<p><strong>ಕೋಯಿಕ್ಕೋಡ್:</strong> ಚೆನ್ನೈ- ಮಂಗಳೂರು ರೈಲಿನಲ್ಲಿ ಆಗಮಿಸುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರ ಬಳಿ ಶುಕ್ರವಾರ ಭಾರಿ ಪ್ರಮಾಣದಲ್ಲಿ ಸ್ಪೋಟಕಗಳು ಪತ್ತೆಯಾಗಿದ್ದು ರೈಲ್ವೆ ಸಂರಕ್ಷಣಾ ಪಡೆ ಇವನ್ನು ವಶಪಡಿಸಿಕೊಂಡಿದೆ.</p>.<p>ಮುಂಬರುವ ಕೇರಳ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಲಾಗಿದೆ. ವಿಭಾಗೀಯ ಭದ್ರತಾ ಆಯುಕ್ತ ಜಿತಿನ್ ಬಿ ರಾಜ್ ಅವರ ನೇತೃತ್ವದ ರೈಲ್ವೆ ಸಂರಕ್ಷಣಾ ಪಡೆಯು (ಆರ್ಪಿಎಫ್) ಶೋಧ ಕಾರ್ಯಾಚರಣೆ ನಡೆಸಿದೆ. ಈ ವೇಳೆ ಅವರಿಗೆ ಮಹಿಳಾ ಪ್ರಯಣಿಕರೊಬ್ಬರ ಬಳಿ ಸ್ಫೋಟಕಗಳು ಸಿಕ್ಕಿವೆ.</p>.<p>‘ತಿರುವಣ್ಣಮಲೈ ನಿವಾಸಿ ರಮಣಿ ಎಂಬಾಕೆಚೆನ್ನೈ–ಮಂಗಳೂರು ಸೂಪರ್ಫಾಸ್ಟ್ ರೈಲಿನ ಮೂಲಕ ಚೆನ್ನೈನಿಂದ ಕಣ್ಣೂರು ಜಿಲ್ಲೆಯ ತಲಶ್ಶೇರಿಗೆ ಶುಕ್ರವಾರ ಬಂದಿದ್ದಾರೆ. ಈಕೆ ತನ್ನ ಸೀಟಿನ ಕೆಳಗೆ 117 ಜಿಲೆಟಿನ್ ಕಡ್ಡಿಗಳು ಮತ್ತು 300 ಸ್ಪೋಟಕ ಸಾಧನಗಳನ್ನು ಅಡಗಿಸಿಕೊಂಡಿದ್ದರು’ ಎಂದು ಆರ್ಪಿಎಫ್ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.</p>.<p>‘ರಮಣಿಯನ್ನು ಬಂಧಿಸಲಾಗಿದೆ. ಪ್ರಕರಣ ದಾಖಲಿಸಿ, ತನಿಖೆಯನ್ನು ಪ್ರಾರಂಭಿಸಿದ್ಧೇವೆ’ ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಯಿಕ್ಕೋಡ್:</strong> ಚೆನ್ನೈ- ಮಂಗಳೂರು ರೈಲಿನಲ್ಲಿ ಆಗಮಿಸುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರ ಬಳಿ ಶುಕ್ರವಾರ ಭಾರಿ ಪ್ರಮಾಣದಲ್ಲಿ ಸ್ಪೋಟಕಗಳು ಪತ್ತೆಯಾಗಿದ್ದು ರೈಲ್ವೆ ಸಂರಕ್ಷಣಾ ಪಡೆ ಇವನ್ನು ವಶಪಡಿಸಿಕೊಂಡಿದೆ.</p>.<p>ಮುಂಬರುವ ಕೇರಳ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಲಾಗಿದೆ. ವಿಭಾಗೀಯ ಭದ್ರತಾ ಆಯುಕ್ತ ಜಿತಿನ್ ಬಿ ರಾಜ್ ಅವರ ನೇತೃತ್ವದ ರೈಲ್ವೆ ಸಂರಕ್ಷಣಾ ಪಡೆಯು (ಆರ್ಪಿಎಫ್) ಶೋಧ ಕಾರ್ಯಾಚರಣೆ ನಡೆಸಿದೆ. ಈ ವೇಳೆ ಅವರಿಗೆ ಮಹಿಳಾ ಪ್ರಯಣಿಕರೊಬ್ಬರ ಬಳಿ ಸ್ಫೋಟಕಗಳು ಸಿಕ್ಕಿವೆ.</p>.<p>‘ತಿರುವಣ್ಣಮಲೈ ನಿವಾಸಿ ರಮಣಿ ಎಂಬಾಕೆಚೆನ್ನೈ–ಮಂಗಳೂರು ಸೂಪರ್ಫಾಸ್ಟ್ ರೈಲಿನ ಮೂಲಕ ಚೆನ್ನೈನಿಂದ ಕಣ್ಣೂರು ಜಿಲ್ಲೆಯ ತಲಶ್ಶೇರಿಗೆ ಶುಕ್ರವಾರ ಬಂದಿದ್ದಾರೆ. ಈಕೆ ತನ್ನ ಸೀಟಿನ ಕೆಳಗೆ 117 ಜಿಲೆಟಿನ್ ಕಡ್ಡಿಗಳು ಮತ್ತು 300 ಸ್ಪೋಟಕ ಸಾಧನಗಳನ್ನು ಅಡಗಿಸಿಕೊಂಡಿದ್ದರು’ ಎಂದು ಆರ್ಪಿಎಫ್ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.</p>.<p>‘ರಮಣಿಯನ್ನು ಬಂಧಿಸಲಾಗಿದೆ. ಪ್ರಕರಣ ದಾಖಲಿಸಿ, ತನಿಖೆಯನ್ನು ಪ್ರಾರಂಭಿಸಿದ್ಧೇವೆ’ ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>