<p><strong>ಹಾವೇರಿ</strong>: ಬ್ಯಾಂಕಾಕ್ನಲ್ಲಿ ಭೂಕಂಪ ಸಂಭವಿಸಿದ್ದು, ಪ್ರವಾಸಕ್ಕೆ ತೆರಳಿದ್ದ ಹಾವೇರಿ ಜಿಲ್ಲೆಯ ಐವರು ಸುರಕ್ಷಿತವಾಗಿರುವುದಾಗಿ ಕುಟುಂಬದವರು ತಿಳಿಸಿದ್ದಾರೆ.</p><p>ಹಾವೇರಿ ಜಿಲ್ಲೆಯ ಐವರು ಸ್ನೇಹಿತರು, ಬೆಂಗಳೂರಿನ ಮೂಲಕ ಮಾ. 23ರಂದು ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ್ದಾರೆ. ಗುರುವಾರ ರಾತ್ರಿ ಅವರೆಲ್ಲರೂ ಬ್ಯಾಂಕಾಕ್ನಲ್ಲಿ ಉಳಿದುಕೊಂಡಿದ್ದರು. ಶುಕ್ರವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಸಫಾರಿ ವಾರ್ಡ್ ಪ್ರದೇಶಕ್ಕೆ ಹೊರಟಿದ್ದ ಸಂದರ್ಭದಲ್ಲಿ ಭೂಕಂಪನದ ಅನುಭವವಾಗಿರುವುದಾಗಿ ಗೊತ್ತಾಗಿದೆ.</p><p>ಬ್ಯಾಂಕಾಕ್ ಪ್ರವಾಸದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಹಾವೇರಿ ಯುವಕ, ‘ಬ್ಯಾಂಕಾಕ್ ಪ್ರವಾಸದಲ್ಲಿರುವ ನಾವು, ಸದ್ಯ ಸಫಾರಿ ವಾರ್ಡ್ ಬಳಿ ಇದ್ದೇವೆ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಅಲ್ಲಲ್ಲಿ ಭೂಕಂಪ ಆಗಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ’ ಎಂದಿದ್ದಾರೆ.</p><p>‘ಎಲ್ಲರೂ ಈಗ ಬೆಂಗಳೂರಿಗೆ ವಾಪಸು ಬರಲು ಪ್ರಯತ್ನಿಸುತ್ತಿದ್ದೇವೆ. ವಿಮಾನಗಳ ವೇಳಾಪಟ್ಟಿ ಬದಲಾಗಿದೆ. ತಡವಾಗಿ ವಿಮಾನ ಬರಲಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.</p>.Bangkok Earthquake Video: ಮ್ಯಾನ್ಮಾರ್, ಥಾಯ್ಲೆಂಡ್ನ ಭೀಕರ ಭೂಕಂಪದ ದೃಶ್ಯಗಳು.ಮ್ಯಾನ್ಮಾರ್, ಥಾಯ್ಲೆಂಡ್ ಭೂಕಂಪ: ನೆರವಿಗೆ ಭಾರತ ಸಿದ್ಧ; ಪ್ರಧಾನಿ ಮೋದಿ ಅಭಯ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ</strong>: ಬ್ಯಾಂಕಾಕ್ನಲ್ಲಿ ಭೂಕಂಪ ಸಂಭವಿಸಿದ್ದು, ಪ್ರವಾಸಕ್ಕೆ ತೆರಳಿದ್ದ ಹಾವೇರಿ ಜಿಲ್ಲೆಯ ಐವರು ಸುರಕ್ಷಿತವಾಗಿರುವುದಾಗಿ ಕುಟುಂಬದವರು ತಿಳಿಸಿದ್ದಾರೆ.</p><p>ಹಾವೇರಿ ಜಿಲ್ಲೆಯ ಐವರು ಸ್ನೇಹಿತರು, ಬೆಂಗಳೂರಿನ ಮೂಲಕ ಮಾ. 23ರಂದು ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ್ದಾರೆ. ಗುರುವಾರ ರಾತ್ರಿ ಅವರೆಲ್ಲರೂ ಬ್ಯಾಂಕಾಕ್ನಲ್ಲಿ ಉಳಿದುಕೊಂಡಿದ್ದರು. ಶುಕ್ರವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಸಫಾರಿ ವಾರ್ಡ್ ಪ್ರದೇಶಕ್ಕೆ ಹೊರಟಿದ್ದ ಸಂದರ್ಭದಲ್ಲಿ ಭೂಕಂಪನದ ಅನುಭವವಾಗಿರುವುದಾಗಿ ಗೊತ್ತಾಗಿದೆ.</p><p>ಬ್ಯಾಂಕಾಕ್ ಪ್ರವಾಸದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಹಾವೇರಿ ಯುವಕ, ‘ಬ್ಯಾಂಕಾಕ್ ಪ್ರವಾಸದಲ್ಲಿರುವ ನಾವು, ಸದ್ಯ ಸಫಾರಿ ವಾರ್ಡ್ ಬಳಿ ಇದ್ದೇವೆ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಅಲ್ಲಲ್ಲಿ ಭೂಕಂಪ ಆಗಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ’ ಎಂದಿದ್ದಾರೆ.</p><p>‘ಎಲ್ಲರೂ ಈಗ ಬೆಂಗಳೂರಿಗೆ ವಾಪಸು ಬರಲು ಪ್ರಯತ್ನಿಸುತ್ತಿದ್ದೇವೆ. ವಿಮಾನಗಳ ವೇಳಾಪಟ್ಟಿ ಬದಲಾಗಿದೆ. ತಡವಾಗಿ ವಿಮಾನ ಬರಲಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.</p>.Bangkok Earthquake Video: ಮ್ಯಾನ್ಮಾರ್, ಥಾಯ್ಲೆಂಡ್ನ ಭೀಕರ ಭೂಕಂಪದ ದೃಶ್ಯಗಳು.ಮ್ಯಾನ್ಮಾರ್, ಥಾಯ್ಲೆಂಡ್ ಭೂಕಂಪ: ನೆರವಿಗೆ ಭಾರತ ಸಿದ್ಧ; ಪ್ರಧಾನಿ ಮೋದಿ ಅಭಯ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>