<p>‘ನೀತಿನಿಯಮಗಳನ್ನು ಪರಿಷ್ಕರಣೆ ಮಾಡಿದ್ದೇವೆ. ನಮ್ಮ ಪಕ್ಷದ ಶಿಸ್ತು ಸಮಿತಿಯ ಸೂಚನೆಯಂತೆ ಸುದ್ದಿಗೋಷ್ಠಿಗಳು ನಡೆಯಲಿವೆ...’ ಎಂದು ರಾಜಕೀಯ ಪಕ್ಷದ ನಾಯಕರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p><p>‘ಪತ್ರಕರ್ತೆಯರನ್ನು ಯಾವ ಸಂದರ್ಭದಲ್ಲಿ ಹೊರಗಿಟ್ಟು ಪ್ರೆಸ್ಮೀಟ್ ಮಾಡ್ತೀರಿ ಸಾರ್?’ ವರದಿಗಾರ್ತಿಯ ಪ್ರಶ್ನೆ.</p><p>‘ಯಾವಾಗ, ಯಾವ್ಯಾವ ವರದಿಗಾರರನ್ನು ಹೊರಗಿಡಬೇಕು ಎಂಬುದನ್ನು ನಮ್ಮ ಶಿಸ್ತು ಸಮಿತಿ ನಿರ್ಧರಿಸುತ್ತದೆ. ನಮ್ಮ ನಿಲುವಿಗೆ ಬದ್ಧವಾಗಿರುವ, ಅರ್ಹ, ಆಯ್ದ ಪತ್ರಕರ್ತರನ್ನು ಮಾತ್ರವೇ ಗೋಷ್ಠಿಗೆ ಆಹ್ವಾನಿಸಿ, ಉಳಿದವರನ್ನು ದೂರವಿಡುವ ಬಗ್ಗೆಯೂ ಚಿಂತನೆ ನಡೆದಿದೆ’.</p><p>‘ಇದು ಪತ್ರಕರ್ತರಿಗೆ ನೀಡುವ ಎಚ್ಚರಿಕೆಯೆ ಸಾರ್?’ ಪತ್ರಕರ್ತರೊಬ್ಬರ ಪ್ರಶ್ನೆ.</p><p>‘ಅಲ್ಲ, ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು ಎಂಬ ಮುನ್ನೆಚ್ಚರಿಕೆ’ ನಾಯಕರು ನಕ್ಕರು.</p><p>‘ಪತ್ರಿಕಾಗೋಷ್ಠಿಗೆ ನೀವೇ ಕೊಶ್ಚನ್ ಪೇಪರ್ ಕೊಡ್ತೀರಾ?’ ಇನ್ನೊಬ್ಬ ಪತ್ರಕರ್ತನ ಪ್ರಶ್ನೆ.</p><p>‘ಹೌದು. ನಾವು ಕೊಡುವ ಕೊಶ್ಚನ್ ಪೇಪರ್ನಲ್ಲಿರುವ ಪ್ರಶ್ನೆಗಳನ್ನು ಹಾಗೂ ಅದಕ್ಕೆ ಪೂರಕವಾದ ಉಪಪ್ರಶ್ನೆಗಳನ್ನು ಮಾತ್ರ ನೀವು ಕೇಳಬೇಕು. ಅದರ ಹೊರತಾಗಿ ಉದ್ಧಟತನದ ಪ್ರಶ್ನೆ ಕೇಳಿದರೆ ಶಿಸ್ತಿನ ಕ್ರಮ ತೆಗೆದುಕೊಳ್ಳುತ್ತೇವೆ’.</p><p>‘ಪತ್ರಿಕಾಗೋಷ್ಠಿಯ ನಿಯಮಗಳ ಪರಿಷ್ಕರಣೆಗೆ ಕಾರಣವೇನು ಸಾರ್?’</p><p>‘ಖಡ್ಗಕ್ಕಿಂಥಾ ಲೇಖನಿ ಹರಿತ, ಲೇಖನಿಗಿಂಥಾ ನೀವು ಕೇಳುವ ಪ್ರಶ್ನೆಗಳು ಹರಿತ ಎಂಬುದು ನಮ್ಮ ಅನುಭವಕ್ಕೆ ಬಂದಿದೆ’.</p><p>‘ನಮ್ಮ ಪ್ರಶ್ನೆಗಳು ನಿಮಗೆ ಮಾರಕವಾಗುತ್ತವೆಯೆ ಸಾರ್?!’</p><p>‘ಹೌದು. ಮೊನ್ನೆಯ ಪತ್ರಿಕಾಗೋಷ್ಠಿಯಲ್ಲಿ ನೀವು ಕೇಳಿದ ಅಪಾಯಕಾರಿ ಪ್ರಶ್ನೆಗಳಿಂದ ನಮ್ಮ ನಾಯಕರು ಆಘಾತಗೊಂಡು ಆಸ್ಪತ್ರೆ ಸೇರಿದ್ದಾರೆ. ಆ ಗೋಷ್ಠಿಯ ನಿಮ್ಮ ವರದಿಯೂ ಪಕ್ಷದ ಘನತೆಗೆ ಧಕ್ಕೆ ತಂದಿದೆ... ಸುದ್ದಿಗೋಷ್ಠಿಗಳನ್ನು ‘ಶುದ್ಧಿಗೋಷ್ಠಿ’ ಮಾಡಬೇಕಾಗಿದೆ. ಉದ್ಧಟತನದ ಪ್ರಶ್ನೆ ಕೇಳುವ ಪತ್ರಕರ್ತರನ್ನು ನಮ್ಮ ಭದ್ರತಾ ಸಿಬ್ಬಂದಿಯವರು ಎತ್ತಿ ಹೊರಗೆ ಹಾಕುತ್ತಾರೆ...’ ಎಂದ ನಾಯಕರು ಪತ್ರಿಕಾಗೋಷ್ಠಿ ಮುಗಿಸಿ ಎದ್ದರು. </p>.ಚುರುಮುರಿ Podcast: ಶುದ್ಧಿಗೋಷ್ಠಿ!.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ನೀತಿನಿಯಮಗಳನ್ನು ಪರಿಷ್ಕರಣೆ ಮಾಡಿದ್ದೇವೆ. ನಮ್ಮ ಪಕ್ಷದ ಶಿಸ್ತು ಸಮಿತಿಯ ಸೂಚನೆಯಂತೆ ಸುದ್ದಿಗೋಷ್ಠಿಗಳು ನಡೆಯಲಿವೆ...’ ಎಂದು ರಾಜಕೀಯ ಪಕ್ಷದ ನಾಯಕರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p><p>‘ಪತ್ರಕರ್ತೆಯರನ್ನು ಯಾವ ಸಂದರ್ಭದಲ್ಲಿ ಹೊರಗಿಟ್ಟು ಪ್ರೆಸ್ಮೀಟ್ ಮಾಡ್ತೀರಿ ಸಾರ್?’ ವರದಿಗಾರ್ತಿಯ ಪ್ರಶ್ನೆ.</p><p>‘ಯಾವಾಗ, ಯಾವ್ಯಾವ ವರದಿಗಾರರನ್ನು ಹೊರಗಿಡಬೇಕು ಎಂಬುದನ್ನು ನಮ್ಮ ಶಿಸ್ತು ಸಮಿತಿ ನಿರ್ಧರಿಸುತ್ತದೆ. ನಮ್ಮ ನಿಲುವಿಗೆ ಬದ್ಧವಾಗಿರುವ, ಅರ್ಹ, ಆಯ್ದ ಪತ್ರಕರ್ತರನ್ನು ಮಾತ್ರವೇ ಗೋಷ್ಠಿಗೆ ಆಹ್ವಾನಿಸಿ, ಉಳಿದವರನ್ನು ದೂರವಿಡುವ ಬಗ್ಗೆಯೂ ಚಿಂತನೆ ನಡೆದಿದೆ’.</p><p>‘ಇದು ಪತ್ರಕರ್ತರಿಗೆ ನೀಡುವ ಎಚ್ಚರಿಕೆಯೆ ಸಾರ್?’ ಪತ್ರಕರ್ತರೊಬ್ಬರ ಪ್ರಶ್ನೆ.</p><p>‘ಅಲ್ಲ, ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು ಎಂಬ ಮುನ್ನೆಚ್ಚರಿಕೆ’ ನಾಯಕರು ನಕ್ಕರು.</p><p>‘ಪತ್ರಿಕಾಗೋಷ್ಠಿಗೆ ನೀವೇ ಕೊಶ್ಚನ್ ಪೇಪರ್ ಕೊಡ್ತೀರಾ?’ ಇನ್ನೊಬ್ಬ ಪತ್ರಕರ್ತನ ಪ್ರಶ್ನೆ.</p><p>‘ಹೌದು. ನಾವು ಕೊಡುವ ಕೊಶ್ಚನ್ ಪೇಪರ್ನಲ್ಲಿರುವ ಪ್ರಶ್ನೆಗಳನ್ನು ಹಾಗೂ ಅದಕ್ಕೆ ಪೂರಕವಾದ ಉಪಪ್ರಶ್ನೆಗಳನ್ನು ಮಾತ್ರ ನೀವು ಕೇಳಬೇಕು. ಅದರ ಹೊರತಾಗಿ ಉದ್ಧಟತನದ ಪ್ರಶ್ನೆ ಕೇಳಿದರೆ ಶಿಸ್ತಿನ ಕ್ರಮ ತೆಗೆದುಕೊಳ್ಳುತ್ತೇವೆ’.</p><p>‘ಪತ್ರಿಕಾಗೋಷ್ಠಿಯ ನಿಯಮಗಳ ಪರಿಷ್ಕರಣೆಗೆ ಕಾರಣವೇನು ಸಾರ್?’</p><p>‘ಖಡ್ಗಕ್ಕಿಂಥಾ ಲೇಖನಿ ಹರಿತ, ಲೇಖನಿಗಿಂಥಾ ನೀವು ಕೇಳುವ ಪ್ರಶ್ನೆಗಳು ಹರಿತ ಎಂಬುದು ನಮ್ಮ ಅನುಭವಕ್ಕೆ ಬಂದಿದೆ’.</p><p>‘ನಮ್ಮ ಪ್ರಶ್ನೆಗಳು ನಿಮಗೆ ಮಾರಕವಾಗುತ್ತವೆಯೆ ಸಾರ್?!’</p><p>‘ಹೌದು. ಮೊನ್ನೆಯ ಪತ್ರಿಕಾಗೋಷ್ಠಿಯಲ್ಲಿ ನೀವು ಕೇಳಿದ ಅಪಾಯಕಾರಿ ಪ್ರಶ್ನೆಗಳಿಂದ ನಮ್ಮ ನಾಯಕರು ಆಘಾತಗೊಂಡು ಆಸ್ಪತ್ರೆ ಸೇರಿದ್ದಾರೆ. ಆ ಗೋಷ್ಠಿಯ ನಿಮ್ಮ ವರದಿಯೂ ಪಕ್ಷದ ಘನತೆಗೆ ಧಕ್ಕೆ ತಂದಿದೆ... ಸುದ್ದಿಗೋಷ್ಠಿಗಳನ್ನು ‘ಶುದ್ಧಿಗೋಷ್ಠಿ’ ಮಾಡಬೇಕಾಗಿದೆ. ಉದ್ಧಟತನದ ಪ್ರಶ್ನೆ ಕೇಳುವ ಪತ್ರಕರ್ತರನ್ನು ನಮ್ಮ ಭದ್ರತಾ ಸಿಬ್ಬಂದಿಯವರು ಎತ್ತಿ ಹೊರಗೆ ಹಾಕುತ್ತಾರೆ...’ ಎಂದ ನಾಯಕರು ಪತ್ರಿಕಾಗೋಷ್ಠಿ ಮುಗಿಸಿ ಎದ್ದರು. </p>.ಚುರುಮುರಿ Podcast: ಶುದ್ಧಿಗೋಷ್ಠಿ!.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>