<p><strong>ಜಮ್ಮು: </strong>‘ಧಾರ್ಮಿಕ ನೆಲೆಯಲ್ಲಿ ಜನರನ್ನು ಪ್ರಚೋದಿಸುವ ಸಲುವಾಗಿ ಬಿಜೆಪಿಯು ‘ದಿ ಕಾಶ್ಮೀರಿ ಫೈಲ್ಸ್’ ಚಲನಚಿತ್ರವನ್ನು ಪ್ರಚಾರ ಮಾಡುತ್ತಿದೆ’ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಆರೋಪಿಸಿದರು.</p>.<p>ಜಮ್ಮುವಿನಲ್ಲಿ ಬುಧವಾರ ಪಕ್ಷದ ಸಭೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಣ ಗಳಿಸುವ ಉದ್ದೇಶದಿಂದಲೇ ‘ದಿ ಕಾಶ್ಮೀರಿ ಫೈಲ್ಸ್’ ಚಿತ್ರವನ್ನು ತೆಗೆಯಲಾಗಿದೆ. ಪ್ರಧಾನಿ ಮೋದಿ ಹಾಗೂ ಬಿಜೆಪಿಯು ಧಾರ್ಮಿಕ ನೆಲೆಗಟ್ಟಿನಲ್ಲಿ ಜನರನ್ನು ಪ್ರಚೋದಿಸಲು ಈ ಚಿತ್ರಕ್ಕೆ ಉಚಿತ ಟಿಕೆಟ್ ವ್ಯವಸ್ಥೆ ಹಾಗೂ ತೆರಿಗೆ ಮುಕ್ತಗೊಳಿಸಿದ್ದಾರೆ’ ಎಂದು ಆರೋಪಿಸಿದರು.</p>.<p><a href="https://www.prajavani.net/entertainment/cinema/the-kashmir-file-director-vivek-agnihotri-reply-to-people-who-asked-to-donate-income-921625.html" itemprop="url">‘ದಿ ಕಾಶ್ಮೀರ್ ಫೈಲ್ಸ್‘: ಆದಾಯವನ್ನು ದಾನ ಮಾಡಿ ಎಂದವರಿಗೆ ನಿರ್ದೇಶಕ ಹೇಳಿದ್ದೇನು? </a></p>.<p>‘ಕಣಿವೆಯಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ವಲಸೆಯ ನಿಖರ ಕಾರಣ ತಿಳಿಯಲು ಸಮಿತಿಯೊಂದನ್ನು ರಚಿಸಬೇಕು. ಅದೇ ರೀತಿ 2002 ರಲ್ಲಿ ಗುಜರಾತ್ನಲ್ಲಿ ನಡೆದ ಕೋಮು ಹಿಂಸಾಚಾರ ಹಾಗೂ 2020 ರ ದೆಹಲಿ ಗಲಭೆಗಳ ಕಾರಣ ತಿಳಿಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ‘ಸತ್ಯ ಮತ್ತು ಸಾಮರಸ್ಯ ಆಯೋಗ’ ರಚಿಸುವ ನಿಟ್ಟಿನಲ್ಲಿ ಶೀಘ್ರವೇ ತೀರ್ಮಾನ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.</p>.<p>‘ದಿ ಕಾಶ್ಮೀರಿ ಫೈಲ್ಸ್’ ಚಲನಚಿತ್ರವನ್ನು ನಾನು ನೋಡಿಲ್ಲ. ಆದರೆ ಬಹಳ ಹಿಂಸಾಚಾರ ಹಾಗೂ ರಕ್ತಪಾತದಿಂದ ಕೂಡಿದ ಮನಕಲಕುವ ದೃಶ್ಯಗಳಿವೆ ಎಂದು ಕೇಳಿ ತಿಳಿದಿದ್ದೇನೆ. ಅಂದು ಕಾಶ್ಮೀರಿ ಪಂಡಿತರ ಮೇಲೆ ನಡೆದ ಭಯಾನಕ ದಾಳಿಯ ಬಗ್ಗೆ ನಮಗೆ ನೋವಿದೆ. ಆದರೆ ಈ ಕಾರಣಕ್ಕಾಗಿ ಇಡೀ ಕಾಶ್ಮೀರಿ ಮುಸ್ಲಿಮರನ್ನು ದ್ವೇಷಿಸಬಾರದು’ ಎಂದು ಮನವಿ ಮಾಡಿದರು.</p>.<p><a href="https://www.prajavani.net/entertainment/cinema/vivek-agnihotri-urges-to-stop-the-free-show-of-the-kashmir-files-921296.html" itemprop="url">ದಿ ಕಾಶ್ಮೀರ್ ಫೈಲ್ಸ್: ಉಚಿತ ಪ್ರದರ್ಶನ ನಿಲ್ಲಿಸಿ ಎಂದ ವಿವೇಕ್ ಅಗ್ನಿಹೋತ್ರಿ </a></p>.<p>‘ಕಾಶ್ಮೀರಿ ಪಂಡಿತರಿಗೆ ಆದ ಅನ್ಯಾಯಕ್ಕೆ ಸೂಕ್ತ ಪರಿಹಾರ ಕಲ್ಪಿಸುವಲ್ಲಿ ಬಿಜೆಪಿ ವಿಫಲವಾಗಿದೆ. ಕಳೆದ ಎಂಟು ವರ್ಷಗಳ ಅಧಿಕಾರದ ಅವಧಿಯಲ್ಲಿ ಬಿಜೆಪಿ ಸರ್ಕಾರ ಕಾಶ್ಮೀರಿ ಪಂಡಿತರಿಗಾಗಿ ಏನಾದರೂ ಮಾಡಿದ್ದರೆ ಅವರ ಪರಿಸ್ಥಿತಿ ಸುಧಾರಿಸುತ್ತಿತ್ತು. ಆದರೆ ಅವರಿಗಾಗಿ ಏನು ಮಾಡಲಿಲ್ಲ’ ಎಂದು ಆರೋಪಿಸಿದರು.</p>.<p>‘ಕಾಶ್ಮೀರಿ ಪಂಡಿತರಿಗಾಗಿ ಉದ್ಯೋಗದ ಪ್ಯಾಕೇಜ್, ಪುನರ್ವಸತಿ ಕಲ್ಪಿಸಿದ್ದು ಮಾಜಿ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯ್ಯೀದ್. ನಿರಾಶ್ರಿತ ಕೇಂದ್ರಗಳಿಂದ ಕಾಶ್ಮೀರಿ ಪಂಡಿತರನ್ನು ಕರೆತಂದು ವೆಸು, ಶೇಖ್ಪೋರಾ, ಮಟ್ಟಾನ್ ಪ್ರದೇಶಗಳಲ್ಲಿ ಪುನರ್ವಸತಿ ಕಲ್ಪಿಸಿ ಸಾರಿಗೆ ಸೌಲಭ್ಯ ಒದಗಿಸಿದ್ದರು’ ಎಂದು ಸ್ಮರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಮ್ಮು: </strong>‘ಧಾರ್ಮಿಕ ನೆಲೆಯಲ್ಲಿ ಜನರನ್ನು ಪ್ರಚೋದಿಸುವ ಸಲುವಾಗಿ ಬಿಜೆಪಿಯು ‘ದಿ ಕಾಶ್ಮೀರಿ ಫೈಲ್ಸ್’ ಚಲನಚಿತ್ರವನ್ನು ಪ್ರಚಾರ ಮಾಡುತ್ತಿದೆ’ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಆರೋಪಿಸಿದರು.</p>.<p>ಜಮ್ಮುವಿನಲ್ಲಿ ಬುಧವಾರ ಪಕ್ಷದ ಸಭೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಣ ಗಳಿಸುವ ಉದ್ದೇಶದಿಂದಲೇ ‘ದಿ ಕಾಶ್ಮೀರಿ ಫೈಲ್ಸ್’ ಚಿತ್ರವನ್ನು ತೆಗೆಯಲಾಗಿದೆ. ಪ್ರಧಾನಿ ಮೋದಿ ಹಾಗೂ ಬಿಜೆಪಿಯು ಧಾರ್ಮಿಕ ನೆಲೆಗಟ್ಟಿನಲ್ಲಿ ಜನರನ್ನು ಪ್ರಚೋದಿಸಲು ಈ ಚಿತ್ರಕ್ಕೆ ಉಚಿತ ಟಿಕೆಟ್ ವ್ಯವಸ್ಥೆ ಹಾಗೂ ತೆರಿಗೆ ಮುಕ್ತಗೊಳಿಸಿದ್ದಾರೆ’ ಎಂದು ಆರೋಪಿಸಿದರು.</p>.<p><a href="https://www.prajavani.net/entertainment/cinema/the-kashmir-file-director-vivek-agnihotri-reply-to-people-who-asked-to-donate-income-921625.html" itemprop="url">‘ದಿ ಕಾಶ್ಮೀರ್ ಫೈಲ್ಸ್‘: ಆದಾಯವನ್ನು ದಾನ ಮಾಡಿ ಎಂದವರಿಗೆ ನಿರ್ದೇಶಕ ಹೇಳಿದ್ದೇನು? </a></p>.<p>‘ಕಣಿವೆಯಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ವಲಸೆಯ ನಿಖರ ಕಾರಣ ತಿಳಿಯಲು ಸಮಿತಿಯೊಂದನ್ನು ರಚಿಸಬೇಕು. ಅದೇ ರೀತಿ 2002 ರಲ್ಲಿ ಗುಜರಾತ್ನಲ್ಲಿ ನಡೆದ ಕೋಮು ಹಿಂಸಾಚಾರ ಹಾಗೂ 2020 ರ ದೆಹಲಿ ಗಲಭೆಗಳ ಕಾರಣ ತಿಳಿಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ‘ಸತ್ಯ ಮತ್ತು ಸಾಮರಸ್ಯ ಆಯೋಗ’ ರಚಿಸುವ ನಿಟ್ಟಿನಲ್ಲಿ ಶೀಘ್ರವೇ ತೀರ್ಮಾನ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.</p>.<p>‘ದಿ ಕಾಶ್ಮೀರಿ ಫೈಲ್ಸ್’ ಚಲನಚಿತ್ರವನ್ನು ನಾನು ನೋಡಿಲ್ಲ. ಆದರೆ ಬಹಳ ಹಿಂಸಾಚಾರ ಹಾಗೂ ರಕ್ತಪಾತದಿಂದ ಕೂಡಿದ ಮನಕಲಕುವ ದೃಶ್ಯಗಳಿವೆ ಎಂದು ಕೇಳಿ ತಿಳಿದಿದ್ದೇನೆ. ಅಂದು ಕಾಶ್ಮೀರಿ ಪಂಡಿತರ ಮೇಲೆ ನಡೆದ ಭಯಾನಕ ದಾಳಿಯ ಬಗ್ಗೆ ನಮಗೆ ನೋವಿದೆ. ಆದರೆ ಈ ಕಾರಣಕ್ಕಾಗಿ ಇಡೀ ಕಾಶ್ಮೀರಿ ಮುಸ್ಲಿಮರನ್ನು ದ್ವೇಷಿಸಬಾರದು’ ಎಂದು ಮನವಿ ಮಾಡಿದರು.</p>.<p><a href="https://www.prajavani.net/entertainment/cinema/vivek-agnihotri-urges-to-stop-the-free-show-of-the-kashmir-files-921296.html" itemprop="url">ದಿ ಕಾಶ್ಮೀರ್ ಫೈಲ್ಸ್: ಉಚಿತ ಪ್ರದರ್ಶನ ನಿಲ್ಲಿಸಿ ಎಂದ ವಿವೇಕ್ ಅಗ್ನಿಹೋತ್ರಿ </a></p>.<p>‘ಕಾಶ್ಮೀರಿ ಪಂಡಿತರಿಗೆ ಆದ ಅನ್ಯಾಯಕ್ಕೆ ಸೂಕ್ತ ಪರಿಹಾರ ಕಲ್ಪಿಸುವಲ್ಲಿ ಬಿಜೆಪಿ ವಿಫಲವಾಗಿದೆ. ಕಳೆದ ಎಂಟು ವರ್ಷಗಳ ಅಧಿಕಾರದ ಅವಧಿಯಲ್ಲಿ ಬಿಜೆಪಿ ಸರ್ಕಾರ ಕಾಶ್ಮೀರಿ ಪಂಡಿತರಿಗಾಗಿ ಏನಾದರೂ ಮಾಡಿದ್ದರೆ ಅವರ ಪರಿಸ್ಥಿತಿ ಸುಧಾರಿಸುತ್ತಿತ್ತು. ಆದರೆ ಅವರಿಗಾಗಿ ಏನು ಮಾಡಲಿಲ್ಲ’ ಎಂದು ಆರೋಪಿಸಿದರು.</p>.<p>‘ಕಾಶ್ಮೀರಿ ಪಂಡಿತರಿಗಾಗಿ ಉದ್ಯೋಗದ ಪ್ಯಾಕೇಜ್, ಪುನರ್ವಸತಿ ಕಲ್ಪಿಸಿದ್ದು ಮಾಜಿ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯ್ಯೀದ್. ನಿರಾಶ್ರಿತ ಕೇಂದ್ರಗಳಿಂದ ಕಾಶ್ಮೀರಿ ಪಂಡಿತರನ್ನು ಕರೆತಂದು ವೆಸು, ಶೇಖ್ಪೋರಾ, ಮಟ್ಟಾನ್ ಪ್ರದೇಶಗಳಲ್ಲಿ ಪುನರ್ವಸತಿ ಕಲ್ಪಿಸಿ ಸಾರಿಗೆ ಸೌಲಭ್ಯ ಒದಗಿಸಿದ್ದರು’ ಎಂದು ಸ್ಮರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>