‘ಮಳೆ ಬಂದು ಜಲಾಶಯಗಳು ಭರ್ತಿಯಾಗುವ ಬಗ್ಗೆ ಈಗಲೂ ನಮಗೆ ಆಶಾಭಾವ ಇದೆ. ಒಂದು ವೇಳೆ ಮಳೆ ಬಾರದಿದ್ದರೂ ಜಲ ವಿದ್ಯುತ್ ಉದ್ಪಾದನೆಗೆ ಮಾತ್ರ ತೊಂದರೆಯಾಗಲಿದೆ. ಪವನ ವಿದ್ಯುತ್ ಘಟಕ, ಥರ್ಮಲ್ ವಿದ್ಯುತ್ ಸ್ಥಾವರ, ಸೌರ ವಿದ್ಯುತ್ ಘಟಕಗಳಿಂದ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತದೆ. ಆದ್ದರಿಂದ ಭಯಪಡುವ ಅಗತ್ಯವಿಲ್ಲ’ ಎಂದು ಶನಿವಾರ ಸುದ್ದಿಗಾರರಿಗೆ ಹೇಳಿದರು.