‘ನಾಯಕತ್ವ ಬದಲಾವಣೆ ಇಲ್ಲವೆಂದು ಹೈಕಮಾಂಡ್ ಕೂಡ ಹೇಳಿದೆ. ಯಾರ ಬೇಡಿಕೆಗೂ ಮನ್ನಣೆ ಕೊಟ್ಟಿಲ್ಲ. ಸದ್ಯಕ್ಕಂತೂ ಮುಖ್ಯ ಮಂತ್ರಿ ಬದಲಾವಣೆಯ ಗೊಂದಲ ಇಲ್ಲ’ ಎಂದೂ ಯತೀಂದ್ರ ಪ್ರತಿಪಾದಿಸಿದರು. ‘ಸಿದ್ದರಾಮಯ್ಯ ಮತ್ತು ರಾಜ್ಯ ಸರ್ಕಾರದ ಮೇಲೆ ಗುರುತರ ಆರೋಪ ಮಾಡಲು ಬಿಜೆಪಿ ನಾಯಕರಿಗೆ ಏನೂ ಇಲ್ಲ. ಹೀಗಾಗಿಯೇ ಕೆ.ಜೆ.ಜಾರ್ಜ್ ನನ್ನ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎಂದು ಪ್ರಚಾರ ಮಾಡಿದರು. ಅಧಿವೇಶನ ದಲ್ಲೂ ವಿನಾ ಕಾರಣ ನನ್ನ ಹೆಸರು ಪ್ರಸ್ತಾಪಿಸಿದರು’ ಎಂದು ಹೇಳಿದರು.
ಶಿವಕುಮಾರ್ ಮುಖ್ಯಮಂತ್ರಿಯಾಗುವ ಬಗ್ಗೆ ಹಿಂದೆ ಹೇಳಿದ್ದೆ. ಆದರೆ, ಆಗಲಿಲ್ಲ. ಈ ಬಾರಿ ಖಂಡಿತಾ ಸ್ಥಾನ ಸಿಗುತ್ತದೆ. ಈ ಬಗ್ಗೆ ಎಲ್ಲ ಶಾಸಕರೂ ಚರ್ಚಿಸುತ್ತೇವೆ.