<p><strong>ಲೇಹ್:</strong> ವಾಸ್ತವಿಕ ನಿಯಂತ್ರಣ ರೇಖೆ ಬಳಿ ನಿರ್ಮಾಣವಾಗಿರುವ ಉದ್ವಿಗ್ನತೆಯ ನಡುವೆ ಭಾರತೀಯ ಸೇನೆಯು ಚಳಿಗಾಲದ ಸಿದ್ಧತೆ ಆರಂಭಿಸಿದೆ. ಸೇನಾ ವಾಹನಗಳಿಗೆ ಇಂಧನ ಪೂರೈಸಲು ನೆರವಾಗುವಂತೆ ಹಾಗೂ ಮೈಕೊರೆಯುವ ಚಳಿಯಿಂದ ಇಂಧನವನ್ನು ಸುರಕ್ಷಿತವಾಗಿರಿಸಲು ಲಡಾಖ್ನಲ್ಲಿ ತೈಲ ಡಿಪೊಗಳನ್ನು ಭರ್ತಿ ಮಾಡಿಕೊಳ್ಳಲಾರಂಭಿಸಿದೆ.</p>.<p>‘ಮುಂಬರುವ ಚಳಿಗಾಲಕ್ಕಾಗಿ ಹಲವು ಡಿಪೊಗಳಲ್ಲಿ ತೈಲ ತುಂಬಿಸಿಕೊಳ್ಳಲಾಗಿದೆ. ಇಲ್ಲಿಂದಲೇ ಇಂಧನ ಸರಬರಾಜು ಮಾಡಲಿದ್ದೇವೆ’ ಎಂದು ಬ್ರಿಗೇಡಿಯರ್ ರಾಕೇಶ್ ಮನೋಚಾ ಹೇಳಿದ್ದಾರೆ.</p>.<p>ಏತನ್ಮಧ್ಯೆ ಮೇಜರ್ ಜನರಲ್ ಅರವಿಂದ್ ಕಪೂರ್ ಅವರು,ಭಾರತೀಯ ಸೇನೆಯು ಸಂಪೂರ್ಣ ಸಜ್ಜಾಗಿದೆ. ಪತ್ರಿ ಯೋಧನಿಗೂ ಅತ್ಯುತ್ತಮ ವಸ್ತ್ರ, ಶಿಬಿರ ಮತ್ತು ಆಹಾರವನ್ನು ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.</p>.<p>ಎಲ್ಲ ಶ್ರೇಣಿಯ ಯೋಧರಿಗೂ ಒಂದೇ ಗುಣಮಟ್ಟದಪಡಿತರವನ್ನು ನೀಡಲಾಗುತ್ತಿದೆ. ಲಡಾಖ್ನಲ್ಲಿ ನಿಯೋಜಿಸಲಾಗಿರುವ ಪಡೆಯ ಅಗತ್ಯಕ್ಕಾಗಿ ಪಡಿತರ ಸಂಗ್ರಹಿಸಿಕೊಳ್ಳಲಾಗಿದೆ ಎಂದು ಬ್ರಿಗೇಡಿಯರ್ ಎ.ಎಸ್. ರಾಥೋಡ್ ತಿಳಿಸಿದ್ದಾರೆ.<br /><br />ಉಭಯ ರಾಷ್ಟ್ರಗಳ ಸೇನಾ ಮುಖ್ಯಸ್ಥರುಹಲವು ಸುತ್ತಿನ ಮಾತುಕತೆ ನಡೆಸಿದ ಬಳಿಕವೂ ಗಡಿಯಲ್ಲಿ ಉದ್ವಿಗ್ನತೆ ಶಮನವಾಗಿಲ್ಲ. ಹೀಗಾಗಿ ಭಾರತೀಯ ಸೇನೆಯು ಎತ್ತರದ ಪರ್ವತ ಪ್ರದೇಶದಲ್ಲಿ ದೀರ್ಘಾವಧಿಯವರೆಗೆ ಯೋಧರನ್ನು ನಿಯೋಜಿಸಲು ಸಜ್ಜಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲೇಹ್:</strong> ವಾಸ್ತವಿಕ ನಿಯಂತ್ರಣ ರೇಖೆ ಬಳಿ ನಿರ್ಮಾಣವಾಗಿರುವ ಉದ್ವಿಗ್ನತೆಯ ನಡುವೆ ಭಾರತೀಯ ಸೇನೆಯು ಚಳಿಗಾಲದ ಸಿದ್ಧತೆ ಆರಂಭಿಸಿದೆ. ಸೇನಾ ವಾಹನಗಳಿಗೆ ಇಂಧನ ಪೂರೈಸಲು ನೆರವಾಗುವಂತೆ ಹಾಗೂ ಮೈಕೊರೆಯುವ ಚಳಿಯಿಂದ ಇಂಧನವನ್ನು ಸುರಕ್ಷಿತವಾಗಿರಿಸಲು ಲಡಾಖ್ನಲ್ಲಿ ತೈಲ ಡಿಪೊಗಳನ್ನು ಭರ್ತಿ ಮಾಡಿಕೊಳ್ಳಲಾರಂಭಿಸಿದೆ.</p>.<p>‘ಮುಂಬರುವ ಚಳಿಗಾಲಕ್ಕಾಗಿ ಹಲವು ಡಿಪೊಗಳಲ್ಲಿ ತೈಲ ತುಂಬಿಸಿಕೊಳ್ಳಲಾಗಿದೆ. ಇಲ್ಲಿಂದಲೇ ಇಂಧನ ಸರಬರಾಜು ಮಾಡಲಿದ್ದೇವೆ’ ಎಂದು ಬ್ರಿಗೇಡಿಯರ್ ರಾಕೇಶ್ ಮನೋಚಾ ಹೇಳಿದ್ದಾರೆ.</p>.<p>ಏತನ್ಮಧ್ಯೆ ಮೇಜರ್ ಜನರಲ್ ಅರವಿಂದ್ ಕಪೂರ್ ಅವರು,ಭಾರತೀಯ ಸೇನೆಯು ಸಂಪೂರ್ಣ ಸಜ್ಜಾಗಿದೆ. ಪತ್ರಿ ಯೋಧನಿಗೂ ಅತ್ಯುತ್ತಮ ವಸ್ತ್ರ, ಶಿಬಿರ ಮತ್ತು ಆಹಾರವನ್ನು ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.</p>.<p>ಎಲ್ಲ ಶ್ರೇಣಿಯ ಯೋಧರಿಗೂ ಒಂದೇ ಗುಣಮಟ್ಟದಪಡಿತರವನ್ನು ನೀಡಲಾಗುತ್ತಿದೆ. ಲಡಾಖ್ನಲ್ಲಿ ನಿಯೋಜಿಸಲಾಗಿರುವ ಪಡೆಯ ಅಗತ್ಯಕ್ಕಾಗಿ ಪಡಿತರ ಸಂಗ್ರಹಿಸಿಕೊಳ್ಳಲಾಗಿದೆ ಎಂದು ಬ್ರಿಗೇಡಿಯರ್ ಎ.ಎಸ್. ರಾಥೋಡ್ ತಿಳಿಸಿದ್ದಾರೆ.<br /><br />ಉಭಯ ರಾಷ್ಟ್ರಗಳ ಸೇನಾ ಮುಖ್ಯಸ್ಥರುಹಲವು ಸುತ್ತಿನ ಮಾತುಕತೆ ನಡೆಸಿದ ಬಳಿಕವೂ ಗಡಿಯಲ್ಲಿ ಉದ್ವಿಗ್ನತೆ ಶಮನವಾಗಿಲ್ಲ. ಹೀಗಾಗಿ ಭಾರತೀಯ ಸೇನೆಯು ಎತ್ತರದ ಪರ್ವತ ಪ್ರದೇಶದಲ್ಲಿ ದೀರ್ಘಾವಧಿಯವರೆಗೆ ಯೋಧರನ್ನು ನಿಯೋಜಿಸಲು ಸಜ್ಜಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>