6ರಂದು ಕರಾಳ ದಿನ:ರೈತರ ಪ್ರತಿಭಟನೆ ಆರಂಭವಾಗಿ ಶನಿವಾರಕ್ಕೆ (ಮಾರ್ಚ್ 6) ನೂರು ದಿನಗಳಾಗಲಿವೆ. ಅಂದು ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಕುಂಡಲಿ–ಮನೇಸರ್–ಪಲ್ವಾಲ್ ಎಕ್ಸ್ಪ್ರೆಸ್ವೇಯನ್ನು ಬಂದ್ ಮಾಡಲಾಗುವುದು. ಆ ದಿನವನ್ನು ಕರಾಳ ದಿನ ಎಂದು ಆಚರಿಸಲಾಗುವುದು. ದೇಶದಾ
ದ್ಯಂತ ರೈತರು ಕಪ್ಪು ಧ್ವಜ ಹಾರಿಸಲಿದ್ದಾರೆ, ಕಪ್ಪು ಪಟ್ಟಿ ಮತ್ತು ಕಪ್ಪು ಬಟ್ಟೆ ಧರಿಸಲಿದ್ದಾರೆ. ಇದೇ 8ರಂದು ಮಹಿಳಾ ಕೃಷಿ ದಿನ ಆಚರಿಸಲಾಗುವುದು ಎಂದು ರೈತ ಮುಖಂಡರು ತಿಳಿಸಿದ್ದಾರೆ.