ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆಯಾದ ಜಾಗವಿದು. ಅವರ ಆತ್ಮ ಇಲ್ಲಿದೆ ಎಂಬ ನಂಬಿಕೆ. ಸಮಾಧಿ ಜಾಗವನ್ನು ಸರ್ಕಾರದ ನಿಗದಿತ ಬೆಲೆಗೆ ಖರೀದಿಸಲು ನಾನು ಕೇಳಿದ್ದೆ. ಆದರೆ ಪ್ರಕರಣ ನ್ಯಾಯಾಲಯದಲ್ಲಿದೆ ಎಂದರು. ಈಗಲೂ ಬಾಲಣ್ಣ ಅವರ ಕುಟುಂಬದ ಬಳಿ ಸಮಾಧಿ ಜಾಗವನ್ನಾಷ್ಟದರೂ ನೀಡಿ ಎಂದು ಕೇಳಿಕೊಳ್ಳುವೆ. ಕೆ.ಮಂಜು ಸಿನಿಮಾ ನಿರ್ಮಾಪಕ ಪರಿಶೀಲಿಸಿ ಮುಂದಿನ ಹೆಜ್ಜೆ ಪ್ರಕರಣ ನ್ಯಾಯಾಲಯದಲ್ಲಿ ಇತ್ತು. ಹೀಗಾಗಿ ಈ ಬಗ್ಗೆ ಈಗಲೇ ಪ್ರತಿಕ್ರಿಯಿಸುವುದಿಲ್ಲ. ವಿಷಯ ಪರಿಶೀಲಿಸಿ ಮುಂದಿನ ಹೆಜ್ಜೆ ಇಡುತ್ತೇವೆ. ಕುಟುಂಬದವರ ಆಶಯದಂತೆ ಸರ್ಕಾರವು ಮೈಸೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಸಹಕಾರ ನೀಡಿದೆ.