ರಾಮನ ಭಾರತದಲ್ಲಿ ಪೆಟ್ರೋಲ್ ಬೆಲೆ ₹93, ರಾವಣನ ಲಂಕೆಯಲ್ಲಿ ₹51: ಸ್ವಾಮಿ ಟೀಕೆ

ದೆಹಲಿ: ಪೆಟ್ರೋಲ್ ದರ ಏರಿಕೆ ಬಗ್ಗೆ ಆಗಾಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡುವ ರಾಜ್ಯಸಭೆಯ ಬಿಜೆಪಿ ಸದಸ್ಯ ಸುಬ್ರಮಣಿಯನ್ ಸ್ವಾಮಿ ಈಗ ಮತ್ತೊಮ್ಮೆ ಕೇಂದ್ರ ಸರ್ಕಾರವನ್ನು ವ್ಯಂಗ್ಯ ಮಾಡಿದ್ದಾರೆ.
ಈ ಕುರಿತು ಮಂಗಳವಾರ ಬೆಳಗ್ಗೆ ಟ್ವೀಟ್ ಮಾಡಿರುವ ಅವರು, 'ರಾಮನ ಭಾರತದಲ್ಲಿ ಪೆಟ್ರೋಲ್ ದರ ₹93, ಸೀತೆಯ ನೇಪಾಳದಲ್ಲಿ ₹53, ರಾವಣನ ಶ್ರೀಲಂಕಾದಲ್ಲಿ ₹51,' ಎಂದು ಅವರು ಪೋಸ್ಟ್ ಹಂಚಿಕೊಂಡಿದ್ದಾರೆ.
ಸ್ವಾಮಿ ಅವರ ಟ್ವೀಟ್ ಅನ್ನು ಮಂಗಳವಾರ ಮಧ್ಯಾಹ್ನದ ಹೊತ್ತಿಗೆ 57 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದರೆ, 15 ಸಾವಿರಕ್ಕೂ ಅಧಿಕ ಮಂದಿ ರೀಟ್ವೀಟ್ ಮಾಡಿಕೊಂಡಿದ್ದಾರೆ.
— Subramanian Swamy (@Swamy39) February 2, 2021
ಪೆಟ್ರೋಲ್ ಬೆಲೆ ಏರಿಕೆ ಐತಿಹಾಸಿಕ ಶೋಷಣೆ ಎಂದಿದ್ದ ಸ್ವಾಮಿ
ಪ್ರತಿ ಲೀಟರ್ ಪೆಟ್ರೋಲ್ ದರ ಸುಮಾರು ₹90ರಷ್ಟಾಗಿರುವುದು ಕೇಂದ್ರ ಸರ್ಕಾರವು ಜನರ ಮೇಲೆ ನಡೆಸುತ್ತಿರುವ ಐತಿಹಾಸಿಕ ಶೋಷಣೆ ಎಂದು ಸುಬ್ರಮಣಿಯನ್ ಸ್ವಾಮಿ ಡಿಸೆಂಬರ್ನಲ್ಲಿ ಹೇಳಿದ್ದರು.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕುರಿತು ಟ್ವೀಟ್ ಮಾಡಿದ್ದ ಅವರು, ‘ಸಂಸ್ಕರಣಗೊಂಡ ಬಳಿಕ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ₹30ರಷ್ಟಾಗುತ್ತದೆ. ಎಲ್ಲ ತೆರಿಗೆಗಳು, ಪೆಟ್ರೋಲ್ ಪಂಪ್ ಕಮಿಷನ್ ₹60ರಷ್ಟಾಗುತ್ತದೆ. ನನ್ನ ದೃಷ್ಟಿಯಲ್ಲಿ ಪೆಟ್ರೋಲ್ ಅನ್ನು ಗರಿಷ್ಠ ಪ್ರತಿ ಲೀಟರ್ಗೆ ₹40ರಂತೆ ಮಾರಾಟ ಮಾಡಬೇಕು’ ಎಂದು ಹೇಳಿದ್ದರು.
ಇವುಗಳನ್ನು ಓದಿ...
ಏರ್ ಇಂಡಿಯಾ ಮಾರಾಟ ದೇಶದ್ರೋಹದ ಕೆಲಸ: ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ
ಸ್ವದೇಶಿ ಕಂಪನಿ ಲಸಿಕೆ ಅನುಮೋದನೆಗೆ ವಿಳಂಬ: ಟ್ವಿಟ್ಟರ್ನಲ್ಲಿ ಸ್ವಾಮಿ ಟೀಕೆ
'ಸಂಸತ್' ನಿರ್ಮಾಣಕ್ಕೆ ಟಾಟಾ ಆಯ್ಕೆಯಾಗಿದ್ದು ಹೇಗೆ? ಬಿಡ್ನಿಂದಲೋ, 2ಜಿ ರೀತಿಯೋ?
ತಮ್ಮದೇ ಪಕ್ಷದ ಐಟಿ ಸೆಲ್ಗೆ ರಾಕ್ಷಸ ಎಂದ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ
ಭಾರತವನ್ನು ಬಿಜೆಪಿ ಹಿಂದೂ ರಾಷ್ಟ್ರವಾಗಿಸುತ್ತಿಲ್ಲ: ಸುಬ್ರಮಣಿಯನ್ ಸ್ವಾಮಿ
ಜಿಎಸ್ಟಿ ಶತಮಾನದ ಹುಚ್ಚುತನ: ಸುಬ್ರಮಣಿಯನ್ ಸ್ಮಾಮಿ ಟೀಕೆ
ಆರ್ಥಿಕತೆ ನಿಭಾಯಿಸಲು ಬೇರುಗಳಿಲ್ಲದ ಸಚಿವರ ನೇಮಿಸಿದ ಮೋದಿ: ಸುಬ್ರಮಣಿಯನ್ ಸ್ವಾಮಿ
ಹಿಂದಿಯಲ್ಲಿ ಪ್ರಶ್ನಿಸಬೇಡಿ, ನಾನು ತಮಿಳಿಗ: ಸುಬ್ರಮಣಿಯನ್ ಸ್ವಾಮಿ
ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಭ್ರಷ್ಟ: ಸ್ವಾಮಿ
ಮೋದಿ ಮತ್ತು ಜೇಟ್ಲಿಗೆ ಅರ್ಥಶಾಸ್ತ್ರ ಗೊತ್ತಿಲ್ಲ: ಸುಬ್ರಮಣಿಯನ್ ಸ್ವಾಮಿ
ಕನ್ನಡ ಪರ ಹೋರಾಟಗಾರರು ಮೂರ್ಖರು: ಸುಬ್ರಮಣ್ಯನ್ ಸ್ವಾಮಿ ವಿವಾದಾತ್ಮಕ ಹೇಳಿಕೆ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.