‘ಕೋವಿಡ್ ವಿರುದ್ಧದ ಹೋರಾಟವು ರಾಷ್ಟ್ರೀಯ ವಿಚಾರ, ಇದನ್ನು ಪಕ್ಷ ರಾಜಕಾರಣದಿಂದ ಹೊರಗಿಡಬೇಕು. ಇಂಥ ಸಂದರ್ಭದಲ್ಲಿ ಕೇಂದ್ರವು ‘ರಾಜಧರ್ಮವನ್ನು’ ಪಾಲಿಸಬೇಕು. ಆದರೆ, ಬಿಜೆಪಿಯೇತರ ಪಕ್ಷಗಳ ಆಳ್ವಿಕೆ ಇರುವ ರಾಜ್ಯಗಳ ಬೇಡಿಕೆಗಳ ವಿಚಾರದಲ್ಲಿ ಕೇಂದ್ರವು ದಿವ್ಯ ಮೌನ ವಹಿಸುತ್ತಿದೆ. ಇತರ ಕೆಲವು ರಾಜ್ಯಗಳಿಗೆ ಆದ್ಯತೆಯ ಮೇರೆಗೆ ಸೌಲಭ್ಯಗಳು ಲಭಿಸುತ್ತಿವೆ ಎಂದು ಸೋನಿಯಾ ಆರೋಪಿಸಿದರು.