<p><strong>ಕೋಲ್ಕತ್ತ:</strong> ಮುಟ್ಟಿದ್ದಕ್ಕೆ, ಆಲಿಂಗಿಸಿದ್ದಕ್ಕೆ ಲಯೊನೆಲ್ ಮೆಸ್ಸಿ ಅಸಮಾಧಾನಿತರಾಗಿದ್ದರು ಎಂದು ಡಿಸೆಂಬರ್ 13ರಂದು ಕೋಲ್ಕತ್ತದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಫುಟ್ಬಾಲ್ ದಿಗ್ಗಜನ ಕಾರ್ಯಕ್ರಮ ಆಯೋಜಿಸಿದ್ದ ಸತಾದ್ರು ದತ್ತಾ ಎಸ್ಐಟಿ ವಿಚಾರಣೆ ವೇಳೆ ಹೇಳಿದ್ದಾರೆ.</p>.ಮೆಸ್ಸಿ ಕಾರ್ಯಕ್ರಮದಲ್ಲೂ ದೇವರ ಜಪವೇ..?: ಫಡಣವೀಸ್ ಕಾಲೆಳೆದ ನಟ ಕಿಶೋರ್.<p>ಕೋಲ್ಕತ್ತದ ಕಾರ್ಯಕ್ರಮದಲ್ಲಿ ನಿಗದಿತ ಅವಧಿಗಿಂತ ಮುಂಚೆಯೇ ಮೆಸ್ಸಿ ಸ್ಥಳ ತೊರೆದಿದ್ದರು. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ಮೈದಾನದಲ್ಲಿ ದಾಂದಲೆ ನಡೆದಿತ್ತು. ಈ ಸಂಬಂಧ ದತ್ತಾ ಅವರನ್ನು ಎಸ್ಐಟಿ ಬಂಧಿಸಿದೆ.</p><p>‘ಹಿಂದಿನಿಂದ ಮುಟ್ಟುವುದು ಅಥವಾ ಆಲಿಂಗಿಸುವುದು ಮೆಸ್ಸಿಗೆ ಇಷ್ಟ ಇರಲಿಲ್ಲ. ಇದನ್ನು ಅವರ ಭದ್ರತೆಯ ಹೊಣೆ ಹೊತ್ತಿದ್ದ ಅಧಿಕಾರಿಗಳಿಗೂ ತಿಳಿಸಲಾಗಿತ್ತು’ ಎಂದು ದತ್ತಾ ಎಸ್ಐಟಿ ಅಧಿಕಾರಿಗಳ ದೀರ್ಘ ವಿಚಾರಣೆ ವೇಳೆ ಹೇಳಿದ್ದಾರೆ.</p><p>‘ಜನರನ್ನು ನಿಯಂತ್ರಿಸಲು ಪದೇ ಪದೇ ಸಾರ್ವಜನಿಕ ಘೋಷಣೆಗಳನ್ನು ಮಾಡಿದರೂ, ಯಾವುದೇ ಪರಿಣಾಮ ಬೀರಲಿಲ್ಲ. ತನ್ನನ್ನು ಸುತ್ತುವರೆದು ಅಪ್ಪಿಕೊಂಡ ರೀತಿ ವಿಶ್ವಕಪ್ ವಿಜೇತ ಫುಟ್ಬಾಲ್ ಆಟಗಾರನಿಗೆ ಇಷ್ಟವಾಗಲಿಲ್ಲ’ ಎಂದು ದತ್ತಾ ಶುಕ್ರವಾರ ತನಿಖಾಧಿಕಾರಿಗಳಿಗೆ ತಿಳಿಸಿದರು ಎಂದು ಮೂಲಗಳು ತಿಳಿಸಿವೆ.</p>.ಮೆಸ್ಸಿ ಕಾರ್ಯಕ್ರಮದ ವೈಫಲ್ಯ; ಬಂಗಾಳದ ಮೇಲೆ 50 ವರ್ಷದವರೆಗೂ ಪರಿಣಾಮ: AIFF.<p>ಪಶ್ಚಿಮ ಬಂಗಾಳದ ಕ್ರೀಡಾ ಸಚಿವ ಅರೂಪ್ ಬಿಸ್ವಾಸ್ ಅವರು ಕಾರ್ಯಕ್ರಮದ ಉದ್ದಕ್ಕೂ ಮೆಸ್ಸಿಯ ಸನಿಹದಲ್ಲಿಯೇ ಇದ್ದರು. ಫೋಟೊ ತೆಗೆಸಿಕೊಳ್ಳುವಾಗ ಮೆಸ್ಸಿ ಸೊಂಟ ಹಿಡಿದ ದೃಶ್ಯಗಳೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.</p><p>ಬಿಸ್ವಾಸ್ ತಮ್ಮ ಪ್ರಭಾವ ಬಳಸಿ ಸಂಬಂಧಿಕರು ಮತ್ತು ವೈಯಕ್ತಿಕ ಪರಿಚಯಸ್ಥರು ಮೆಸ್ಸಿಯನ್ನು ಭೇಟಿ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಟೀಕೆಗಳು ಹೆಚ್ಚಾದ ಬೆನ್ನಲ್ಲೇ, ತನಿಖೆ ಪೂರ್ಣಗೊಳ್ಳುವವರೆಗೆ ಅವರು ತಮ್ಮ ಕ್ರೀಡಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.</p>.ಭಾರತೀಯರ ಬಗ್ಗೆ ಮೆಸ್ಸಿ ಮನದಾಳದ ಮಾತು.<p>ಮೈದಾನದೊಳಗೆ ಭಾರಿ ಸಂಖ್ಯೆಯಲ್ಲಿ ಜನ ಬಂದಿದ್ದೇಗೆ ಎನ್ನುವುದರ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.</p><p>‘150 ಗ್ರೌಂಡ್ ಪಾಸ್ ಗಳನ್ನು ನೀಡಲಾಗಿತ್ತು. ಆದರೆ ಸ್ಥಳಕ್ಕೆ ಭಾರಿ ಪ್ರಭಾವಿ ವ್ಯಕ್ತಿಯೊಬ್ಬ ಬಂದಾಗ ಮೂರು ಪಟ್ಟು ಜನ ಸೇರಿದರು’ ಎಂದು ದತ್ತಾ ಹೇಳಿದ್ದಾರೆ. ಮೈದಾನದೊಳಗೆ ನೇರ ಪ್ರವೇಶ ಕಲ್ಪಿಸಿದ್ದರಿಂದಲೇ ದಾಂದಲೆ ನಡೆಯಿತೇ ಎನ್ನುವುದರ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.</p><p>‘ಆ ಪ್ರಭಾವಿ ವ್ಯಕ್ತಿ ಮೈದಾನಕ್ಕೆ ಬಂದ ಕೂಡಲೇ ಮೆಸ್ಸಿ ಕಾರ್ಯಕ್ರಮದ ವೇಳಾಪಟ್ಟಿ ಏರುಪೇರಾಯಿತು. ನಿಯಂತ್ರಿಸಲು ಸಾಧ್ಯವಾಗಲಿಲ್ಲ’ ಎಂದು ದತ್ತಾ ಹೇಳಿದ್ದಾರೆ.</p> .ಅನಂತ್ ಅಂಬಾನಿ ಒಡೆತನದ ವನತಾರಗೆ ಭೇಟಿ ನೀಡಿದ ಫುಟ್ಬಾಲ್ ದಿಗ್ಗಜ ಮೆಸ್ಸಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ:</strong> ಮುಟ್ಟಿದ್ದಕ್ಕೆ, ಆಲಿಂಗಿಸಿದ್ದಕ್ಕೆ ಲಯೊನೆಲ್ ಮೆಸ್ಸಿ ಅಸಮಾಧಾನಿತರಾಗಿದ್ದರು ಎಂದು ಡಿಸೆಂಬರ್ 13ರಂದು ಕೋಲ್ಕತ್ತದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಫುಟ್ಬಾಲ್ ದಿಗ್ಗಜನ ಕಾರ್ಯಕ್ರಮ ಆಯೋಜಿಸಿದ್ದ ಸತಾದ್ರು ದತ್ತಾ ಎಸ್ಐಟಿ ವಿಚಾರಣೆ ವೇಳೆ ಹೇಳಿದ್ದಾರೆ.</p>.ಮೆಸ್ಸಿ ಕಾರ್ಯಕ್ರಮದಲ್ಲೂ ದೇವರ ಜಪವೇ..?: ಫಡಣವೀಸ್ ಕಾಲೆಳೆದ ನಟ ಕಿಶೋರ್.<p>ಕೋಲ್ಕತ್ತದ ಕಾರ್ಯಕ್ರಮದಲ್ಲಿ ನಿಗದಿತ ಅವಧಿಗಿಂತ ಮುಂಚೆಯೇ ಮೆಸ್ಸಿ ಸ್ಥಳ ತೊರೆದಿದ್ದರು. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ಮೈದಾನದಲ್ಲಿ ದಾಂದಲೆ ನಡೆದಿತ್ತು. ಈ ಸಂಬಂಧ ದತ್ತಾ ಅವರನ್ನು ಎಸ್ಐಟಿ ಬಂಧಿಸಿದೆ.</p><p>‘ಹಿಂದಿನಿಂದ ಮುಟ್ಟುವುದು ಅಥವಾ ಆಲಿಂಗಿಸುವುದು ಮೆಸ್ಸಿಗೆ ಇಷ್ಟ ಇರಲಿಲ್ಲ. ಇದನ್ನು ಅವರ ಭದ್ರತೆಯ ಹೊಣೆ ಹೊತ್ತಿದ್ದ ಅಧಿಕಾರಿಗಳಿಗೂ ತಿಳಿಸಲಾಗಿತ್ತು’ ಎಂದು ದತ್ತಾ ಎಸ್ಐಟಿ ಅಧಿಕಾರಿಗಳ ದೀರ್ಘ ವಿಚಾರಣೆ ವೇಳೆ ಹೇಳಿದ್ದಾರೆ.</p><p>‘ಜನರನ್ನು ನಿಯಂತ್ರಿಸಲು ಪದೇ ಪದೇ ಸಾರ್ವಜನಿಕ ಘೋಷಣೆಗಳನ್ನು ಮಾಡಿದರೂ, ಯಾವುದೇ ಪರಿಣಾಮ ಬೀರಲಿಲ್ಲ. ತನ್ನನ್ನು ಸುತ್ತುವರೆದು ಅಪ್ಪಿಕೊಂಡ ರೀತಿ ವಿಶ್ವಕಪ್ ವಿಜೇತ ಫುಟ್ಬಾಲ್ ಆಟಗಾರನಿಗೆ ಇಷ್ಟವಾಗಲಿಲ್ಲ’ ಎಂದು ದತ್ತಾ ಶುಕ್ರವಾರ ತನಿಖಾಧಿಕಾರಿಗಳಿಗೆ ತಿಳಿಸಿದರು ಎಂದು ಮೂಲಗಳು ತಿಳಿಸಿವೆ.</p>.ಮೆಸ್ಸಿ ಕಾರ್ಯಕ್ರಮದ ವೈಫಲ್ಯ; ಬಂಗಾಳದ ಮೇಲೆ 50 ವರ್ಷದವರೆಗೂ ಪರಿಣಾಮ: AIFF.<p>ಪಶ್ಚಿಮ ಬಂಗಾಳದ ಕ್ರೀಡಾ ಸಚಿವ ಅರೂಪ್ ಬಿಸ್ವಾಸ್ ಅವರು ಕಾರ್ಯಕ್ರಮದ ಉದ್ದಕ್ಕೂ ಮೆಸ್ಸಿಯ ಸನಿಹದಲ್ಲಿಯೇ ಇದ್ದರು. ಫೋಟೊ ತೆಗೆಸಿಕೊಳ್ಳುವಾಗ ಮೆಸ್ಸಿ ಸೊಂಟ ಹಿಡಿದ ದೃಶ್ಯಗಳೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.</p><p>ಬಿಸ್ವಾಸ್ ತಮ್ಮ ಪ್ರಭಾವ ಬಳಸಿ ಸಂಬಂಧಿಕರು ಮತ್ತು ವೈಯಕ್ತಿಕ ಪರಿಚಯಸ್ಥರು ಮೆಸ್ಸಿಯನ್ನು ಭೇಟಿ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಟೀಕೆಗಳು ಹೆಚ್ಚಾದ ಬೆನ್ನಲ್ಲೇ, ತನಿಖೆ ಪೂರ್ಣಗೊಳ್ಳುವವರೆಗೆ ಅವರು ತಮ್ಮ ಕ್ರೀಡಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.</p>.ಭಾರತೀಯರ ಬಗ್ಗೆ ಮೆಸ್ಸಿ ಮನದಾಳದ ಮಾತು.<p>ಮೈದಾನದೊಳಗೆ ಭಾರಿ ಸಂಖ್ಯೆಯಲ್ಲಿ ಜನ ಬಂದಿದ್ದೇಗೆ ಎನ್ನುವುದರ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.</p><p>‘150 ಗ್ರೌಂಡ್ ಪಾಸ್ ಗಳನ್ನು ನೀಡಲಾಗಿತ್ತು. ಆದರೆ ಸ್ಥಳಕ್ಕೆ ಭಾರಿ ಪ್ರಭಾವಿ ವ್ಯಕ್ತಿಯೊಬ್ಬ ಬಂದಾಗ ಮೂರು ಪಟ್ಟು ಜನ ಸೇರಿದರು’ ಎಂದು ದತ್ತಾ ಹೇಳಿದ್ದಾರೆ. ಮೈದಾನದೊಳಗೆ ನೇರ ಪ್ರವೇಶ ಕಲ್ಪಿಸಿದ್ದರಿಂದಲೇ ದಾಂದಲೆ ನಡೆಯಿತೇ ಎನ್ನುವುದರ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.</p><p>‘ಆ ಪ್ರಭಾವಿ ವ್ಯಕ್ತಿ ಮೈದಾನಕ್ಕೆ ಬಂದ ಕೂಡಲೇ ಮೆಸ್ಸಿ ಕಾರ್ಯಕ್ರಮದ ವೇಳಾಪಟ್ಟಿ ಏರುಪೇರಾಯಿತು. ನಿಯಂತ್ರಿಸಲು ಸಾಧ್ಯವಾಗಲಿಲ್ಲ’ ಎಂದು ದತ್ತಾ ಹೇಳಿದ್ದಾರೆ.</p> .ಅನಂತ್ ಅಂಬಾನಿ ಒಡೆತನದ ವನತಾರಗೆ ಭೇಟಿ ನೀಡಿದ ಫುಟ್ಬಾಲ್ ದಿಗ್ಗಜ ಮೆಸ್ಸಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>