ಸಭೆಗೆ ಹೆಚ್ಚಿನವರು ಭಾಗಿಯಾಗದ ಬಗ್ಗೆ ಬೇಸರ ವ್ಯಕ್ತಪಡಿಸಿರುವ ತರೂರ್, 'ನನ್ನ ಸಭೆಗೆ ಹಾಜರಾಗಲು ಅವರು (ಪ್ರತಿನಿಧಿಗಳು) ಹೆದರಿದ್ದರೆ, ಅದು ಅವರಿಗೇ ನಷ್ಟ. ನಾವು ರಚನಾತ್ಮಕ ಮಾತುಕತೆ ನಡೆಸಬಹುದಿತ್ತು. ಯಾವುದೇ ಅಧಿಕೃತ ಅಭ್ಯರ್ಥಿ ಇಲ್ಲ ಎಂದು ಗಾಂಧಿ ಕುಟುಂಬದವರು ಸ್ಪಷ್ಟವಾಗಿ ಹೇಳಿದ್ದಾರೆ. ಖರ್ಗೆ ಅಧಿಕೃತ ಅಭ್ಯರ್ಥಿ ಎಂಬ ಮಿಥ್ಯೆಯನ್ನು ನಾವು ಹೋಗಲಾಡಿಸುತ್ತೇವೆ' ಎಂದು ಹೇಳಿದ್ದಾರೆ.