ಅರ್ಜಿಯ ನಿರ್ವಹಣೆ ಕುರಿತು ವಕೀಲರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪೀಠ, 'ಅಷ್ಟು ತಾಂತ್ರಿಕವಾಗಿ ಇರಬೇಡಿ. ಒಂದು ಕಾರಣದಿಂದಾಗಿ ಹಾಗೂ ಪರಿಹಾರ ಕಂಡುಕೊಳ್ಳುವ ಸಲುವಾಗಿ ನಾವು ಇಲ್ಲಿದ್ದೇವೆ. ಸರಿಪಡಿಸುವ ಉದ್ದೇಶದಿಂದ ಸೇರಿದ್ದೇವೆ. ನಿಮ್ಮನ್ನು ವಿರೋಧಿಸುತ್ತಿದ್ದೇವೆ ಎಂದು ಭಾವಿಸಬೇಡಿ. ಇದು ಗಂಭೀರವಾದ ವಿಚಾರ. ಅಂತಿಮವಾಗಿ ಈ ವಿಚಾರವು (ಬಲವಂತದ ಮತಾಂತರವು) ನಮ್ಮ ಸಂವಿಧಾನಕ್ಕೆ ವಿರೋಧಿಯಾದದ್ದು. ಭಾರತದಲ್ಲಿ ಬದುಕುವವರು ಈ ದೇಶದ ಸಂಸ್ಕೃತಿಗೆ ಅನುಸಾರವಾಗಿ ನಡೆಯಬೇಕು' ಎಂದು ಹೇಳಿದೆ.