<p class="title"><strong>ನವದೆಹಲಿ:</strong> ‘ರಸ್ತೆ ಅಪಘಾತದಿಂದ ಶಾಶ್ವತ ಅಂಗವಿಕಲತೆಗೆ ಒಳಗಾಗುವ ಸಂತ್ರಸ್ತನ ಬದುಕಿನಲ್ಲಿ ಘನತೆ ಕಾಪಾಡಿಕೊಳ್ಳಲು ನೆರವಾಗುವ ನಿಟ್ಟಿನಲ್ಲಿ ಕೋರ್ಟ್ಗಳು ಪ್ರಾಮಾಣಿಕವಾಗಿ ಯತ್ನಿಸಿ, ‘ಪರಿಹಾರಕ್ಕೆ ಆದೇಶಿಸಬೇಕು’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.</p>.<p class="title">ಇಂಥ ಪ್ರಯತ್ನಗಳು ಸಂತ್ರಸ್ತನ ನೋವು ನಿವಾರಿಸಬೇಕು. ವಾಸ್ತವಿಕ ಸಂಗತಿಗಳನ್ನು ಆಧರಿಸಿ ಅವರ ಅಗತ್ಯಗಳಿಗೆ ಸ್ಪಂದಿಸುವಂತಿರಬೇಕು ಎಂದೂ ನ್ಯಾಯಮೂರ್ತಿಗಳಾದ ಆರ್.ಸುಭಾಷ್ ರೆಡ್ಡಿ ಮತ್ತು ಹೃಷಿಕೇಷ್ ರಾಯ್ ಅವರಿದ್ದ ಪೀಠವು ಹೇಳಿದೆ.</p>.<p class="title">ಆರೋಗ್ಯಕರ ವ್ಯಕ್ತಿಯು ಅಂಗವಿಕಲತೆಗೆ ಗುರಿಯಾದಾಗ ಸಹಜ ಒಡನಾಟ ಕಳೆದುಕೊಳ್ಳುತ್ತಾರೆ. ಉತ್ಪಾದಕತೆಯ ಬದುಕು ಸಾಗಿಸಲೂ ಅಸಮರ್ಥರಾಗುತ್ತಾರೆ. ಇದು, ಘನತೆಗೆ ಧಕ್ಕೆ ತರಲಿದೆ. ಇಂಥ ಬೆಳವಣಿಗೆಯನ್ನು ಚಾರ್ಲ್ಸ್ ಡಿಕನ್ಸ್ ಅವರ ‘ಪ್ಲೀಸ್ ಸರ್, ಐ ವಾಂಟ್ ಸಮ್ ಮೋರ್’ ಕೃತಿಯ ಪಾತ್ರಧಾರಿಯಂತೆ ನೋಡಬಾರದು ಎಂದು ಪೀಠವು ಅಭಿಪ್ರಾಯಪಟ್ಟಿತು.</p>.<p class="title">ಅಪಘಾತದಲ್ಲಿ ಪೂರ್ಣ ಅಂಗವಿಕಲರಾಗಿದ್ದ ಕೇರಳದ ಜಿತೇಂದ್ರನ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಪರಿಗಣಿಸಿತು. ಕೇರಳ ಹೈಕೋರ್ಟ್ ಪರಿಹಾರದ ಮೊತ್ತವನ್ನು ₹ 14.31 ಲಕ್ಷದಿಂದ ₹ 27.67ಲಕ್ಷಕ್ಕೆ ಹೆಚ್ಚಿಸಿ ಆದೇಶಿಸಿತ್ತು. 2001ರಲ್ಲಿ ವೇಗವಾಗಿ ಬಂದಿದ್ದ ಕಾರು ಡಿಕ್ಕಿ ಹೊಡೆದಿದ್ದು, ಇವರು ವಾಹನದ ಹಿಂಬದಿ ಸವಾರರಾಗಿದ್ದರು. ಅಪಘಾತ ನಡೆದಾಗ 21 ವರ್ಷದವರಾಗಿದ್ದ ಇವರು ಜ್ಯುವೆಲ್ಲರಿ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದು, ಮಾಸಿಕ ₹ 4,500 ಗಳಿಸುತ್ತಿದ್ದರು.</p>.<p class="title">ಅಪಘಾತದಲ್ಲಿ ಶೇ 69ರಷ್ಟು ಅಂಗವಿಕಲತೆ ಆಗಿದ್ದರೂ ಪೂರ್ಣಶ್ರವಣಶಕ್ತಿ ಕಳೆದುಕೊಂಡಿದ್ದಾರೆ ಎಂಬುದನ್ನು ಕೋರ್ಟ್ ಪರಿಗಣಿಸಿತು. ಜೊತೆಗೆ ಇವರಿಗೆ ನೆರವಾಗಬೇಕಾದ ಸಹಾಯಕನ ವಾರ್ಷಿಕ ವೆಚ್ಚವನ್ನೂ ಪರಿಗಣನೆಗೆ ತೆಗೆದುಕೊಂಡಿತು.</p>.<p class="title">ತೀವ್ರ ಸ್ವರೂಪದ ನೋವಿನ ಕಾರಣ ನೊಂದವರು ಹೆಚ್ಚಿನ ಪರಿಹಾರ ಕೋರುವುದು ಅತಿಶಯೋಕ್ತಿಯಲ್ಲ. ಬದಲಿಗೆ ಜೀವನದ ಮೇಲೆ ಆಗಿರುವ ನೋವಿಗೆ ಸೂಕ್ತ ಪರಿಹಾರ ಸಿಗಲಿ ಎಂಬುದೇ ಆಗಿದೆ ಎಂದು ಪೀಠವು ಅಭಿಪ್ರಾಯಪಟ್ಟಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ:</strong> ‘ರಸ್ತೆ ಅಪಘಾತದಿಂದ ಶಾಶ್ವತ ಅಂಗವಿಕಲತೆಗೆ ಒಳಗಾಗುವ ಸಂತ್ರಸ್ತನ ಬದುಕಿನಲ್ಲಿ ಘನತೆ ಕಾಪಾಡಿಕೊಳ್ಳಲು ನೆರವಾಗುವ ನಿಟ್ಟಿನಲ್ಲಿ ಕೋರ್ಟ್ಗಳು ಪ್ರಾಮಾಣಿಕವಾಗಿ ಯತ್ನಿಸಿ, ‘ಪರಿಹಾರಕ್ಕೆ ಆದೇಶಿಸಬೇಕು’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.</p>.<p class="title">ಇಂಥ ಪ್ರಯತ್ನಗಳು ಸಂತ್ರಸ್ತನ ನೋವು ನಿವಾರಿಸಬೇಕು. ವಾಸ್ತವಿಕ ಸಂಗತಿಗಳನ್ನು ಆಧರಿಸಿ ಅವರ ಅಗತ್ಯಗಳಿಗೆ ಸ್ಪಂದಿಸುವಂತಿರಬೇಕು ಎಂದೂ ನ್ಯಾಯಮೂರ್ತಿಗಳಾದ ಆರ್.ಸುಭಾಷ್ ರೆಡ್ಡಿ ಮತ್ತು ಹೃಷಿಕೇಷ್ ರಾಯ್ ಅವರಿದ್ದ ಪೀಠವು ಹೇಳಿದೆ.</p>.<p class="title">ಆರೋಗ್ಯಕರ ವ್ಯಕ್ತಿಯು ಅಂಗವಿಕಲತೆಗೆ ಗುರಿಯಾದಾಗ ಸಹಜ ಒಡನಾಟ ಕಳೆದುಕೊಳ್ಳುತ್ತಾರೆ. ಉತ್ಪಾದಕತೆಯ ಬದುಕು ಸಾಗಿಸಲೂ ಅಸಮರ್ಥರಾಗುತ್ತಾರೆ. ಇದು, ಘನತೆಗೆ ಧಕ್ಕೆ ತರಲಿದೆ. ಇಂಥ ಬೆಳವಣಿಗೆಯನ್ನು ಚಾರ್ಲ್ಸ್ ಡಿಕನ್ಸ್ ಅವರ ‘ಪ್ಲೀಸ್ ಸರ್, ಐ ವಾಂಟ್ ಸಮ್ ಮೋರ್’ ಕೃತಿಯ ಪಾತ್ರಧಾರಿಯಂತೆ ನೋಡಬಾರದು ಎಂದು ಪೀಠವು ಅಭಿಪ್ರಾಯಪಟ್ಟಿತು.</p>.<p class="title">ಅಪಘಾತದಲ್ಲಿ ಪೂರ್ಣ ಅಂಗವಿಕಲರಾಗಿದ್ದ ಕೇರಳದ ಜಿತೇಂದ್ರನ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಪರಿಗಣಿಸಿತು. ಕೇರಳ ಹೈಕೋರ್ಟ್ ಪರಿಹಾರದ ಮೊತ್ತವನ್ನು ₹ 14.31 ಲಕ್ಷದಿಂದ ₹ 27.67ಲಕ್ಷಕ್ಕೆ ಹೆಚ್ಚಿಸಿ ಆದೇಶಿಸಿತ್ತು. 2001ರಲ್ಲಿ ವೇಗವಾಗಿ ಬಂದಿದ್ದ ಕಾರು ಡಿಕ್ಕಿ ಹೊಡೆದಿದ್ದು, ಇವರು ವಾಹನದ ಹಿಂಬದಿ ಸವಾರರಾಗಿದ್ದರು. ಅಪಘಾತ ನಡೆದಾಗ 21 ವರ್ಷದವರಾಗಿದ್ದ ಇವರು ಜ್ಯುವೆಲ್ಲರಿ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದು, ಮಾಸಿಕ ₹ 4,500 ಗಳಿಸುತ್ತಿದ್ದರು.</p>.<p class="title">ಅಪಘಾತದಲ್ಲಿ ಶೇ 69ರಷ್ಟು ಅಂಗವಿಕಲತೆ ಆಗಿದ್ದರೂ ಪೂರ್ಣಶ್ರವಣಶಕ್ತಿ ಕಳೆದುಕೊಂಡಿದ್ದಾರೆ ಎಂಬುದನ್ನು ಕೋರ್ಟ್ ಪರಿಗಣಿಸಿತು. ಜೊತೆಗೆ ಇವರಿಗೆ ನೆರವಾಗಬೇಕಾದ ಸಹಾಯಕನ ವಾರ್ಷಿಕ ವೆಚ್ಚವನ್ನೂ ಪರಿಗಣನೆಗೆ ತೆಗೆದುಕೊಂಡಿತು.</p>.<p class="title">ತೀವ್ರ ಸ್ವರೂಪದ ನೋವಿನ ಕಾರಣ ನೊಂದವರು ಹೆಚ್ಚಿನ ಪರಿಹಾರ ಕೋರುವುದು ಅತಿಶಯೋಕ್ತಿಯಲ್ಲ. ಬದಲಿಗೆ ಜೀವನದ ಮೇಲೆ ಆಗಿರುವ ನೋವಿಗೆ ಸೂಕ್ತ ಪರಿಹಾರ ಸಿಗಲಿ ಎಂಬುದೇ ಆಗಿದೆ ಎಂದು ಪೀಠವು ಅಭಿಪ್ರಾಯಪಟ್ಟಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>