ಅವರು (ರಾಕೇಶ್ ಟಿಕಾಯತ್) ತಮ್ಮನ್ನು ರೈತ ನಾಯಕ ಎಂದು ಹೇಳಿಕೊಳ್ಳುತ್ತಾರೆ. ಆಮೇಲೆ, ಆರ್ಥಿಕತೆ ಹಾಗೂ ರೈತರ ಮೇಲೆ ಪರಿಣಾಮ ಬೀರುವ ಭಾರತ್ ಬಂದ್ಗೆ ಕರೆ ನೀಡುತ್ತಾರೆ. ಇದರಿಂದ ಯಾರಿಗೇ ಆದರೂ ಪ್ರಯೋಜನ ದೊರೆಯಲು ಹೇಗೆ ಸಾಧ್ಯ? ಈ ರೀತಿಯ ಚಟುವಟಿಕೆಗಳನ್ನು ಮಾಡುವ ಮೂಲಕ ಅವರು ತಾಲಿಬಾನ್ ನಡೆಯನ್ನು ಅನುಸರಿಸಲು ಬಯಸಿದ್ದಾರೆ... ಎಂದು ಭಾನು ಪ್ರತಾಪ್ ಸಿಂಗ್ ಹೇಳಿರುವುದಾಗಿ ‘ಎಎನ್ಐ’ ವರದಿ ಮಾಡಿದೆ.