<p><strong>ನವದೆಹಲಿ:</strong> ಆ್ಯಂಟ್ರಿಕ್ಸ್-ದೇವಾಸ್ ಒಪ್ಪಂದದ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಆದೇಶವು ಕಾಂಗ್ರೆಸ್ನ ಅಧಿಕಾರ ದುರ್ಬಳಕೆಗೆ ಪುರಾವೆಯಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.</p>.<p>ಈ ಪ್ರಕರಣವು 2005ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ವಾಣಿಜ್ಯ ವಿಭಾಗ ಆ್ಯಂಟ್ರಿಕ್ಸ್ ಮತ್ತು ಬೆಂಗಳೂರು ಮೂಲದ ಸ್ಟಾರ್ಟಪ್ ದೇವಾಸ್ ಮಲ್ಟಿಮೀಡಿಯಾ ನಡುವೆ ಉಪಗ್ರಹ ಒಪ್ಪಂದಕ್ಕೆ ಸಂಬಂಧಿಸಿದ್ದಾಗಿದ್ದು, 2011ರಲ್ಲಿ ಒಪ್ಪಂದವನ್ನು ರದ್ದುಗೊಳಿಸಲಾಗಿತ್ತು.</p>.<p>ಆ್ಯಂಟ್ರಿಕ್ಸ್ ಮತ್ತು ದೇವಾಸ್ ನಡುವಿನ ದಶಕದ ಸುದೀರ್ಘ ಕಾನೂನು ಹೋರಾಟವು ಸೋಮವಾರ ದೇವಾಸ್ ಮಲ್ಟಿಮೀಡಿಯಾವನ್ನು ಮುಚ್ಚುವಂತೆ ಸುಪ್ರೀಂ ಕೋರ್ಟ್ ಆದೇಶಿಸುವುದರೊಂದಿಗೆ ಕೊನೆಗೊಂಡಿತ್ತು. ‘ಇದು ದೊಡ್ಡ ಪ್ರಮಾಣದ ವಂಚನೆಯ ಪ್ರಕರಣವಾಗಿದೆ’ಎಂದು ನ್ಯಾಯಾಲಯ ಹೇಳಿತ್ತು.</p>.<p>ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ‘ಇದು ಭಾರತದ ಜನರಿಗೆ ಮಾಡಿದ ವಂಚನೆ, ದೇಶದ ವಿರುದ್ಧದ ವಂಚನೆ. ಆ್ಯಂಟ್ರಿಕ್ಸ್- ದೇವಾಸ್ ಒಪ್ಪಂದದಲ್ಲಿ ವಂಚನೆ ಅಡಗಿರುವುದು ಸ್ಪಷ್ಟವಾಗಿತ್ತು. ಸುಪ್ರೀಂ ಕೋರ್ಟ್ನ ಆದೇಶವು ಕಾಂಗ್ರೆಸ್ನ ಅಧಿಕಾರ ದುರುಪಯೋಗಕ್ಕೆ ಪುರಾವೆಯಾಗಿದೆ’ಎಂದು ಅವರು ಕಿಡಿ ಕಾರಿದರು.</p>.<p>‘ಯುಪಿಎ ಇದನ್ನು ದುರಾಸೆಯಿಂದ ಮಾಡಿದೆ. ವಂಚಕರು ಪಾರಾಗದಂತೆ ನೋಡಿಕೊಳ್ಳಲು ನಮ್ಮ ಸರ್ಕಾರವು ಪ್ರತಿ ನ್ಯಾಯಾಲಯದಲ್ಲಿ ಹೋರಾಡುತ್ತಿದೆ. ನಾವು ತೆರಿಗೆದಾರರ ಹಣವನ್ನು ಉಳಿಸಲು ಹೋರಾಡುತ್ತಿದ್ದೇವೆ, ಇಲ್ಲದಿದ್ದರೆ ಆಂಟ್ರಿಕ್ಸ್-ದೇವಾಸ್ ವಂಚನೆಯ ಒಪ್ಪಂದಕ್ಕೆ ಹಣ ಹೋಗುತ್ತಿತ್ತು’ಎಂದು ಸೀತಾರಾಮನ್ ಹೇಳಿದರು.</p>.<p>2011ರಲ್ಲಿ ಒಪ್ಪಂದವನ್ನು ರದ್ದುಗೊಳಿಸಿ ಮಧ್ಯಸ್ಥಿಕೆ ಪ್ರಾರಂಭವಾದಾಗ, ಸರ್ಕಾರವನ್ನು ರಕ್ಷಿಸಲು ಮಧ್ಯಸ್ಥಿಕೆಗಾರನನ್ನು ನೇಮಿಸುವಂತೆ ಕೇಳಲಾಗಿತ್ತು. ಆದರೆ, ಸರ್ಕಾರ ಮಧ್ಯಸ್ಥಿಕೆಗಾರನನ್ನು ನೇಮಕ ಮಾಡಲಿಲ್ಲ ಎಂದು ಅವರು ಆರೋಪಿಸಿದರು.</p>.<p>2005ರ ಒಪ್ಪಂದದ ಅಡಿಯಲ್ಲಿ, ಆ್ಯಂಟ್ರಿಕ್ಸ್ ನಿರ್ಧರಿಸಿದ್ದ ಎರಡು ಉಪಗ್ರಹಗಳನ್ನು ನಿರ್ಮಿಸುವ, ಉಡಾವಣೆ ಮಾಡುವ ಮತ್ತು ನಿರ್ವಹಿಸುವ ಯೋಜನೆಯಡಿ ಉಪಗ್ರಹ ಟ್ರಾನ್ಸ್ಪಾಂಡರ್ ಸಾಮರ್ಥ್ಯದ ಶೇಕಡ 90 ರಷ್ಟನ್ನು ದೇವಾಸ್ಗೆ ಗುತ್ತಿಗೆಗೆ ನೀಡಬೇಕಿತ್ತು, ಈ ಮೂಲಕ ದೇಶದಲ್ಲಿ ಹೈಬ್ರಿಡ್ ಉಪಗ್ರಹ ಮತ್ತು ಭೂಮಂಡಲದ ಸಂವಹನ ಸೇವೆಗಳನ್ನು ಒದಗಿಸಲು ಯೋಜಿಸಲಾಗಿತ್ತು.</p>.<p>ಒಪ್ಪಂದವು ₹ 1,000 ಕೋಟಿ ಮೌಲ್ಯದ 70 ಎಂಎಚ್ಜೆಡ್ ಎಸ್-ಬ್ಯಾಂಡ್ ಸ್ಪೆಕ್ಟ್ರಂ ಅನ್ನು ಸಹ ಒಳಗೊಂಡಿತ್ತು. ಈ ಸ್ಪೆಕ್ಟ್ರಮ್ ಅನ್ನು ಭದ್ರತಾ ಪಡೆಗಳು ಮತ್ತು ಸರ್ಕಾರ ನಡೆಸುವ ಟೆಲಿಕಾಂ ಕಂಪನಿಗಳ ಬಳಕೆಗೆ ನಿರ್ಬಂಧಿಸಲಾಗಿದೆ.</p>.<p>ಭದ್ರತಾ ಕಾರಣಗಳನ್ನು ಮುಂದಿಟ್ಟು ಅಂದಿನ ಯುಪಿಎ ಸರ್ಕಾರ ಒಪ್ಪಂದವನ್ನು ರದ್ದುಗೊಳಿಸಿತ್ತು. 2016 ರಲ್ಲಿ, ದೇವಾಸ್ಗೆ ₹ 578 ಕೋಟಿ ಲಾಭವನ್ನು ಒದಗಿಸಿದ ಆರೋಪದಲ್ಲಿ ಇಸ್ರೋ ಮಾಜಿ ಮುಖ್ಯಸ್ಥ ಜಿ ಮಾಧವನ್ ನಾಯರ್ ಮತ್ತು ಇತರ ಅಧಿಕಾರಿಗಳ ವಿರುದ್ಧ ಸಿಬಿಐ ಆರೋಪ ಹೊರಿಸಿತ್ತು.</p>.<p>ದೇವಾಸ್ನ ವಿದೇಶಿ ಹೂಡಿಕೆದಾರರು ಅಂತರಾಷ್ಟ್ರೀಯ ನ್ಯಾಯಾಲಯಗಳ ಮೊರೆ ಹೋಗಿದ್ದರು. 2020ರಲ್ಲಿ,ಆಂಟ್ರಿಕ್ಸ್ $1.2 ಬಿಲಿಯನ್ ಪರಿಹಾರವನ್ನು ದೇವಾಸ್ಗೆ ಪಾವತಿಸಲು ಇಂಟರ್ ನ್ಯಾಷನಲ್ ಚೇಂಬರ್ ಆಫ್ ಕಾಮರ್ಸ್ ನಿರ್ದೇಶಿಸಿತು. ಸುಪ್ರೀಂ ಕೋರ್ಟ್ ಈ ಆದೇಶವನ್ನು ತಡೆಹಿಡಿಯಿತು.</p>.<p>2021ರಲ್ಲಿ, ಕಂಪನಿಗಳ ಕಾಯಿದೆ ಅಡಿಯಲ್ಲಿ ದೇವಾಸ್ ಕಂಪನಿಯನ್ನು ಮುಚ್ಚಲು ಅರ್ಜಿಯನ್ನು ಸಲ್ಲಿಸುವಂತೆ ಸರ್ಕಾರವು ಆಂಟ್ರಿಕ್ಸ್ಗೆ ನಿರ್ದೇಶನ ನೀಡಿತ್ತು. ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯು ದೇವಾಸ್ ಮಲ್ಟಿಮೀಡಿಯಾವನ್ನು ಮುಚ್ಚುವ ಕುರಿತಾದ ಆದೇಶವನ್ನು ಪುರಸ್ಕರಿಸಿತ್ತು. ನಿನ್ನೆ ಸುಪ್ರೀಂ ಕೋರ್ಟ್ ಸಹ ಈ ಆದೇಶವನ್ನು ಎತ್ತಿ ಹಿಡಿದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಆ್ಯಂಟ್ರಿಕ್ಸ್-ದೇವಾಸ್ ಒಪ್ಪಂದದ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಆದೇಶವು ಕಾಂಗ್ರೆಸ್ನ ಅಧಿಕಾರ ದುರ್ಬಳಕೆಗೆ ಪುರಾವೆಯಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.</p>.<p>ಈ ಪ್ರಕರಣವು 2005ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ವಾಣಿಜ್ಯ ವಿಭಾಗ ಆ್ಯಂಟ್ರಿಕ್ಸ್ ಮತ್ತು ಬೆಂಗಳೂರು ಮೂಲದ ಸ್ಟಾರ್ಟಪ್ ದೇವಾಸ್ ಮಲ್ಟಿಮೀಡಿಯಾ ನಡುವೆ ಉಪಗ್ರಹ ಒಪ್ಪಂದಕ್ಕೆ ಸಂಬಂಧಿಸಿದ್ದಾಗಿದ್ದು, 2011ರಲ್ಲಿ ಒಪ್ಪಂದವನ್ನು ರದ್ದುಗೊಳಿಸಲಾಗಿತ್ತು.</p>.<p>ಆ್ಯಂಟ್ರಿಕ್ಸ್ ಮತ್ತು ದೇವಾಸ್ ನಡುವಿನ ದಶಕದ ಸುದೀರ್ಘ ಕಾನೂನು ಹೋರಾಟವು ಸೋಮವಾರ ದೇವಾಸ್ ಮಲ್ಟಿಮೀಡಿಯಾವನ್ನು ಮುಚ್ಚುವಂತೆ ಸುಪ್ರೀಂ ಕೋರ್ಟ್ ಆದೇಶಿಸುವುದರೊಂದಿಗೆ ಕೊನೆಗೊಂಡಿತ್ತು. ‘ಇದು ದೊಡ್ಡ ಪ್ರಮಾಣದ ವಂಚನೆಯ ಪ್ರಕರಣವಾಗಿದೆ’ಎಂದು ನ್ಯಾಯಾಲಯ ಹೇಳಿತ್ತು.</p>.<p>ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ‘ಇದು ಭಾರತದ ಜನರಿಗೆ ಮಾಡಿದ ವಂಚನೆ, ದೇಶದ ವಿರುದ್ಧದ ವಂಚನೆ. ಆ್ಯಂಟ್ರಿಕ್ಸ್- ದೇವಾಸ್ ಒಪ್ಪಂದದಲ್ಲಿ ವಂಚನೆ ಅಡಗಿರುವುದು ಸ್ಪಷ್ಟವಾಗಿತ್ತು. ಸುಪ್ರೀಂ ಕೋರ್ಟ್ನ ಆದೇಶವು ಕಾಂಗ್ರೆಸ್ನ ಅಧಿಕಾರ ದುರುಪಯೋಗಕ್ಕೆ ಪುರಾವೆಯಾಗಿದೆ’ಎಂದು ಅವರು ಕಿಡಿ ಕಾರಿದರು.</p>.<p>‘ಯುಪಿಎ ಇದನ್ನು ದುರಾಸೆಯಿಂದ ಮಾಡಿದೆ. ವಂಚಕರು ಪಾರಾಗದಂತೆ ನೋಡಿಕೊಳ್ಳಲು ನಮ್ಮ ಸರ್ಕಾರವು ಪ್ರತಿ ನ್ಯಾಯಾಲಯದಲ್ಲಿ ಹೋರಾಡುತ್ತಿದೆ. ನಾವು ತೆರಿಗೆದಾರರ ಹಣವನ್ನು ಉಳಿಸಲು ಹೋರಾಡುತ್ತಿದ್ದೇವೆ, ಇಲ್ಲದಿದ್ದರೆ ಆಂಟ್ರಿಕ್ಸ್-ದೇವಾಸ್ ವಂಚನೆಯ ಒಪ್ಪಂದಕ್ಕೆ ಹಣ ಹೋಗುತ್ತಿತ್ತು’ಎಂದು ಸೀತಾರಾಮನ್ ಹೇಳಿದರು.</p>.<p>2011ರಲ್ಲಿ ಒಪ್ಪಂದವನ್ನು ರದ್ದುಗೊಳಿಸಿ ಮಧ್ಯಸ್ಥಿಕೆ ಪ್ರಾರಂಭವಾದಾಗ, ಸರ್ಕಾರವನ್ನು ರಕ್ಷಿಸಲು ಮಧ್ಯಸ್ಥಿಕೆಗಾರನನ್ನು ನೇಮಿಸುವಂತೆ ಕೇಳಲಾಗಿತ್ತು. ಆದರೆ, ಸರ್ಕಾರ ಮಧ್ಯಸ್ಥಿಕೆಗಾರನನ್ನು ನೇಮಕ ಮಾಡಲಿಲ್ಲ ಎಂದು ಅವರು ಆರೋಪಿಸಿದರು.</p>.<p>2005ರ ಒಪ್ಪಂದದ ಅಡಿಯಲ್ಲಿ, ಆ್ಯಂಟ್ರಿಕ್ಸ್ ನಿರ್ಧರಿಸಿದ್ದ ಎರಡು ಉಪಗ್ರಹಗಳನ್ನು ನಿರ್ಮಿಸುವ, ಉಡಾವಣೆ ಮಾಡುವ ಮತ್ತು ನಿರ್ವಹಿಸುವ ಯೋಜನೆಯಡಿ ಉಪಗ್ರಹ ಟ್ರಾನ್ಸ್ಪಾಂಡರ್ ಸಾಮರ್ಥ್ಯದ ಶೇಕಡ 90 ರಷ್ಟನ್ನು ದೇವಾಸ್ಗೆ ಗುತ್ತಿಗೆಗೆ ನೀಡಬೇಕಿತ್ತು, ಈ ಮೂಲಕ ದೇಶದಲ್ಲಿ ಹೈಬ್ರಿಡ್ ಉಪಗ್ರಹ ಮತ್ತು ಭೂಮಂಡಲದ ಸಂವಹನ ಸೇವೆಗಳನ್ನು ಒದಗಿಸಲು ಯೋಜಿಸಲಾಗಿತ್ತು.</p>.<p>ಒಪ್ಪಂದವು ₹ 1,000 ಕೋಟಿ ಮೌಲ್ಯದ 70 ಎಂಎಚ್ಜೆಡ್ ಎಸ್-ಬ್ಯಾಂಡ್ ಸ್ಪೆಕ್ಟ್ರಂ ಅನ್ನು ಸಹ ಒಳಗೊಂಡಿತ್ತು. ಈ ಸ್ಪೆಕ್ಟ್ರಮ್ ಅನ್ನು ಭದ್ರತಾ ಪಡೆಗಳು ಮತ್ತು ಸರ್ಕಾರ ನಡೆಸುವ ಟೆಲಿಕಾಂ ಕಂಪನಿಗಳ ಬಳಕೆಗೆ ನಿರ್ಬಂಧಿಸಲಾಗಿದೆ.</p>.<p>ಭದ್ರತಾ ಕಾರಣಗಳನ್ನು ಮುಂದಿಟ್ಟು ಅಂದಿನ ಯುಪಿಎ ಸರ್ಕಾರ ಒಪ್ಪಂದವನ್ನು ರದ್ದುಗೊಳಿಸಿತ್ತು. 2016 ರಲ್ಲಿ, ದೇವಾಸ್ಗೆ ₹ 578 ಕೋಟಿ ಲಾಭವನ್ನು ಒದಗಿಸಿದ ಆರೋಪದಲ್ಲಿ ಇಸ್ರೋ ಮಾಜಿ ಮುಖ್ಯಸ್ಥ ಜಿ ಮಾಧವನ್ ನಾಯರ್ ಮತ್ತು ಇತರ ಅಧಿಕಾರಿಗಳ ವಿರುದ್ಧ ಸಿಬಿಐ ಆರೋಪ ಹೊರಿಸಿತ್ತು.</p>.<p>ದೇವಾಸ್ನ ವಿದೇಶಿ ಹೂಡಿಕೆದಾರರು ಅಂತರಾಷ್ಟ್ರೀಯ ನ್ಯಾಯಾಲಯಗಳ ಮೊರೆ ಹೋಗಿದ್ದರು. 2020ರಲ್ಲಿ,ಆಂಟ್ರಿಕ್ಸ್ $1.2 ಬಿಲಿಯನ್ ಪರಿಹಾರವನ್ನು ದೇವಾಸ್ಗೆ ಪಾವತಿಸಲು ಇಂಟರ್ ನ್ಯಾಷನಲ್ ಚೇಂಬರ್ ಆಫ್ ಕಾಮರ್ಸ್ ನಿರ್ದೇಶಿಸಿತು. ಸುಪ್ರೀಂ ಕೋರ್ಟ್ ಈ ಆದೇಶವನ್ನು ತಡೆಹಿಡಿಯಿತು.</p>.<p>2021ರಲ್ಲಿ, ಕಂಪನಿಗಳ ಕಾಯಿದೆ ಅಡಿಯಲ್ಲಿ ದೇವಾಸ್ ಕಂಪನಿಯನ್ನು ಮುಚ್ಚಲು ಅರ್ಜಿಯನ್ನು ಸಲ್ಲಿಸುವಂತೆ ಸರ್ಕಾರವು ಆಂಟ್ರಿಕ್ಸ್ಗೆ ನಿರ್ದೇಶನ ನೀಡಿತ್ತು. ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯು ದೇವಾಸ್ ಮಲ್ಟಿಮೀಡಿಯಾವನ್ನು ಮುಚ್ಚುವ ಕುರಿತಾದ ಆದೇಶವನ್ನು ಪುರಸ್ಕರಿಸಿತ್ತು. ನಿನ್ನೆ ಸುಪ್ರೀಂ ಕೋರ್ಟ್ ಸಹ ಈ ಆದೇಶವನ್ನು ಎತ್ತಿ ಹಿಡಿದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>