕೆಲವೊಂದು ಬಾರಿ ಉಸಿರಾಟದಲ್ಲಿ ತೊಂದರೆ ಕಾಣಿಸುವ ಸಾಧ್ಯತೆ ಹೆಚ್ಚಿರುತ್ತದೆ. </p></li><li><p><strong>ತಲೆ ನೋವು:</strong> ಕೆಲವರಿಗೆ ಪ್ರತಿದಿನ ತಲೆನೋವು ಕಾಡುತ್ತಿರುತ್ತದೆ.</p></li><li><p><strong>ಮಲವಿಸರ್ಜನೆಯಲ್ಲಿ ತೊಂದರೆ:</strong> ಗ್ಯಾಸ್ಟ್ರಿಕ್ಗೆ ಒಳಗಾಗದ ವ್ಯಕ್ತಿಗೆ ಮಲವಿಸರ್ಜನೆ ವೇಳೆ ಉರಿ ಕಾಣಿಸಿಕೊಳ್ಳುವುದು ಕೂಡ ಇದರ ಪ್ರಮುಖ ಲಕ್ಷಣವಾಗಿದೆ.</p></li></ul><h2><strong><ins>ಪರಿಹಾರ ಕ್ರಮಗಳು</ins></strong></h2><ul><li><p><strong>ಆಹಾರ ಕ್ರಮ :</strong> ಪ್ರತಿದಿನ ತಪ್ಪದೇ ನಿಗದಿತ ಸಮಯದೊಳಗೆ ಊಟ ಸೇವಿಸಬೇಕು. ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ಹೆಚ್ಚು ಸೇವಿಸಬಾರದು. </p></li><li><p><strong>ಉಪ್ಪು, ಶುಂಠಿ ಸೇವನೆ:</strong> ಊಟಕ್ಕೂ ಐದು ನಿಮಿಷ ಮೊದಲು ಚಿಟಿಕೆಯಷ್ಟು ಉಪ್ಪು, ಶುಂಠಿಯನ್ನು ಜಜ್ಜಿ, ಚೆನ್ನಾಗಿ ಜಗಿದು ಸೇವಿಸಬೇಕು. ಹೀಗೆ ವಾರದಲ್ಲಿ ಮೂರು ಬಾರಿ ಮಾಡುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿಯಂತ್ರಿಸಿಕೊಳ್ಳಬಹುದು. </p></li><li><p><strong>ನೋವು ನಿವಾರಕ ಮಾತ್ರೆಗಳನ್ನು ಸೇವನೆ ಮಾಡಬಾರದು :</strong> ತಲೆ ನೋವು, ಕೈ, ಕಾಲು ನೋವು ಹೀಗೆ ಸಣ್ಣ ಪುಟ್ಟ ವಿಷಯಗಳಿಗೂ ಮಾತ್ರೆಗಳನ್ನು ಸೇವಿಸುವುದನ್ನು ನಿಯಂತ್ರಿಸುವುದರಿಂದ ಗ್ಯಾಸ್ಟ್ರಿಕ್ ತಡೆಯಲು ಸಹಕಾರಿಯಾಗಿದೆ.</p></li><li><p><strong>ನಿಯಮಿತ ನೀರು ಸೇವನೆ:</strong> ಪ್ರತಿದಿನ 3–4 ಲೀಟರ್ ನೀರು ಕುಡಿಯುವುದರಿಂದ ಅಸಿಡಿಟಿಯನ್ನು ತಪ್ಪಿಸಬಹುದು.</p></li><li><p><strong>ಮಜ್ಜಿಗೆ ಸೇವನೆ:</strong> 1 ಲೋಟ ಮಜ್ಜಿಗೆಗೆ ಚಿಟಿಕೆಯಷ್ಟು ಕಾಳು ಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು ಹಾಗೂ ಅರ್ಧ ಲೋಟ ನೀರು ಬೆರೆಸಿ ಕುಡಿಯುವುದರಿಂದ ಅಸಿಡಿಟಿ ನಿಯಂತ್ರಿಸಿಕೊಳ್ಳಲು ಸಾಧ್ಯ.</p></li><li><p><strong>ಓಮಕಾಳು</strong>: ಉಗುರು ಬೆಚ್ಚಗಿನ ನೀರಿಗೆ ಚಿಟಿಕೆಯಷ್ಟು ಓಮಕಾಳನ್ನು ಸೇರಿಸಿ ಮಿಶ್ರಣ ಮಾಡಿ ಕುಡಿಯುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ತಪ್ಪಿಸಿಕೊಳ್ಳಬಹುದು. </p></li><li><p><strong>ಜೀರಿಗೆ ನೀರು</strong>: ಒಂದು ಲೋಟ ನೀರಿಗೆ ಅರ್ಧ ಚಮಚ ಜೀರಿಗೆ ಸೇರಿಸಿ ಕುದಿಸಿ ಕುಡಿಯುವುದರಿಂದ ಅಸಿಡಿಟಿಯನ್ನು ನಿಯಂತ್ರಿಸಿಕೊಳ್ಳಬಹುದು ಎನ್ನುತ್ತಾರೆ ಆಯುರ್ವೇದ ವೈದ್ಯರು.</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>