<p><strong>ನವದೆಹಲಿ</strong>: ಮಧ್ಯಪ್ರದೇಶದ ಧಾರ್ ಜಿಲ್ಲೆಯ ಭೋಜಶಾಲಾ– ಕಮಲಾ ಮೌಲಾ ಮಸೀದಿಯಲ್ಲಿ ಬಸಂತ ಪಂಚಮಿ ದಿನವಾದ ಶುಕ್ರವಾರ (ಇದೇ 23) ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಪ್ರಾರ್ಥನೆ ಸಲ್ಲಿಸಲು ಹಿಂದೂಗಳಿಗೆ ಸುಪ್ರೀಂ ಕೋರ್ಟ್ ಗುರುವಾರ ಅನುಮತಿ ನೀಡಿದೆ.</p><p>ಇದೇ ವೇಳೆ ಅಂದು ಮಧ್ಯಾಹ್ನ 1ರಿಂದ 3 ಗಂಟೆಯವರೆಗೆ ಮುಸ್ಲಿಮರಿಗೆ ನಮಾಜ್ ಮಾಡಲೂ ನ್ಯಾಯಾಲಯ ಸಮ್ಮತಿಸಿದೆ. ಎರಡೂ ಧರ್ಮದವರು ಪರಸ್ಪರ ಗೌರವ, ಸೌಹಾರ್ದದಿಂದ ಇರಬೇಕು ಮತ್ತು ಸ್ಥಳೀಯ ಆಡಳಿತಕ್ಕೆ ಸಹಕರಿಸಬೇಕು ಎಂದೂ ಅದು ಸೂಚಿಸಿದೆ.</p><p>ಈ ಕುರಿತು ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿಪುಲ್ ಎಂ. ಪಂಚೋಲಿ ಅವರನ್ನು ಒಳಗೊಂಡ ಪೀಠವು, ಅಂದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದೆ.</p><p><strong>ನಮಾಜ್ ಮಾಡುವವರ ಪಟ್ಟಿ ಸಲ್ಲಿಸಲು ಸೂಚನೆ</strong></p><p>ಅಂದು, ಈ ಮಸೀದಿಯಲ್ಲಿ ನಮಾಜ್ ಮಾಡಲು ಬರುವ ಮುಸ್ಲಿಂ ಸಮುದಾಯದ ವ್ಯಕ್ತಿಗಳ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸುವಂತೆ ಪೀಠ ಸೂಚನೆ ನೀಡಿದೆ. </p><p>ಭೋಜಶಾಲಾ ಆವರಣದಲ್ಲಿ ಬಸಂತ ಪಂಚಮಿ ದಿನವಾದ ಶುಕ್ರವಾರ ಸರಸ್ವತಿ ಪೂಜೆ ಸೇರಿದಂತೆ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಅನುಮತಿ ನೀಡುವಂತೆ ಹಿಂದೂ ಗುಂಪು ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಶುಕ್ರವಾರ ನಮಾಜ್ಗೆ ತೊಂದರೆ ಆಗದಂತೆ ನೋಡಿಕೊಳ್ಳುವಂತೆ ಮುಸ್ಲಿಂ ಗುಂಪು ಸಹ ಮನವಿ ಮಾಡಿತ್ತು.</p><p>ಹಿಂದೂ ಅರ್ಜಿದಾರರ ಪರ ವಾದ ಮಾಡಿದ ಹಿರಿಯ ವಕೀಲ ವಿಷ್ಣುಶಂಕರ್ ಜೈನ್, ‘ಬಸಂತ ಪಂಚಮಿ ಶುಕ್ರವಾರವೇ ಬಂದಿರುವುದು ಕಾಕತಾಳೀಯ. ಅಂದು ಬೋಜಶಾಲಾದಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಲು ಹಿಂದೂಗಳಿಗೆ ಅವಕಾಶ ನೀಡಬೇಕು’ ಎಂದು ಕೋರಿದರು. </p><p>ಮಸೀದಿ ಸಮಿತಿ ಪರ ವಾದಿಸಿದ ಹಿರಿಯ ವಕೀಲ ಸಲ್ಮಾನ್ ಖುರ್ಷಿದ್, ‘ಶುಕ್ರವಾರ ಮಧ್ಯಾಹ್ನ 1ರಿಂದ 3 ಗಂಟೆಯವರೆಗೆ ನಮಾಜ್ ನಡೆಯಲಿದ್ದು, ಆ ಬಳಿಕ ಸ್ಥಳವನ್ನು ಖಾಲಿ ಮಾಡಲಾಗುವುದು’ ಎಂದು ಹೇಳಿದರು. ಇದಕ್ಕೂ ಮುನ್ನ ಸಂಜೆ ಐದು ಗಂಟೆ ಬಳಿಕ ನಮಾಜ್ ಮಾಡಲು ಸಾಧ್ಯವೇ ಎಂದು ಖುರ್ಷಿದ್ ಅವರನ್ನು ಕೇಳಲಾಯಿತು. ‘ನಮಾಜ್ ವೇಳಾಪಟ್ಟಿಯನ್ನು ಬದಲಿಸಲಾಗದು’ ಎಂದು ಅವರು ಪೀಠದ ಗಮನಕ್ಕೆ ತಂದರು.</p><p>ಉಳಿದಂತೆ ಪ್ರಸ್ತಾವವನ್ನು ಒಪ್ಪಿಕೊಂಡ ಖುರ್ಷಿದ್ ಅವರು, ನಮಾಜ್ ಮಾಡಲು ಎಷ್ಟು ಜನ ಬರಬಹುದು ಎಂಬುದರ ಪಟ್ಟಿಯನ್ನು ಶುಕ್ರವಾರ ಬೆಳಿಗ್ಗೆ ಜಿಲ್ಲಾಧಿಕಾರಿ ಜತೆ ಹಂಚಿಕೊಳ್ಳಲಾಗುವುದು ಎಂದರು.</p>.ಭೋಜಶಾಲಾ ಸಮೀಕ್ಷೆ: ಪರಿಶೀಲಿಸಲು ಸುಪ್ರೀಂ ಕೋರ್ಟ್ ಒಪ್ಪಿಗೆ.ಮಧ್ಯಪ್ರದೇಶ ಲೋಕಸಭಾ ಚುನಾವಣೆ | ಭೋಜಶಾಲಾ ವಿವಾದ: ಮತದಾರರ ಭಿನ್ನ ಅಭಿಪ್ರಾಯ.<p><strong>11ನೇ ಶತಮಾನದ ಸ್ಮಾರಕ</strong></p><p>ಭೋಜಶಾಲಾ 11ನೇ ಶತಮಾನದ ಐತಿಹಾಸಿಕ ಸ್ಮಾರಕವಾಗಿದ್ದು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಅದನ್ನು ಸಂರಕ್ಷಿತ ತಾಣ ಎಂದು ಗುರುತಿಸಿದೆ. ಈ ಸ್ಮಾರಕವು ವಾಗ್ದೇವಿಗೆ (ಸರಸ್ವತಿ ದೇವಿ) ಸಮರ್ಪಿತವಾದದ್ದು ಎಂದು ಹಿಂದೂಗಳು ನಂಬಿದ್ದರೆ, ಮುಸ್ಲಿಮರು ಅದನ್ನು ಕಮಲ್ ಮೌಲಾ ಮಸೀದಿ ಎಂದು ಪರಿಗಣಿಸಿದ್ದಾರೆ.</p><p>ಭೋಜಶಾಲಾ ಆವರಣದಲ್ಲಿ ಹಿಂದೂಗಳಿಗೆ ಮಂಗಳವಾರ ಪೂಜೆ ಸಲ್ಲಿಸಲು ಮತ್ತು ಮುಸ್ಲಿಂರಿಗೆ ಶುಕ್ರವಾರ ನಮಾಜ್ ಮಾಡಲು ವ್ಯವಸ್ಥೆ ಮಾಡಿ ಎಎಸ್ಐ 2003ರ ಏಪ್ರಿಲ್ 7ರಂದು ಆದೇಶಿಸಿದೆ. </p><p>ಭೋಜಶಾಲಾ ತಮ್ಮದು ಎಂದು ಹಿಂದೂಗಳು ಹಾಗೂ ಮುಸ್ಲಿಮರು ಹಕ್ಕು ಪ್ರತಿಪಾದಿಸುತ್ತಾ ಬಂದಿದ್ದಾರೆ. ಇದು ಯಾವ ಸಮುದಾಯಕ್ಕೆ ಸೇರಿದ್ದು ಎಂಬುದನ್ನು ತೀರ್ಮಾನಿಸಲು ಮಧ್ಯಪ್ರದೇಶ ಹೈಕೋರ್ಟ್ ನಿರ್ದೇಶನದ ಮೇರೆಗೆ ಅಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸಲಾಗಿದೆ. ಆದರೆ ಈ ವಿವಾದ ಕುರಿತು ಹೈಕೋರ್ಟ್ ನಿರ್ಧರಿಸುವವರೆಗೆ ಅಲ್ಲಿ ಯಾವುದೇ ಭೌತಿಕ ಉತ್ಖನನ ನಡೆಸಬಾರದು ಮತ್ತು ವೈಜ್ಞಾನಿಕ ಸಮೀಕ್ಷೆಯ ವರದಿ ಆಧರಿಸಿ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಪೀಠ, ತಾನು 2024ರ ಏಪ್ರಿಲ್ 1ರಂದು ನೀಡಿದ್ದ ತೀರ್ಪನ್ನು ಗುರುವಾರ ಪುನರುಚ್ಚರಿಸಿತು. </p><p>ಹೈಕೋರ್ಟ್ ಮುಂದೆ ಬಾಕಿ ಇರುವ ರಿಟ್ ಅರ್ಜಿಗಳನ್ನು ಎರಡು ವಾರಗಳೊಳಗೆ ಹಿರಿಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠ ಕೈಗೆತ್ತಿಕೊಳ್ಳಬೇಕು ಎಂದೂ ನಿರ್ದೇಶನ ನೀಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಮಧ್ಯಪ್ರದೇಶದ ಧಾರ್ ಜಿಲ್ಲೆಯ ಭೋಜಶಾಲಾ– ಕಮಲಾ ಮೌಲಾ ಮಸೀದಿಯಲ್ಲಿ ಬಸಂತ ಪಂಚಮಿ ದಿನವಾದ ಶುಕ್ರವಾರ (ಇದೇ 23) ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಪ್ರಾರ್ಥನೆ ಸಲ್ಲಿಸಲು ಹಿಂದೂಗಳಿಗೆ ಸುಪ್ರೀಂ ಕೋರ್ಟ್ ಗುರುವಾರ ಅನುಮತಿ ನೀಡಿದೆ.</p><p>ಇದೇ ವೇಳೆ ಅಂದು ಮಧ್ಯಾಹ್ನ 1ರಿಂದ 3 ಗಂಟೆಯವರೆಗೆ ಮುಸ್ಲಿಮರಿಗೆ ನಮಾಜ್ ಮಾಡಲೂ ನ್ಯಾಯಾಲಯ ಸಮ್ಮತಿಸಿದೆ. ಎರಡೂ ಧರ್ಮದವರು ಪರಸ್ಪರ ಗೌರವ, ಸೌಹಾರ್ದದಿಂದ ಇರಬೇಕು ಮತ್ತು ಸ್ಥಳೀಯ ಆಡಳಿತಕ್ಕೆ ಸಹಕರಿಸಬೇಕು ಎಂದೂ ಅದು ಸೂಚಿಸಿದೆ.</p><p>ಈ ಕುರಿತು ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿಪುಲ್ ಎಂ. ಪಂಚೋಲಿ ಅವರನ್ನು ಒಳಗೊಂಡ ಪೀಠವು, ಅಂದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದೆ.</p><p><strong>ನಮಾಜ್ ಮಾಡುವವರ ಪಟ್ಟಿ ಸಲ್ಲಿಸಲು ಸೂಚನೆ</strong></p><p>ಅಂದು, ಈ ಮಸೀದಿಯಲ್ಲಿ ನಮಾಜ್ ಮಾಡಲು ಬರುವ ಮುಸ್ಲಿಂ ಸಮುದಾಯದ ವ್ಯಕ್ತಿಗಳ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸುವಂತೆ ಪೀಠ ಸೂಚನೆ ನೀಡಿದೆ. </p><p>ಭೋಜಶಾಲಾ ಆವರಣದಲ್ಲಿ ಬಸಂತ ಪಂಚಮಿ ದಿನವಾದ ಶುಕ್ರವಾರ ಸರಸ್ವತಿ ಪೂಜೆ ಸೇರಿದಂತೆ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಅನುಮತಿ ನೀಡುವಂತೆ ಹಿಂದೂ ಗುಂಪು ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಶುಕ್ರವಾರ ನಮಾಜ್ಗೆ ತೊಂದರೆ ಆಗದಂತೆ ನೋಡಿಕೊಳ್ಳುವಂತೆ ಮುಸ್ಲಿಂ ಗುಂಪು ಸಹ ಮನವಿ ಮಾಡಿತ್ತು.</p><p>ಹಿಂದೂ ಅರ್ಜಿದಾರರ ಪರ ವಾದ ಮಾಡಿದ ಹಿರಿಯ ವಕೀಲ ವಿಷ್ಣುಶಂಕರ್ ಜೈನ್, ‘ಬಸಂತ ಪಂಚಮಿ ಶುಕ್ರವಾರವೇ ಬಂದಿರುವುದು ಕಾಕತಾಳೀಯ. ಅಂದು ಬೋಜಶಾಲಾದಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಲು ಹಿಂದೂಗಳಿಗೆ ಅವಕಾಶ ನೀಡಬೇಕು’ ಎಂದು ಕೋರಿದರು. </p><p>ಮಸೀದಿ ಸಮಿತಿ ಪರ ವಾದಿಸಿದ ಹಿರಿಯ ವಕೀಲ ಸಲ್ಮಾನ್ ಖುರ್ಷಿದ್, ‘ಶುಕ್ರವಾರ ಮಧ್ಯಾಹ್ನ 1ರಿಂದ 3 ಗಂಟೆಯವರೆಗೆ ನಮಾಜ್ ನಡೆಯಲಿದ್ದು, ಆ ಬಳಿಕ ಸ್ಥಳವನ್ನು ಖಾಲಿ ಮಾಡಲಾಗುವುದು’ ಎಂದು ಹೇಳಿದರು. ಇದಕ್ಕೂ ಮುನ್ನ ಸಂಜೆ ಐದು ಗಂಟೆ ಬಳಿಕ ನಮಾಜ್ ಮಾಡಲು ಸಾಧ್ಯವೇ ಎಂದು ಖುರ್ಷಿದ್ ಅವರನ್ನು ಕೇಳಲಾಯಿತು. ‘ನಮಾಜ್ ವೇಳಾಪಟ್ಟಿಯನ್ನು ಬದಲಿಸಲಾಗದು’ ಎಂದು ಅವರು ಪೀಠದ ಗಮನಕ್ಕೆ ತಂದರು.</p><p>ಉಳಿದಂತೆ ಪ್ರಸ್ತಾವವನ್ನು ಒಪ್ಪಿಕೊಂಡ ಖುರ್ಷಿದ್ ಅವರು, ನಮಾಜ್ ಮಾಡಲು ಎಷ್ಟು ಜನ ಬರಬಹುದು ಎಂಬುದರ ಪಟ್ಟಿಯನ್ನು ಶುಕ್ರವಾರ ಬೆಳಿಗ್ಗೆ ಜಿಲ್ಲಾಧಿಕಾರಿ ಜತೆ ಹಂಚಿಕೊಳ್ಳಲಾಗುವುದು ಎಂದರು.</p>.ಭೋಜಶಾಲಾ ಸಮೀಕ್ಷೆ: ಪರಿಶೀಲಿಸಲು ಸುಪ್ರೀಂ ಕೋರ್ಟ್ ಒಪ್ಪಿಗೆ.ಮಧ್ಯಪ್ರದೇಶ ಲೋಕಸಭಾ ಚುನಾವಣೆ | ಭೋಜಶಾಲಾ ವಿವಾದ: ಮತದಾರರ ಭಿನ್ನ ಅಭಿಪ್ರಾಯ.<p><strong>11ನೇ ಶತಮಾನದ ಸ್ಮಾರಕ</strong></p><p>ಭೋಜಶಾಲಾ 11ನೇ ಶತಮಾನದ ಐತಿಹಾಸಿಕ ಸ್ಮಾರಕವಾಗಿದ್ದು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಅದನ್ನು ಸಂರಕ್ಷಿತ ತಾಣ ಎಂದು ಗುರುತಿಸಿದೆ. ಈ ಸ್ಮಾರಕವು ವಾಗ್ದೇವಿಗೆ (ಸರಸ್ವತಿ ದೇವಿ) ಸಮರ್ಪಿತವಾದದ್ದು ಎಂದು ಹಿಂದೂಗಳು ನಂಬಿದ್ದರೆ, ಮುಸ್ಲಿಮರು ಅದನ್ನು ಕಮಲ್ ಮೌಲಾ ಮಸೀದಿ ಎಂದು ಪರಿಗಣಿಸಿದ್ದಾರೆ.</p><p>ಭೋಜಶಾಲಾ ಆವರಣದಲ್ಲಿ ಹಿಂದೂಗಳಿಗೆ ಮಂಗಳವಾರ ಪೂಜೆ ಸಲ್ಲಿಸಲು ಮತ್ತು ಮುಸ್ಲಿಂರಿಗೆ ಶುಕ್ರವಾರ ನಮಾಜ್ ಮಾಡಲು ವ್ಯವಸ್ಥೆ ಮಾಡಿ ಎಎಸ್ಐ 2003ರ ಏಪ್ರಿಲ್ 7ರಂದು ಆದೇಶಿಸಿದೆ. </p><p>ಭೋಜಶಾಲಾ ತಮ್ಮದು ಎಂದು ಹಿಂದೂಗಳು ಹಾಗೂ ಮುಸ್ಲಿಮರು ಹಕ್ಕು ಪ್ರತಿಪಾದಿಸುತ್ತಾ ಬಂದಿದ್ದಾರೆ. ಇದು ಯಾವ ಸಮುದಾಯಕ್ಕೆ ಸೇರಿದ್ದು ಎಂಬುದನ್ನು ತೀರ್ಮಾನಿಸಲು ಮಧ್ಯಪ್ರದೇಶ ಹೈಕೋರ್ಟ್ ನಿರ್ದೇಶನದ ಮೇರೆಗೆ ಅಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸಲಾಗಿದೆ. ಆದರೆ ಈ ವಿವಾದ ಕುರಿತು ಹೈಕೋರ್ಟ್ ನಿರ್ಧರಿಸುವವರೆಗೆ ಅಲ್ಲಿ ಯಾವುದೇ ಭೌತಿಕ ಉತ್ಖನನ ನಡೆಸಬಾರದು ಮತ್ತು ವೈಜ್ಞಾನಿಕ ಸಮೀಕ್ಷೆಯ ವರದಿ ಆಧರಿಸಿ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಪೀಠ, ತಾನು 2024ರ ಏಪ್ರಿಲ್ 1ರಂದು ನೀಡಿದ್ದ ತೀರ್ಪನ್ನು ಗುರುವಾರ ಪುನರುಚ್ಚರಿಸಿತು. </p><p>ಹೈಕೋರ್ಟ್ ಮುಂದೆ ಬಾಕಿ ಇರುವ ರಿಟ್ ಅರ್ಜಿಗಳನ್ನು ಎರಡು ವಾರಗಳೊಳಗೆ ಹಿರಿಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠ ಕೈಗೆತ್ತಿಕೊಳ್ಳಬೇಕು ಎಂದೂ ನಿರ್ದೇಶನ ನೀಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>