ಚಂದ್ರಗ್ರಹಣ ಪರಿಣಾಮದಿಂದಾದ ವಿಪತ್ತುಗಳು
ಜ್ಯೋತಿಷ ಶಾಸ್ತ್ರದ ಆಧಾರದ ಲೆಕ್ಕಾಚಾರಗಳನ್ನು ನೀವು ನಂಬುವುದಾದರೆ ಗ್ರಹಣಗಳು ಮನುಷ್ಯನ ಜೀವನದಲ್ಲಿ ಬಾಧೆಗಳನ್ನು ತರುತ್ತವೆ. ಕೇವಲ ಒಂದೇ ಮತದಿಂದ ಅಂದಿನ ಪ್ರಧಾನಿ ದಿ.ವಾಜಪೇಯಿ ಅವರ ಸರಕಾರ ಉರುಳಿದ್ದು, ಆದಾಯಕ್ಕಿಂತ ಜಾಸ್ತಿಯಾದ ಆಸ್ತಿ ಹೊಂದಿದ್ದ ಕಾರಣದಿಂದ ಜಯಲಲಿತಾ ಅವರು ಜೈಲು ಸೇರಿದ್ದು, ಸ್ವಂತ ಅಳಿಯ ಚಂದ್ರಬಾಬು ನಾಯ್ಡು ಅವರೇ ತಮ್ಮ ಮಾವ ಎನ್.ಟಿ.ರಾಮ ರಾವ್ ಅವರ ಮಂತ್ರಿ ಮಂಡಲ ಉರುಳಿಸಿದ್ದು ಇತ್ಯಾದಿ ಗ್ರಹಣದ ಫಲದಿಂದಲೇ ಎಂದರೆ ನೀವು ವಿಸ್ಮಯ ಪಡಬಹುದೇನೋ? ವಾಟರ್ ಗೇಟ್ ಹಗರಣದ ಕಾರಣ ಹರಳುಗಟ್ಟಿ ಅಮೆರಿಕದ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅಧ್ಯಕ್ಷ ಪಟ್ಟದಿಂದ ಪದಚ್ಯುತಗೊಂಡು ಮುಖಭಂಗ ಅನುಭವಿಸಿದ್ದು ಚಂದ್ರ ಗ್ರಹಣದ ಫಲವಾಗಿಯೇ ಎಂಬುದು ಜ್ಯೋತಿಷದ ವಿಶ್ಲೇಷಣೆ.