<p><strong>ನವದೆಹಲಿ</strong>: ಕೊರೊನಾ ವೈರಸ್ನ ಹೊಸ ತಳಿಗಳ ಕುರಿತು ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ರಚಿಸಿದ್ದ ವೈಜ್ಞಾನಿಕ ಸಲಹೆಗಾರರ ಸಮಿತಿಗೆ ಖ್ಯಾತ ವೈರಾಣು ತಜ್ಞ ಶಾಹಿದ್ ಜಮೀಲ್ ರಾಜೀನಾಮೆ ನೀಡಿದ್ದಾರೆ.</p>.<p>ಇಂಡಿಯನ್ ಸಾರ್ಸ್-ಕೋವಿಡ್-2 ಜಿನೊಮಿಕ್ಸ್ ಕನ್ಸೊರ್ಟಿಯಂನ(ಐಎನ್ಎಸ್ಎಸಿಒಜಿ) ವೈಜ್ಞಾನಿಕ ಸಲಹೆಗಾರರ ಸಮಿತಿಯ ಅಧ್ಯಕ್ಷರಾಗಿದ್ದ ಜಮೀಲ್ ಅವರ ರಾಜೀನಾಮೆಗೆ ಕಾರಣಗಳು ಬಹಿರಂಗಗೊಂಡಿಲ್ಲ.</p>.<p>'ರಾಜೀನಾಮೆಗೆ ಕಾರಣವನ್ನು ನೀಡಲು ನನಗೆ ಯಾವುದೇ ನಿರ್ಬಂಧಗಳಿಲ್ಲ' ಎಂದು ಜಮೀಲ್ ಅವರು ಸುದ್ದಿಸಂಸ್ಥೆ ರಾಯಿಟರ್ಸ್ಗೆ ಕಳುಹಿಸಿದ ಸಂದೇಶದಲ್ಲಿ ತಿಳಿಸಿದ್ದಾರೆ.</p>.<p>ಐಎನ್ಎಸ್ಎಸಿಒಜಿ ಮೇಲ್ವಿಚಾರಣೆ ಹೊತ್ತಿರುವ ಜೈವಿಕ ತಂತ್ರಜ್ಞಾನ ವಿಭಾಗದ ಕಾರ್ಯದರ್ಶಿ ರೇಣುಸ್ವರೂಪ್ ಅವರು ಇದಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.</p>.<p>ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಸಹ ಜಮೀಲ್ ಅವರ ರಾಜೀನಾಮೆಯ ವಿಚಾರವಾಗಿ ಮೌನ ತಾಳಿದ್ದಾರೆಂದು ರಾಯಿಟರ್ಸ್ ಹೇಳಿದೆ.</p>.<p>ಜಮೀಲ್ ಮತ್ತು ಕೇಂದ್ರ ಸರ್ಕಾರದ ನಡುವೆ ನೇರ ಭಿನ್ನಾಭಿಪ್ರಾಯಗಳು ಇದ್ದುದರ ಬಗ್ಗೆ ನನಗೆ ತಿಳಿದಿಲ್ಲ ಎಂದು ಐಎನ್ಎಸ್ಎಸಿಒಜಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.</p>.<p>ಜಮೀಲ್ ರಾಜೀನಾಮೆಯ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಅವರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.</p>.<p>'ಭಾರತದ ಅತ್ಯುತ್ತಮ ವೈರಾಣು ತಜ್ಞರಲ್ಲಿ ಒಬ್ಬರಾದ ಡಾ. ಶಾಹಿದ್ ಜಮೀಲ್ ಅವರ ರಾಜೀನಾಮೆ ನಿಜವಾಗಿಯೂ ಖೇದಕರ ವಿಚಾರವಾಗಿದೆ. ಯಾವುದೇ ಆತಂಕವಿಲ್ಲದೇ ತಮ್ಮ ಮನಸ್ಸಿನಲ್ಲಿ ಇದ್ದುದನ್ನು ಮುಕ್ತವಾಗಿ ಮಾತನಾಡಬಲ್ಲ ವೃತ್ತಿಪರರಿಗೆ ಮೋದಿ ಸರ್ಕಾರದಲ್ಲಿ ಜಾಗವಿಲ್ಲ' ಎಂದು ಜೈರಾಮ್ ರಮೇಶ್ ವಾಗ್ದಾಳಿ ನಡೆಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಕೊರೊನಾ ವೈರಸ್ನ ಹೊಸ ತಳಿಗಳ ಕುರಿತು ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ರಚಿಸಿದ್ದ ವೈಜ್ಞಾನಿಕ ಸಲಹೆಗಾರರ ಸಮಿತಿಗೆ ಖ್ಯಾತ ವೈರಾಣು ತಜ್ಞ ಶಾಹಿದ್ ಜಮೀಲ್ ರಾಜೀನಾಮೆ ನೀಡಿದ್ದಾರೆ.</p>.<p>ಇಂಡಿಯನ್ ಸಾರ್ಸ್-ಕೋವಿಡ್-2 ಜಿನೊಮಿಕ್ಸ್ ಕನ್ಸೊರ್ಟಿಯಂನ(ಐಎನ್ಎಸ್ಎಸಿಒಜಿ) ವೈಜ್ಞಾನಿಕ ಸಲಹೆಗಾರರ ಸಮಿತಿಯ ಅಧ್ಯಕ್ಷರಾಗಿದ್ದ ಜಮೀಲ್ ಅವರ ರಾಜೀನಾಮೆಗೆ ಕಾರಣಗಳು ಬಹಿರಂಗಗೊಂಡಿಲ್ಲ.</p>.<p>'ರಾಜೀನಾಮೆಗೆ ಕಾರಣವನ್ನು ನೀಡಲು ನನಗೆ ಯಾವುದೇ ನಿರ್ಬಂಧಗಳಿಲ್ಲ' ಎಂದು ಜಮೀಲ್ ಅವರು ಸುದ್ದಿಸಂಸ್ಥೆ ರಾಯಿಟರ್ಸ್ಗೆ ಕಳುಹಿಸಿದ ಸಂದೇಶದಲ್ಲಿ ತಿಳಿಸಿದ್ದಾರೆ.</p>.<p>ಐಎನ್ಎಸ್ಎಸಿಒಜಿ ಮೇಲ್ವಿಚಾರಣೆ ಹೊತ್ತಿರುವ ಜೈವಿಕ ತಂತ್ರಜ್ಞಾನ ವಿಭಾಗದ ಕಾರ್ಯದರ್ಶಿ ರೇಣುಸ್ವರೂಪ್ ಅವರು ಇದಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.</p>.<p>ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಸಹ ಜಮೀಲ್ ಅವರ ರಾಜೀನಾಮೆಯ ವಿಚಾರವಾಗಿ ಮೌನ ತಾಳಿದ್ದಾರೆಂದು ರಾಯಿಟರ್ಸ್ ಹೇಳಿದೆ.</p>.<p>ಜಮೀಲ್ ಮತ್ತು ಕೇಂದ್ರ ಸರ್ಕಾರದ ನಡುವೆ ನೇರ ಭಿನ್ನಾಭಿಪ್ರಾಯಗಳು ಇದ್ದುದರ ಬಗ್ಗೆ ನನಗೆ ತಿಳಿದಿಲ್ಲ ಎಂದು ಐಎನ್ಎಸ್ಎಸಿಒಜಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.</p>.<p>ಜಮೀಲ್ ರಾಜೀನಾಮೆಯ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಅವರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.</p>.<p>'ಭಾರತದ ಅತ್ಯುತ್ತಮ ವೈರಾಣು ತಜ್ಞರಲ್ಲಿ ಒಬ್ಬರಾದ ಡಾ. ಶಾಹಿದ್ ಜಮೀಲ್ ಅವರ ರಾಜೀನಾಮೆ ನಿಜವಾಗಿಯೂ ಖೇದಕರ ವಿಚಾರವಾಗಿದೆ. ಯಾವುದೇ ಆತಂಕವಿಲ್ಲದೇ ತಮ್ಮ ಮನಸ್ಸಿನಲ್ಲಿ ಇದ್ದುದನ್ನು ಮುಕ್ತವಾಗಿ ಮಾತನಾಡಬಲ್ಲ ವೃತ್ತಿಪರರಿಗೆ ಮೋದಿ ಸರ್ಕಾರದಲ್ಲಿ ಜಾಗವಿಲ್ಲ' ಎಂದು ಜೈರಾಮ್ ರಮೇಶ್ ವಾಗ್ದಾಳಿ ನಡೆಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>