ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕಾಯತ್‌ರ ಭಾರತ್ ಬಂದ್ ಕರೆಯನ್ನು ತಾಲಿಬಾನ್ ಚಟುವಟಿಕೆಗೆ ಹೋಲಿಸಿದ ಭಾನು ಪ್ರತಾಪ್

Last Updated 27 ಸೆಪ್ಟೆಂಬರ್ 2021, 8:48 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಅವರು ‘ಭಾರತ್ ಬಂದ್’ಗೆ ಕರೆ ನೀಡಿರುವುದನ್ನು ‘ಬಿಕೆಯು–ಭಾನು’ ಘಟಕದ ಅಧ್ಯಕ್ಷ ಭಾನು ಪ್ರತಾಪ್ ಸಿಂಗ್ ತಾಲಿಬಾನ್ ಚಟುವಟಿಕೆಗಳಿಗೆ ಹೋಲಿಸಿದ್ದಾರೆ.

ಅವರು (ರಾಕೇಶ್ ಟಿಕಾಯತ್) ತಮ್ಮನ್ನು ರೈತ ನಾಯಕ ಎಂದು ಹೇಳಿಕೊಳ್ಳುತ್ತಾರೆ. ಆಮೇಲೆ, ಆರ್ಥಿಕತೆ ಹಾಗೂ ರೈತರ ಮೇಲೆ ಪರಿಣಾಮ ಬೀರುವ ಭಾರತ್ ಬಂದ್‌ಗೆ ಕರೆ ನೀಡುತ್ತಾರೆ. ಇದರಿಂದ ಯಾರಿಗೇ ಆದರೂ ಪ್ರಯೋಜನ ದೊರೆಯಲು ಹೇಗೆ ಸಾಧ್ಯ? ಈ ರೀತಿಯ ಚಟುವಟಿಕೆಗಳನ್ನು ಮಾಡುವ ಮೂಲಕ ಅವರು ತಾಲಿಬಾನ್‌ ನಡೆಯನ್ನು ಅನುಸರಿಸಲು ಬಯಸಿದ್ದಾರೆ... ಎಂದು ಭಾನು ಪ್ರತಾಪ್ ಸಿಂಗ್ ಹೇಳಿರುವುದಾಗಿ ‘ಎಎನ್‌ಐ’ ವರದಿ ಮಾಡಿದೆ.

ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಬಿಕೆಯು ಮತ್ತು ಸಂಯುಕ್ತ ಕಿಸಾನ್ ಮೋರ್ಚಾ ಇಂದು (ಸೆ.27) ಭಾರತ್ ಬಂದ್‌ಗೆ ಕರೆ ನೀಡಿದ್ದು, ದೇಶದಾದ್ಯಂತ ಕೇಂದ್ರದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT