<p><strong>ಸರಗೂರು (ಮೈಸೂರು ಜಿಲ್ಲೆ):</strong> ತಾಲ್ಲೂಕಿನ ಶಿವಪುರಮುಂಟಿ ಗ್ರಾಮದ ಜಮೀನಿನಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಹುಲಿ ಸೆರೆಯಾಗಿದೆ. </p>.<p>ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಹೆಡಿಯಾಲ ಉಪ ವಿಭಾಗದ ವ್ಯಾಪ್ತಿಯ ಜಯಲಕ್ಷ್ಮೀ ಪುರ, ಶಿವಪುರ ಸೇರಿದಂತೆ ಕಾಡಂಚಿನ ಗ್ರಾಮಗಳ ಸುತ್ತಮುತ್ತ ಓಡಾಡುತ್ತಿದ್ದ 12 ವರ್ಷದ ಹೆಣ್ಣು ಹುಲಿಯು ಜಾನುವಾರುಗಳನ್ನು ಕೊಂದಿತ್ತು. ಸೆರೆಗೆ ಗ್ರಾಮಸ್ಥರು ಆಗ್ರಹಿಸಿದ್ದರು. </p>.<p>ಮೂರು ಕಡೆ ಬೋನು ಇರಿಸಿ ಕೂಂಬಿಂಗ್ ಕಾರ್ಯಾಚರಣೆಯನ್ನು ಇಲಾಖೆಯು ಆರಂಭಿಸಿತ್ತು.</p>.<p>'ಭಾನುವಾರ ಬೆಳಿಗ್ಗೆ ಸೆರೆ ಹಿಡಿದ ಹುಲಿಗೆ ಪಶುವೈದ್ಯಾಧಿಕಾರಿ ವಾಸಿಂ ಮಿರ್ಜಾ ಅರಿವಳಿಕೆ ನೀಡಿದರು. ಸುರಕ್ಷಿತವಾಗಿ ಬೆಂಗಳೂರಿನ ಬನ್ನೇರುಘಟ್ಟ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ' ಎಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಎಸ್. ಪ್ರಭಾಕರನ್ ತಿಳಿಸಿದರು. </p>.<p>'ಹುಲಿಗೆ ವಯಸ್ಸಾಗಿದ್ದು, ಹಲ್ಲು, ದವಡೆಗಳು ಶಕ್ತಿಹೀನವಾಗಿರುವ ಬಗ್ಗೆ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದು, ಚಿಕಿತ್ಸೆ ಹಾಗೂ ಶುಶ್ರೂಷೆಯನ್ನು ಪುನರ್ವಸತಿ ಕೇಂದ್ರದಲ್ಲಿ ನೀಡಲಾಗುತ್ತದೆ' ಎಂದು ಎಸಿಎಫ್ ಎ.ವಿ.ಸತೀಶ್ ತಿಳಿಸಿದರು.</p>.<p>ಹೆಡಿಯಾಲ ವಲಯದ ಆರ್ಎಫ್ಓ ಮುನಿರಾಜು, ಡಿಆರ್ಎಫ್ಓ ರಘುನಾಥೇಗೌಡ, ಕಾರ್ತಿಕ್ ಎನ್.ನಾಯ್ಕ್, ಕೆ.ಸೋಮ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸರಗೂರು (ಮೈಸೂರು ಜಿಲ್ಲೆ):</strong> ತಾಲ್ಲೂಕಿನ ಶಿವಪುರಮುಂಟಿ ಗ್ರಾಮದ ಜಮೀನಿನಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಹುಲಿ ಸೆರೆಯಾಗಿದೆ. </p>.<p>ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಹೆಡಿಯಾಲ ಉಪ ವಿಭಾಗದ ವ್ಯಾಪ್ತಿಯ ಜಯಲಕ್ಷ್ಮೀ ಪುರ, ಶಿವಪುರ ಸೇರಿದಂತೆ ಕಾಡಂಚಿನ ಗ್ರಾಮಗಳ ಸುತ್ತಮುತ್ತ ಓಡಾಡುತ್ತಿದ್ದ 12 ವರ್ಷದ ಹೆಣ್ಣು ಹುಲಿಯು ಜಾನುವಾರುಗಳನ್ನು ಕೊಂದಿತ್ತು. ಸೆರೆಗೆ ಗ್ರಾಮಸ್ಥರು ಆಗ್ರಹಿಸಿದ್ದರು. </p>.<p>ಮೂರು ಕಡೆ ಬೋನು ಇರಿಸಿ ಕೂಂಬಿಂಗ್ ಕಾರ್ಯಾಚರಣೆಯನ್ನು ಇಲಾಖೆಯು ಆರಂಭಿಸಿತ್ತು.</p>.<p>'ಭಾನುವಾರ ಬೆಳಿಗ್ಗೆ ಸೆರೆ ಹಿಡಿದ ಹುಲಿಗೆ ಪಶುವೈದ್ಯಾಧಿಕಾರಿ ವಾಸಿಂ ಮಿರ್ಜಾ ಅರಿವಳಿಕೆ ನೀಡಿದರು. ಸುರಕ್ಷಿತವಾಗಿ ಬೆಂಗಳೂರಿನ ಬನ್ನೇರುಘಟ್ಟ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ' ಎಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಎಸ್. ಪ್ರಭಾಕರನ್ ತಿಳಿಸಿದರು. </p>.<p>'ಹುಲಿಗೆ ವಯಸ್ಸಾಗಿದ್ದು, ಹಲ್ಲು, ದವಡೆಗಳು ಶಕ್ತಿಹೀನವಾಗಿರುವ ಬಗ್ಗೆ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದು, ಚಿಕಿತ್ಸೆ ಹಾಗೂ ಶುಶ್ರೂಷೆಯನ್ನು ಪುನರ್ವಸತಿ ಕೇಂದ್ರದಲ್ಲಿ ನೀಡಲಾಗುತ್ತದೆ' ಎಂದು ಎಸಿಎಫ್ ಎ.ವಿ.ಸತೀಶ್ ತಿಳಿಸಿದರು.</p>.<p>ಹೆಡಿಯಾಲ ವಲಯದ ಆರ್ಎಫ್ಓ ಮುನಿರಾಜು, ಡಿಆರ್ಎಫ್ಓ ರಘುನಾಥೇಗೌಡ, ಕಾರ್ತಿಕ್ ಎನ್.ನಾಯ್ಕ್, ಕೆ.ಸೋಮ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>