ಬೆಂಗಳೂರು: ಮಾಸ್ಕ್ ಧರಿಸಿಲ್ಲ ಎಂದು ಆರೋಪಿಸಿ ಭಾರತೀಯ ಸೇನೆಯ ಯೋಧರೊಬ್ಬರನ್ನು ಜಾರ್ಖಂಡ್ ಪೊಲೀಸರು ಅಮಾನವೀಯವಾಗಿ ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ.
ಜಾರ್ಖಂಡ್ನ ಚಾತ್ರಾ ಜಿಲ್ಲೆಯ ಮಹೂರ್ಹಂದ್ನ ಕರ್ಮಾ ಚೌಕ್ನಲ್ಲಿ ಬುಧವಾರ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೊ ವೈರಲ್ ಆಗಿದ್ದು, ಥಳಿತಕ್ಕೊಳಗಾದ ಯೋಧನನ್ನು ಪವನ್ ಕುಮಾರ್ ಯಾದವ್ ಎಂದು ಗುರುತಿಸಲಾಗಿದೆ.
‘ಇನ್ನು ಈ ಘಟನೆಗೆ ಸಬಂಧಪಟ್ಟಂತೆ ಮೂವರುಪೊಲೀಸ್ ಸಿಬ್ಬಂಧಿಯನ್ನು ಅಮಾನತು ಮಾಡಲಾಗಿದೆ ಎಂದು ಚಾತ್ರಾ ಜಿಲ್ಲಾ ಎಸ್ಪಿ ರಾಕೇಶ್ ರಂಜನ್ ತಿಳಿಸಿದ್ದಾರೆ. ಮಾಸ್ಕ್ ಹಾಕದ್ದನ್ನು ನಮ್ಮ ಪೊಲೀಸರು ಪ್ರಶ್ನಿಸಿದ್ದಾಗ, ಅವರ ಮೇಲೆ ಯೋಧ ಹಲ್ಲೆ ಮಾಡಿದ್ದ. ಬಳಿಕ ನಮ್ಮ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ರಾಕೇಶ್ ಹೇಳಿದ್ದಾರೆ‘ ಎಂದು ಓಪಿಇಂಡಿಯಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ವೈರಲ್ ಆದ ವಿಡಿಯೊವನ್ನು ಟ್ವಿಟರ್ನಲ್ಲಿ ಪತ್ರಕರ್ತ ಮುಕೇಶ್ ರಂಜನ್ ಎನ್ನುವರು ಹಂಚಿಕೊಂಡಿದ್ದಾರೆ. ಪವನ್ ಕುಮಾರ್ ಯಾದವ್ ಅವರು ಜಾರ್ಖಂಡ್ನ ಹಜಾರಿಬಾಗ್ ಮೂಲದವರಾಗಿದ್ದು, ಜೋದ್ಪುರ್ದಲ್ಲಿ ಜಿಡಿಯಾಗಿ ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.