<p>ಚೌತಿ ಬಂತೆಂದರೆ ಸಾಕು ಎಲ್ಲೆಡೆ ಸಡಗರ. ಎಲ್ಲರೂ ಸೇರಿ ಕೂಡಿ ಸಂಭ್ರಮಿಸುವ ಹಬ್ಬ ಗಣೇಶ ಚತುರ್ಥಿ. ಸಮಾಜದಲ್ಲಿ ಒಗ್ಗಟ್ಟು ಕಾಪಾಡುವ ಸಲುವಾಗಿ ಗಣಪತಿ ಹಬ್ಬವನ್ನು ಆಚರಿಸಲಾಗುತ್ತದೆ. </p><p>ವೈದಿಕ ಪರಂಪರೆಯಲ್ಲಿ ಗಣೇಶನಿಗೆ ಮೊದಲ ಆದ್ಯತೆ ನೀಡಲಾಗಿದ್ದು, ಯಾವುದೇ ಶುಭ ಕಾರ್ಯ ಪ್ರಾರಂಭಿಸುವ ಮುನ್ನ ಗಣಪತಿಗೆ ಪೂಜೆ ಸಲ್ಲಿಸುವುದು ಪದ್ಧತಿಯಾಗಿದೆ.</p><p><strong>ಗಣಪತಿ ಪ್ರತಿಷ್ಠಾಪನೆ</strong> </p><p>ಮಣ್ಣಿನಿಂದ ಮಾಡಿದ ಗಣಪತಿಯನ್ನು ಚತುರ್ಥಿ ದಿನ ಪ್ರತಿಷ್ಠಾಪಿಸಿ, ಶುಚಿರ್ಭೂತರಾಗಿ ಪೂಜಾ ಕಾರ್ಯಗಳನ್ನು ನೆರವೇರಿಸುವ ಮೂಲಕ ಹಬ್ಬವನ್ನು ಆಚರಿಸುವುದರಿಂದ ಚೌತಿಯ ವಿಶೇಷ ಫಲ ಸಿಗುತ್ತದೆ.</p><p>ಪೂಜಾ ವಿಧಿ ವಿಧಾನಗಳಿಗೆ ಎಲ್ಲಾ ಸಮಯ ಶ್ರೇಷ್ಠವಲ್ಲ. 12 ಗಂಟೆಯೊಳಗೆ ಗಣಪತಿಯನ್ನು ಪ್ರತಿಷ್ಠಾಪಿಸಿ, ಪೂಜಿಸುವುದು ಸಂಪ್ರದಾಯವಾಗಿದೆ.</p><p>ವಿನಾಯಕ ಹಬ್ಬದ ಪೂರ್ವಭಾವಿಯಾಗಿ ರಾಹುಕಾಲ, ಯಮಗಂಡಕಾಲದ ಒಳಗೆ ಗಣಪನನ್ನು ಮಾರುಕಟ್ಟೆಯಿಂದ ತಂದು ಶುದ್ಧವಾದ ಸ್ಥಳದಲ್ಲಿ ಇರಿಸಿ. </p>.ಗಣೇಶ ಚತುರ್ಥಿ: ವಿವಿಧ ರೂಪಗಳಲ್ಲಿ ಕರಿಮುಖನ ದರ್ಶನ; ಇಲ್ಲಿದೆ ಚಿತ್ರ ಸಹಿತ ಮಾಹಿತಿ.<p><strong>ಗಣಪತಿ ವಿಗ್ರಹ ಶುದ್ಧೀಕರಣ</strong></p><p>ಮನೆಗೆ ಅಥವಾ ಊರಿಗೆ ತಂದ ಗಣಪನ ವಿಗ್ರಹವನ್ನು ಮಹಿಳೆಯರಿಂದ ಆರತಿ ಮಾಡಿಸಿ ಗಣಪತಿಯನ್ನು ಬರಮಾಡಿಕೊಳ್ಳಬೇಕು. </p><p>ಮನೆಯ ಹೊರಗೆ ಅಥವಾ ಹೊರಾಂಗಣದಲ್ಲಿ ಗಣಪತಿಯನ್ನು ಶುದ್ಧ ಜಾಗದಲ್ಲಿ ಇರಿಸಿ, ಮಂತ್ರ ಪಠಣೆಯಿಂದ ಗಣಪನನ್ನು ಆಹ್ವಾನಿಸಿ. </p><p>ಶುದ್ಧ ನೀರು , ಗಂಧ, ಹೂವು, ಅಕ್ಷತೆಗಳಿಂದ, ವಿನಾಯಕನಿಗೆ ಅಭಿಷೇಕ ಮಾಡಿದ ಬಳಿಕ ಅಕ್ಕಿಯಿಂದ ಮಾಡಿದ ಪೀಠದಲ್ಲಿ ಮೇಲೆ ಬಾಳೆ ಎಲೆ ಇಟ್ಟು ಅದರಲ್ಲಿ ಗಣಪನನ್ನು ಕೂರಿಸಿ. </p><p>ಎರಡು ಬದಿಯಲ್ಲಿ ದೀಪವನ್ನು ಹಚ್ಚಿಟ್ಟು, ಮಾವಿನ ಎಲೆ, ಬಾಳೆ ಕಂಬ, ಕಬ್ಬುಗಳಿಂದ ಅಲಂಕಾರ ಮಾಡಿದ ಮಂಟಪದ ಒಳಗೆ ವಿನಾಯಕನನ್ನು ಪ್ರತಿಷ್ಠಾಪಿಸಬೇಕು. </p><p>ಪ್ರತಿಷ್ಠಾಪನೆ ಬಳಿಕ ಒಂದು ತಟ್ಟೆಯಲ್ಲಿ ಕೊಬ್ಬರಿ, ವೀಳ್ಯದೆಲೆ – ಅಡಿಕೆ, ಬೆಲ್ಲ, ಬಾಳೆಹಣ್ಣು, ತೆಂಗಿನಕಾಯಿ ಇಟ್ಟು ಗಣೇಶನಿಗೆ ಬಾಗಿನ ಅರ್ಪಿಸುವುದು ಪದ್ಧತಿಯಾಗಿದೆ.</p>.ಗೌರಿ ಹಬ್ಬ: ಆಚರಣೆ, ಪೂಜೆ ಹೇಗೆ? ಸೂಕ್ತ ಮುಹೂರ್ತ ಯಾವುದು? ಇಲ್ಲಿದೆ ವಿವರ.<p><strong>ಪೂಜೆಗೆ ಬೇಕಾಗುವ ಸಾಮಗ್ರಿಗಳು</strong></p><p>ಅರಶಿಣ, ಕುಂಕುಮ, ಗಂಧ , ಭಸ್ಮ, ಗಂಜಲ, ಗರಿಕೆ ಹುಲ್ಲು , ಬಿಡಿ ಹೂಗಳು, ಅಗರಬತ್ತಿ, ವೀಳ್ಯದೆಲೆ. </p><p>ಕಳಶ ತೀರ್ಥ ಸಿಂಪಡಿಸುವ ಮೂಲಕ ಪೂಜೆಯನ್ನು ಪ್ರಾರಂಭಿಸಬೇಕು. ಗಣಪತಿಗೆ ಧೂಪ ಸಮರ್ಪಿಸಿ, ಅಷ್ಟೋತ್ತರ ಜಪಿಸಿ, ದೀಪ ಬೆಳಗಿಸಿ, ಮೋದಕ ಸೇರಿದಂತೆ ಅನೇಕ ಭಕ್ಷ್ಯಗಳು, ಫಲ ಪುಷ್ಪಗಳನ್ನ ಅರ್ಪಿಸಿ ಪೂಜೆ ಮಾಡುವುದು ಪರಂಪರೆಯಾಗಿದೆ.</p><p>ಗಣೇಶನಿಗೆ ಪೂಜೆ ಸಂದರ್ಭದಲ್ಲಿ ಗರಿಕೆಯ ಹಾಗೂ ಕುಂಕುಮ ಅರ್ಚನೆಯನ್ನು ಮಾಡುವುದು ಸಂಪ್ರದಾಯವಾಗಿದೆ. ಗರಿಕೆ ಬಳಸಿದಷ್ಟು ಶುಭಕರ ಎನ್ನುತ್ತಾರೆ. </p><p>ಬಳಿಕ ಏಕಾರತಿ , ಅಥವಾ ಕಳಶ ಬೆಳಗುವುದನ್ನು ಮರೆಯಬಾರದು.</p><p>ಗಣಪತಿ ಪ್ರತಿಷ್ಠಾಪಿಸಿದ ದಿನದಿಂದ ವಿಸರ್ಜನೆವರೆಗೂ ಮನೆಯವರು ಎಲ್ಲರೂ ಅಕ್ಷತೆ ಹಿಡಿದು ಎಲ್ಲಾ ಕೆಲಸಗಳು ನಿರ್ವಿಘ್ನವಾಗಿ ನೆರವೇರಲೆಂದು ಪ್ರಾರ್ಥಿಸಿ ಪೂಜೆ ಸಲ್ಲಿಸಬೇಕು. </p><p><strong>ಗಣಪ ವಿಸರ್ಜನೆ ದಿನ</strong> </p><p>ಗಣೇಶನಿಗೆ ಅರ್ಪಿಸಿದ ಭಕ್ಷ್ಯಗಳನ್ನು ಮನೆಗೆ ಬಂದ ಅತಿಥಿಗಳಿಗೆ ಹಂಚಿ, ಬಾಗಿನವನ್ನು ಮಹಿಳೆಯರಿಗೆ ನೀಡುವುದು ಪದ್ಧತಿಯಾಗಿದೆ. </p><p>ವಿನಾಯಕ ಮತ್ತೆ ಬರಲೆಂದು ಪ್ರಾರ್ಥಿಸಿ, ವಾದ್ಯಗಳಿಂದ ವಿನಾಯಕನನ್ನು ತೃಪ್ತಿ ಪಡಿಸಿ ಮನೆಯಲ್ಲಿರುವ ಶುದ್ಧ ತೊಟ್ಟಿ ಅಥವಾ ಊರಿನ ಕೊಳದಲ್ಲಿ ಗಣೇಶನನ್ನು ವಿಸರ್ಜಿಸುವುದು ಪದ್ಧತಿಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚೌತಿ ಬಂತೆಂದರೆ ಸಾಕು ಎಲ್ಲೆಡೆ ಸಡಗರ. ಎಲ್ಲರೂ ಸೇರಿ ಕೂಡಿ ಸಂಭ್ರಮಿಸುವ ಹಬ್ಬ ಗಣೇಶ ಚತುರ್ಥಿ. ಸಮಾಜದಲ್ಲಿ ಒಗ್ಗಟ್ಟು ಕಾಪಾಡುವ ಸಲುವಾಗಿ ಗಣಪತಿ ಹಬ್ಬವನ್ನು ಆಚರಿಸಲಾಗುತ್ತದೆ. </p><p>ವೈದಿಕ ಪರಂಪರೆಯಲ್ಲಿ ಗಣೇಶನಿಗೆ ಮೊದಲ ಆದ್ಯತೆ ನೀಡಲಾಗಿದ್ದು, ಯಾವುದೇ ಶುಭ ಕಾರ್ಯ ಪ್ರಾರಂಭಿಸುವ ಮುನ್ನ ಗಣಪತಿಗೆ ಪೂಜೆ ಸಲ್ಲಿಸುವುದು ಪದ್ಧತಿಯಾಗಿದೆ.</p><p><strong>ಗಣಪತಿ ಪ್ರತಿಷ್ಠಾಪನೆ</strong> </p><p>ಮಣ್ಣಿನಿಂದ ಮಾಡಿದ ಗಣಪತಿಯನ್ನು ಚತುರ್ಥಿ ದಿನ ಪ್ರತಿಷ್ಠಾಪಿಸಿ, ಶುಚಿರ್ಭೂತರಾಗಿ ಪೂಜಾ ಕಾರ್ಯಗಳನ್ನು ನೆರವೇರಿಸುವ ಮೂಲಕ ಹಬ್ಬವನ್ನು ಆಚರಿಸುವುದರಿಂದ ಚೌತಿಯ ವಿಶೇಷ ಫಲ ಸಿಗುತ್ತದೆ.</p><p>ಪೂಜಾ ವಿಧಿ ವಿಧಾನಗಳಿಗೆ ಎಲ್ಲಾ ಸಮಯ ಶ್ರೇಷ್ಠವಲ್ಲ. 12 ಗಂಟೆಯೊಳಗೆ ಗಣಪತಿಯನ್ನು ಪ್ರತಿಷ್ಠಾಪಿಸಿ, ಪೂಜಿಸುವುದು ಸಂಪ್ರದಾಯವಾಗಿದೆ.</p><p>ವಿನಾಯಕ ಹಬ್ಬದ ಪೂರ್ವಭಾವಿಯಾಗಿ ರಾಹುಕಾಲ, ಯಮಗಂಡಕಾಲದ ಒಳಗೆ ಗಣಪನನ್ನು ಮಾರುಕಟ್ಟೆಯಿಂದ ತಂದು ಶುದ್ಧವಾದ ಸ್ಥಳದಲ್ಲಿ ಇರಿಸಿ. </p>.ಗಣೇಶ ಚತುರ್ಥಿ: ವಿವಿಧ ರೂಪಗಳಲ್ಲಿ ಕರಿಮುಖನ ದರ್ಶನ; ಇಲ್ಲಿದೆ ಚಿತ್ರ ಸಹಿತ ಮಾಹಿತಿ.<p><strong>ಗಣಪತಿ ವಿಗ್ರಹ ಶುದ್ಧೀಕರಣ</strong></p><p>ಮನೆಗೆ ಅಥವಾ ಊರಿಗೆ ತಂದ ಗಣಪನ ವಿಗ್ರಹವನ್ನು ಮಹಿಳೆಯರಿಂದ ಆರತಿ ಮಾಡಿಸಿ ಗಣಪತಿಯನ್ನು ಬರಮಾಡಿಕೊಳ್ಳಬೇಕು. </p><p>ಮನೆಯ ಹೊರಗೆ ಅಥವಾ ಹೊರಾಂಗಣದಲ್ಲಿ ಗಣಪತಿಯನ್ನು ಶುದ್ಧ ಜಾಗದಲ್ಲಿ ಇರಿಸಿ, ಮಂತ್ರ ಪಠಣೆಯಿಂದ ಗಣಪನನ್ನು ಆಹ್ವಾನಿಸಿ. </p><p>ಶುದ್ಧ ನೀರು , ಗಂಧ, ಹೂವು, ಅಕ್ಷತೆಗಳಿಂದ, ವಿನಾಯಕನಿಗೆ ಅಭಿಷೇಕ ಮಾಡಿದ ಬಳಿಕ ಅಕ್ಕಿಯಿಂದ ಮಾಡಿದ ಪೀಠದಲ್ಲಿ ಮೇಲೆ ಬಾಳೆ ಎಲೆ ಇಟ್ಟು ಅದರಲ್ಲಿ ಗಣಪನನ್ನು ಕೂರಿಸಿ. </p><p>ಎರಡು ಬದಿಯಲ್ಲಿ ದೀಪವನ್ನು ಹಚ್ಚಿಟ್ಟು, ಮಾವಿನ ಎಲೆ, ಬಾಳೆ ಕಂಬ, ಕಬ್ಬುಗಳಿಂದ ಅಲಂಕಾರ ಮಾಡಿದ ಮಂಟಪದ ಒಳಗೆ ವಿನಾಯಕನನ್ನು ಪ್ರತಿಷ್ಠಾಪಿಸಬೇಕು. </p><p>ಪ್ರತಿಷ್ಠಾಪನೆ ಬಳಿಕ ಒಂದು ತಟ್ಟೆಯಲ್ಲಿ ಕೊಬ್ಬರಿ, ವೀಳ್ಯದೆಲೆ – ಅಡಿಕೆ, ಬೆಲ್ಲ, ಬಾಳೆಹಣ್ಣು, ತೆಂಗಿನಕಾಯಿ ಇಟ್ಟು ಗಣೇಶನಿಗೆ ಬಾಗಿನ ಅರ್ಪಿಸುವುದು ಪದ್ಧತಿಯಾಗಿದೆ.</p>.ಗೌರಿ ಹಬ್ಬ: ಆಚರಣೆ, ಪೂಜೆ ಹೇಗೆ? ಸೂಕ್ತ ಮುಹೂರ್ತ ಯಾವುದು? ಇಲ್ಲಿದೆ ವಿವರ.<p><strong>ಪೂಜೆಗೆ ಬೇಕಾಗುವ ಸಾಮಗ್ರಿಗಳು</strong></p><p>ಅರಶಿಣ, ಕುಂಕುಮ, ಗಂಧ , ಭಸ್ಮ, ಗಂಜಲ, ಗರಿಕೆ ಹುಲ್ಲು , ಬಿಡಿ ಹೂಗಳು, ಅಗರಬತ್ತಿ, ವೀಳ್ಯದೆಲೆ. </p><p>ಕಳಶ ತೀರ್ಥ ಸಿಂಪಡಿಸುವ ಮೂಲಕ ಪೂಜೆಯನ್ನು ಪ್ರಾರಂಭಿಸಬೇಕು. ಗಣಪತಿಗೆ ಧೂಪ ಸಮರ್ಪಿಸಿ, ಅಷ್ಟೋತ್ತರ ಜಪಿಸಿ, ದೀಪ ಬೆಳಗಿಸಿ, ಮೋದಕ ಸೇರಿದಂತೆ ಅನೇಕ ಭಕ್ಷ್ಯಗಳು, ಫಲ ಪುಷ್ಪಗಳನ್ನ ಅರ್ಪಿಸಿ ಪೂಜೆ ಮಾಡುವುದು ಪರಂಪರೆಯಾಗಿದೆ.</p><p>ಗಣೇಶನಿಗೆ ಪೂಜೆ ಸಂದರ್ಭದಲ್ಲಿ ಗರಿಕೆಯ ಹಾಗೂ ಕುಂಕುಮ ಅರ್ಚನೆಯನ್ನು ಮಾಡುವುದು ಸಂಪ್ರದಾಯವಾಗಿದೆ. ಗರಿಕೆ ಬಳಸಿದಷ್ಟು ಶುಭಕರ ಎನ್ನುತ್ತಾರೆ. </p><p>ಬಳಿಕ ಏಕಾರತಿ , ಅಥವಾ ಕಳಶ ಬೆಳಗುವುದನ್ನು ಮರೆಯಬಾರದು.</p><p>ಗಣಪತಿ ಪ್ರತಿಷ್ಠಾಪಿಸಿದ ದಿನದಿಂದ ವಿಸರ್ಜನೆವರೆಗೂ ಮನೆಯವರು ಎಲ್ಲರೂ ಅಕ್ಷತೆ ಹಿಡಿದು ಎಲ್ಲಾ ಕೆಲಸಗಳು ನಿರ್ವಿಘ್ನವಾಗಿ ನೆರವೇರಲೆಂದು ಪ್ರಾರ್ಥಿಸಿ ಪೂಜೆ ಸಲ್ಲಿಸಬೇಕು. </p><p><strong>ಗಣಪ ವಿಸರ್ಜನೆ ದಿನ</strong> </p><p>ಗಣೇಶನಿಗೆ ಅರ್ಪಿಸಿದ ಭಕ್ಷ್ಯಗಳನ್ನು ಮನೆಗೆ ಬಂದ ಅತಿಥಿಗಳಿಗೆ ಹಂಚಿ, ಬಾಗಿನವನ್ನು ಮಹಿಳೆಯರಿಗೆ ನೀಡುವುದು ಪದ್ಧತಿಯಾಗಿದೆ. </p><p>ವಿನಾಯಕ ಮತ್ತೆ ಬರಲೆಂದು ಪ್ರಾರ್ಥಿಸಿ, ವಾದ್ಯಗಳಿಂದ ವಿನಾಯಕನನ್ನು ತೃಪ್ತಿ ಪಡಿಸಿ ಮನೆಯಲ್ಲಿರುವ ಶುದ್ಧ ತೊಟ್ಟಿ ಅಥವಾ ಊರಿನ ಕೊಳದಲ್ಲಿ ಗಣೇಶನನ್ನು ವಿಸರ್ಜಿಸುವುದು ಪದ್ಧತಿಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>