‘ಇತ್ತೀಚೆಗೆ ಎಲ್ಲೆಡೆ ನಕಾರಾತ್ಮಕ ಸುದ್ದಿಗಳನ್ನು ಹಂಚುವಂತಹ ಜನರು ಕಾಣುತ್ತಿದ್ದಾರೆ‘ ಎಂದು ಹೇಳಿದ ಮೋದಿಯವರು, ತಮ್ಮ ಹೇಳಿಕೆಯನ್ನು ಹೆಚ್ಚು ವಿಸ್ತರಿಸಲಿಲ್ಲ. ಜತೆಗೆ, ಯಾರ ಹೆಸರನ್ನೂ ಉಲ್ಲೇಖಿಸಲಿಲ್ಲ. ಆದರೆ, ಪ್ರಧಾನಿಯವರು ಕೃಷಿ ಮಸೂದೆಗಳನ್ನು ವಿರೋಧಿಸಿ ತಿಂಗಳಿನಿಂದ ನಡೆಯುತ್ತಿರುವ ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಈ ಮಾತು ಹೇಳಿರಬಹುದು ಎಂದು ಅಂದಾಜಿಸಲಾಗಿದೆ.