<p class="title"><strong>ನವದೆಹಲಿ:</strong> ಈ ಬಾರಿ ದೀಪಾವಳಿಯಲ್ಲಿ ಶಬ್ದದ ಅಬ್ಬರ ಹೆಚ್ಚಾಗಿ ಇರುವುದಿಲ್ಲ. ಪರಿಸರ ಮಾಲಿನ್ಯ, ಪಟಾಕಿ ಮಾರಾಟದ ಮೇಲೆ ಹೇರಿರುವ ನಿರ್ಬಂಧ ಸೇರಿದಂತೆ ವಿವಿಧ ಕಾರಣಗಳಿಗೆ ಮೂರರಲ್ಲಿ ಎರಡು ಕುಟುಂಬ ಪಟಾಕಿ ಸುಡುವ ಚಿಂತನೆಯನ್ನೇ ಮಾಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ನಡೆದ ಸಮೀಕ್ಷೆಯಲ್ಲಿ ಈ ಅಂಶ ವ್ಯಕ್ತವಾಗಿದೆ.</p>.<p class="title">ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಕುಟುಂಬಗಳಲ್ಲಿ ಪಟಾಕಿಗಳ ಮಾರಾಟದ ಮೇಲೆ ಹೇರಿರುವ ಕೆಲವೊಂದು ನಿರ್ಬಂಧಕ್ಕೆ ಶೇ 42ರಷ್ಟು ಬೆಂಬಲ ವ್ಯಕ್ತಪಡಿಸಿದ್ದರೆ, ಶೇ 53ರಷ್ಟು ಕುಟುಂಬಗಳು ನಿರ್ಬಂಧದ ಪರವಾಗಿ ಇಲ್ಲ. ಸಮುದಾಯ ಜಾಲತಾಣ ‘ಲೋಕಲ್ ಸರ್ಕಲ್’ ದೇಶದ ವಿವಿಧ ಜಿಲ್ಲೆಗಳಲ್ಲಿ ಈ ಸಮೀಕ್ಷೆಯನ್ನು ನಡೆಸಿತ್ತು.</p>.<p>ಪಟಾಕಿಯನ್ನು ಸುಡುವುದರಿಂದ ಪರಿಸರ ಮಾಲಿನ್ಯವಾಗಲಿದೆ ಅಲ್ಲದೆ, ಇದೊಂದು ದುಂದುವೆಚ್ಚ ಎಂದು ಬಹುತೇಕ ಕುಟುಂಬಗಳು ಭಾವಿಸಿರುವುದು ಗಮನಾರ್ಹ ಎಂದು ಸಮೀಕ್ಷೆ ನಡೆಸಿದ ಸಂಸ್ಥೆಯು ತಿಳಿಸಿದೆ. ಸಮೀಕ್ಷೆಗಾಗಿ ದೇಶದ 371 ಜಿಲ್ಲೆಗಳಲ್ಲಿ ಒಟ್ಟು 28,000 ನಾಗರಿಕರ ಅಭಿಪ್ರಾಯಗಳನ್ನು ಪಡೆಯಲಾಗಿದೆ.</p>.<p>ಹಬ್ಬದ ಸಂಭ್ರಮ ಇಲ್ಲದಿರುವುದಕ್ಕೆ ಹೆಚ್ಚಿನ ಕುಟುಂಬಗಳು, ಕೋವಿಡ್ ಸಂದರ್ಭದಲ್ಲಿ ಕುಟುಂಬ ಸದಸ್ಯರು ಅಥವಾ ಆತ್ಮೀಯರನ್ನು ಕಳೆದುಕೊಂಡಿರುವುದು ಕಾರಣ. ಇಂಥ ಕುಟುಂಬಗಳ ಸಂಖ್ಯೆ ಶೇ 2 ರಿಂದ 3ರಷ್ಟು.</p>.<p>ನಿರ್ದಿಷ್ಟವಾಗಿ ಹೇಳುವುದಾದರೆ, ಪ್ರತಿ ಮೂರರಲ್ಲಿ ಎರಡು ಕುಟುಂಬಗಳು ಪಟಾಕಿ ಸುಡುವುದರ ವಿರುದ್ಧವಾಗಿವೆ. ಈ ಪ್ರಶ್ನೆಗೆ 9,363 ಪ್ರತಿಕ್ರಿಯೆಗಳು ದಾಖಲಾಗಿವೆ.</p>.<p>28 ಸಾವಿರ ಜನರು ಪ್ರತಿಕ್ರಿಯಿಸಿದ್ದ ಸಮೀಕ್ಷೆಯಲ್ಲಿ ಮೊದಲ ಪ್ರಶ್ನೆ, ಈ ದೀಪಾವಳಿಯಲ್ಲಿ ಪಟಾಕಿ ಸುಡುವ ಚಿಂತನೆ ಇದೆಯೇ ಎಂಬುದಾಗಿತ್ತು. ಶೇ 45ರಷ್ಟು ಜನರು ಇಲ್ಲ ಎಂದು, ಶೇ 15ರಷ್ಟು ಮಂದಿ ಸುಡುತ್ತೇವೆ ಎಂದು ಪ್ರತಿಕ್ರಿಯಿಸಿದರು. ಶೇ 11ರಷ್ಟು ಮಂದಿ ಶಬ್ದ ಮಾಲಿನ್ಯ ಉಂಟುಮಾಡುವ ಪಟಾಕಿ ಸುಡುವುದಿಲ್ಲ ಎಂದರು.</p>.<p>ನಗರ/ಜಿಲ್ಲೆಯಲ್ಲಿ ಪಟಾಕಿ ಮಾರಾಟದ ಮೇಲೆ ನಿರ್ಬಂಧ ಇರುವುದರಿಂದ ನಮಗೆ ಬೇರೆ ಆಯ್ಕೆಯೇ ಇಲ್ಲ ಎಂದು ಶೇ 10ರಷ್ಟು ಮಂದಿ ಉತ್ತರಿಸಿದರೆ, ಈ ಪ್ರಶ್ನೆಯೇ ಉದ್ಭವಿಸದು ಎಂದು ಶೇ 8ರಷ್ಟು ಮಂದಿ ಹೇಳಿದ್ದಾರೆ.</p>.<p>ಶೇ 42ರಷ್ಟು ಜನರು ಇದು ದುಂದು ವೆಚ್ಚ ಎಂದಿದ್ದರೆ, ಶೇ 53ರಷ್ಟು ಜನರು ಪರಿಸರ ಮಾಲಿನ್ಯಕ್ಕೆ ಪಟಾಕಿಯೊಂದೇ ಕಾರಣವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.</p>.<p>ಸಮೀಕ್ಷೆಗೆ ಶೇ 63ರಷ್ಟು ಪುರುಷರು, ಶೇ 37ರಷ್ಟು ಮಹಿಳೆಯರು ಪ್ರತಿಕ್ರಿಯಿಸಿದ್ದಾರೆ. ಇವರಲ್ಲಿ ಶೇ 41ರಷ್ಟು 1ನೇ ಹಂತದ ನಗರಗಳು, ಶೇ 33ರಷ್ಟು ಜನರು 2ನೇ ಹಂತ ಹಾಗೂ ಶೇ 26ರಷ್ಟು ಜನರು ಮೂರನೇ ಹಂತ ಹಾಗೂ ಗ್ರಾಮೀಣ ಭಾಗದವರಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ:</strong> ಈ ಬಾರಿ ದೀಪಾವಳಿಯಲ್ಲಿ ಶಬ್ದದ ಅಬ್ಬರ ಹೆಚ್ಚಾಗಿ ಇರುವುದಿಲ್ಲ. ಪರಿಸರ ಮಾಲಿನ್ಯ, ಪಟಾಕಿ ಮಾರಾಟದ ಮೇಲೆ ಹೇರಿರುವ ನಿರ್ಬಂಧ ಸೇರಿದಂತೆ ವಿವಿಧ ಕಾರಣಗಳಿಗೆ ಮೂರರಲ್ಲಿ ಎರಡು ಕುಟುಂಬ ಪಟಾಕಿ ಸುಡುವ ಚಿಂತನೆಯನ್ನೇ ಮಾಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ನಡೆದ ಸಮೀಕ್ಷೆಯಲ್ಲಿ ಈ ಅಂಶ ವ್ಯಕ್ತವಾಗಿದೆ.</p>.<p class="title">ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಕುಟುಂಬಗಳಲ್ಲಿ ಪಟಾಕಿಗಳ ಮಾರಾಟದ ಮೇಲೆ ಹೇರಿರುವ ಕೆಲವೊಂದು ನಿರ್ಬಂಧಕ್ಕೆ ಶೇ 42ರಷ್ಟು ಬೆಂಬಲ ವ್ಯಕ್ತಪಡಿಸಿದ್ದರೆ, ಶೇ 53ರಷ್ಟು ಕುಟುಂಬಗಳು ನಿರ್ಬಂಧದ ಪರವಾಗಿ ಇಲ್ಲ. ಸಮುದಾಯ ಜಾಲತಾಣ ‘ಲೋಕಲ್ ಸರ್ಕಲ್’ ದೇಶದ ವಿವಿಧ ಜಿಲ್ಲೆಗಳಲ್ಲಿ ಈ ಸಮೀಕ್ಷೆಯನ್ನು ನಡೆಸಿತ್ತು.</p>.<p>ಪಟಾಕಿಯನ್ನು ಸುಡುವುದರಿಂದ ಪರಿಸರ ಮಾಲಿನ್ಯವಾಗಲಿದೆ ಅಲ್ಲದೆ, ಇದೊಂದು ದುಂದುವೆಚ್ಚ ಎಂದು ಬಹುತೇಕ ಕುಟುಂಬಗಳು ಭಾವಿಸಿರುವುದು ಗಮನಾರ್ಹ ಎಂದು ಸಮೀಕ್ಷೆ ನಡೆಸಿದ ಸಂಸ್ಥೆಯು ತಿಳಿಸಿದೆ. ಸಮೀಕ್ಷೆಗಾಗಿ ದೇಶದ 371 ಜಿಲ್ಲೆಗಳಲ್ಲಿ ಒಟ್ಟು 28,000 ನಾಗರಿಕರ ಅಭಿಪ್ರಾಯಗಳನ್ನು ಪಡೆಯಲಾಗಿದೆ.</p>.<p>ಹಬ್ಬದ ಸಂಭ್ರಮ ಇಲ್ಲದಿರುವುದಕ್ಕೆ ಹೆಚ್ಚಿನ ಕುಟುಂಬಗಳು, ಕೋವಿಡ್ ಸಂದರ್ಭದಲ್ಲಿ ಕುಟುಂಬ ಸದಸ್ಯರು ಅಥವಾ ಆತ್ಮೀಯರನ್ನು ಕಳೆದುಕೊಂಡಿರುವುದು ಕಾರಣ. ಇಂಥ ಕುಟುಂಬಗಳ ಸಂಖ್ಯೆ ಶೇ 2 ರಿಂದ 3ರಷ್ಟು.</p>.<p>ನಿರ್ದಿಷ್ಟವಾಗಿ ಹೇಳುವುದಾದರೆ, ಪ್ರತಿ ಮೂರರಲ್ಲಿ ಎರಡು ಕುಟುಂಬಗಳು ಪಟಾಕಿ ಸುಡುವುದರ ವಿರುದ್ಧವಾಗಿವೆ. ಈ ಪ್ರಶ್ನೆಗೆ 9,363 ಪ್ರತಿಕ್ರಿಯೆಗಳು ದಾಖಲಾಗಿವೆ.</p>.<p>28 ಸಾವಿರ ಜನರು ಪ್ರತಿಕ್ರಿಯಿಸಿದ್ದ ಸಮೀಕ್ಷೆಯಲ್ಲಿ ಮೊದಲ ಪ್ರಶ್ನೆ, ಈ ದೀಪಾವಳಿಯಲ್ಲಿ ಪಟಾಕಿ ಸುಡುವ ಚಿಂತನೆ ಇದೆಯೇ ಎಂಬುದಾಗಿತ್ತು. ಶೇ 45ರಷ್ಟು ಜನರು ಇಲ್ಲ ಎಂದು, ಶೇ 15ರಷ್ಟು ಮಂದಿ ಸುಡುತ್ತೇವೆ ಎಂದು ಪ್ರತಿಕ್ರಿಯಿಸಿದರು. ಶೇ 11ರಷ್ಟು ಮಂದಿ ಶಬ್ದ ಮಾಲಿನ್ಯ ಉಂಟುಮಾಡುವ ಪಟಾಕಿ ಸುಡುವುದಿಲ್ಲ ಎಂದರು.</p>.<p>ನಗರ/ಜಿಲ್ಲೆಯಲ್ಲಿ ಪಟಾಕಿ ಮಾರಾಟದ ಮೇಲೆ ನಿರ್ಬಂಧ ಇರುವುದರಿಂದ ನಮಗೆ ಬೇರೆ ಆಯ್ಕೆಯೇ ಇಲ್ಲ ಎಂದು ಶೇ 10ರಷ್ಟು ಮಂದಿ ಉತ್ತರಿಸಿದರೆ, ಈ ಪ್ರಶ್ನೆಯೇ ಉದ್ಭವಿಸದು ಎಂದು ಶೇ 8ರಷ್ಟು ಮಂದಿ ಹೇಳಿದ್ದಾರೆ.</p>.<p>ಶೇ 42ರಷ್ಟು ಜನರು ಇದು ದುಂದು ವೆಚ್ಚ ಎಂದಿದ್ದರೆ, ಶೇ 53ರಷ್ಟು ಜನರು ಪರಿಸರ ಮಾಲಿನ್ಯಕ್ಕೆ ಪಟಾಕಿಯೊಂದೇ ಕಾರಣವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.</p>.<p>ಸಮೀಕ್ಷೆಗೆ ಶೇ 63ರಷ್ಟು ಪುರುಷರು, ಶೇ 37ರಷ್ಟು ಮಹಿಳೆಯರು ಪ್ರತಿಕ್ರಿಯಿಸಿದ್ದಾರೆ. ಇವರಲ್ಲಿ ಶೇ 41ರಷ್ಟು 1ನೇ ಹಂತದ ನಗರಗಳು, ಶೇ 33ರಷ್ಟು ಜನರು 2ನೇ ಹಂತ ಹಾಗೂ ಶೇ 26ರಷ್ಟು ಜನರು ಮೂರನೇ ಹಂತ ಹಾಗೂ ಗ್ರಾಮೀಣ ಭಾಗದವರಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>