<p><strong>ದೆಹಲಿ:</strong> ಭಾರತ-ಚೀನಾ ಗಡಿಯಲ್ಲಿ ವ್ಯೂಹಾತ್ಮಕ ಪ್ರಾಧಾನ್ಯತೆ ಪಡೆದಿರುವ ಕೈಲಾಸ ಪರ್ವತ ಶ್ರೇಣಿಯ ಮೇಲೆ ನಿಗಾ ವಹಿಸಲೆಂದೇ ಅಭಿವೃದ್ಧಿಪಡಿಸಲಾಗಿರುವ ಮಾನವ ರಹಿತ ವೈಮಾನಿಕ ವಾಹನ ( ಯುಎವಿ)ವನ್ನು ಚೀನಾ ಪರೀಕ್ಷೆ ಮಾಡಿದೆ ಎಂದು ವರದಿಯಾಗಿದೆ.</p>.<p>ಚೀನಾದ ಶಾನ್ಕ್ಸಿ ಎಂಬಲ್ಲಿ ಈ ವಿಮಾನವನ್ನು ಅಭಿವೃದ್ಧಿಪಡಿಸಲಾಗಿದೆ. ಟಿಬೆಟ್ ಸ್ವಾಯತ್ತ ಪ್ರದೇಶವಾದ ಗಾರ್ ಗುನ್ಸಾ ಎಂಬಲ್ಲಿ ವಿಮಾನದ ನಿಯಂತ್ರಣವಿತ್ತು. ಈ ಕಾರ್ಯವನ್ನು 'ಹೈಲನ್ ಏವಿಯೇಷನ್' ತಂಡವು ನಿರ್ವಹಿಸಿದೆ ಎಂದು ಸುದ್ದಿ ಸಂಸ್ಥೆ ಐಎಎನ್ಎಸ್ ವರದಿ ಮಾಡಿದೆ.</p>.<p>ಬಾಗಾ ನಗರದಲ್ಲಿ 4700 ಮೀಟರ್ಗಳ ಎತ್ತರದಿಂದ ಹಾರಾಟ ಆರಂಭಿಸಿದ ವಿಮಾನ, ಕೈಲಾಸ ಪರ್ವತ ಶ್ರೇಣಿಯಲ್ಲಿ ಯಶಸ್ವಿ ಹಾರಾಟ, ಪಹರೆ ನಡೆಸಿದೆ ಎಂದು ಸುದ್ದಿ ಸಂಸ್ಥೆ ಪ್ರಕಟಿಸಿದೆ.</p>.<p>ಗಾಲ್ವಾನ್ ಕಣಿವೆಯಲ್ಲಿನ ಎರಡೂ ದೇಶಗಳ ಸೇನಾ ಸಂಘರ್ಷದ ನಂತರದ ದಿನಗಳಲ್ಲಿ ಭಾರತವು ಕೈಲಾಸ ಪರ್ವತ ಶ್ರೇಣಿಯ ಹಲವು ಶಿಖರಗಳನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಈ ಮೂಲಕ ಚೀನಾ ಸೇನೆಯ ಚಲನವಲನಗಳನ್ನು ಗಮನಿಸುವುದು ಭಾರತೀಯ ಸೇನಾ ಪಡೆಯ ಮುಖ್ಯ ಉದ್ದೇಶವಾಗಿದೆ. ಇದೇ ಹಿನ್ನೆಲೆಯಲ್ಲಿ ಕೈಲಾಸ ಪರ್ವತ ಶ್ರೇಣಿಯು ವ್ಯೂಹಾತ್ಮಕವಾಗಿ ಪ್ರಾಮುಖ್ಯತೆ ಪಡೆದಿದೆ. ಇದರ ಮೇಲೆ ಗಸ್ತು ನಡೆಸಲು ಚೀನಾ ಮಾನವರಹಿತ ವಿಮಾನವನ್ನು ಅಭಿವೃದ್ಧಿಪಡಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೆಹಲಿ:</strong> ಭಾರತ-ಚೀನಾ ಗಡಿಯಲ್ಲಿ ವ್ಯೂಹಾತ್ಮಕ ಪ್ರಾಧಾನ್ಯತೆ ಪಡೆದಿರುವ ಕೈಲಾಸ ಪರ್ವತ ಶ್ರೇಣಿಯ ಮೇಲೆ ನಿಗಾ ವಹಿಸಲೆಂದೇ ಅಭಿವೃದ್ಧಿಪಡಿಸಲಾಗಿರುವ ಮಾನವ ರಹಿತ ವೈಮಾನಿಕ ವಾಹನ ( ಯುಎವಿ)ವನ್ನು ಚೀನಾ ಪರೀಕ್ಷೆ ಮಾಡಿದೆ ಎಂದು ವರದಿಯಾಗಿದೆ.</p>.<p>ಚೀನಾದ ಶಾನ್ಕ್ಸಿ ಎಂಬಲ್ಲಿ ಈ ವಿಮಾನವನ್ನು ಅಭಿವೃದ್ಧಿಪಡಿಸಲಾಗಿದೆ. ಟಿಬೆಟ್ ಸ್ವಾಯತ್ತ ಪ್ರದೇಶವಾದ ಗಾರ್ ಗುನ್ಸಾ ಎಂಬಲ್ಲಿ ವಿಮಾನದ ನಿಯಂತ್ರಣವಿತ್ತು. ಈ ಕಾರ್ಯವನ್ನು 'ಹೈಲನ್ ಏವಿಯೇಷನ್' ತಂಡವು ನಿರ್ವಹಿಸಿದೆ ಎಂದು ಸುದ್ದಿ ಸಂಸ್ಥೆ ಐಎಎನ್ಎಸ್ ವರದಿ ಮಾಡಿದೆ.</p>.<p>ಬಾಗಾ ನಗರದಲ್ಲಿ 4700 ಮೀಟರ್ಗಳ ಎತ್ತರದಿಂದ ಹಾರಾಟ ಆರಂಭಿಸಿದ ವಿಮಾನ, ಕೈಲಾಸ ಪರ್ವತ ಶ್ರೇಣಿಯಲ್ಲಿ ಯಶಸ್ವಿ ಹಾರಾಟ, ಪಹರೆ ನಡೆಸಿದೆ ಎಂದು ಸುದ್ದಿ ಸಂಸ್ಥೆ ಪ್ರಕಟಿಸಿದೆ.</p>.<p>ಗಾಲ್ವಾನ್ ಕಣಿವೆಯಲ್ಲಿನ ಎರಡೂ ದೇಶಗಳ ಸೇನಾ ಸಂಘರ್ಷದ ನಂತರದ ದಿನಗಳಲ್ಲಿ ಭಾರತವು ಕೈಲಾಸ ಪರ್ವತ ಶ್ರೇಣಿಯ ಹಲವು ಶಿಖರಗಳನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಈ ಮೂಲಕ ಚೀನಾ ಸೇನೆಯ ಚಲನವಲನಗಳನ್ನು ಗಮನಿಸುವುದು ಭಾರತೀಯ ಸೇನಾ ಪಡೆಯ ಮುಖ್ಯ ಉದ್ದೇಶವಾಗಿದೆ. ಇದೇ ಹಿನ್ನೆಲೆಯಲ್ಲಿ ಕೈಲಾಸ ಪರ್ವತ ಶ್ರೇಣಿಯು ವ್ಯೂಹಾತ್ಮಕವಾಗಿ ಪ್ರಾಮುಖ್ಯತೆ ಪಡೆದಿದೆ. ಇದರ ಮೇಲೆ ಗಸ್ತು ನಡೆಸಲು ಚೀನಾ ಮಾನವರಹಿತ ವಿಮಾನವನ್ನು ಅಭಿವೃದ್ಧಿಪಡಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>