ನಾರಾಯಣ ಅವರ ಮದುವೆಯು ಕಾಶ್ಮೀರದಿಂದ 2,500 ಕಿ.ಮೀ. ದೂರದಲ್ಲಿರುವ ಒಡಿಶಾದ ಧೆನ್ಕನಲ್ ಜಿಲ್ಲೆಯ ಆದಿಪುರ ಗ್ರಾಮದಲ್ಲಿ ಮೇ 2ರಂದು ನಿಗದಿಯಾಗಿದೆ. ಅವರು ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಪ್ರದೇಶವು ಹಿಮದಿಂದ ಆವೃತವಾಗಿರುವುದರಿಂದ ಅಲ್ಲಿಂದ ಕಾಶ್ಮೀರ ಕಣಿವೆಗೆ ರಸ್ತೆ ಸಂಪರ್ಕವು ಸದ್ಯ ಕಡಿತಗೊಂಡಿದೆ. ವಾಯು ಮಾರ್ಗದ ಮೂಲಕವೇ ಅಲ್ಲಿಗೆ ಯೋಧರನ್ನು ಕರೆದೊಯ್ಯಲಾಗುತ್ತದೆ ಎಂದು ಬಿಎಸ್ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.